ಆ್ಯಪ್ನಗರ

ಸಮಾನತೆ ಆಧರಿಸಿ ಭಾರತದ ಜತೆ ಮಾತುಕತೆ ಪಾಕ್‌ ಇಂಗಿತ

ಮೋದಿ ವಾಗ್ದಾಳಿ ನಂತರ ಪ್ರತಿಕ್ರಿಯಿಸಿದ ಪಾಕ್‌ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ, ಸದ್ಯ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಶಮನ ವಿಚಾರಕ್ಕೆ ಮುಂದಡಿ ಇರಿಸುವುದು ಭಾರತಕ್ಕೆ ಬಿಟ್ಟಿದೆ ಎಂದಿದ್ದಾರೆ.

PTI 16 Jun 2019, 5:00 am
ಬಿಷ್ಕೆಕ್‌: ಎಸ್‌ಸಿಒ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳನ್ನು ಹೊಣೆಯಾಗಿಸಿ ಎಂದು ಪಾಕ್‌ ವಿರುದ್ಧ ಇಮ್ರಾನ್‌ ಖಾನ್‌ ಎದುರೇ ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಹಿನ್ನೆಲೆಯಲ್ಲಿ ಸಮಾನತೆ ಆಧಾರದ ಮೇಲೆ ಘನತೆಯುಕ್ತ ರೀತಿಯಲ್ಲಿ ಚರ್ಚೆ ನಡೆಸಲು ಬಯಸುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
Vijaya Karnataka Web shah-mehmood


ಮೋದಿ ವಾಗ್ದಾಳಿ ನಂತರ ಪ್ರತಿಕ್ರಿಯಿಸಿದ ಪಾಕ್‌ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ, ಸದ್ಯ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಶಮನ ವಿಚಾರಕ್ಕೆ ಮುಂದಡಿ ಇರಿಸುವುದು ಭಾರತಕ್ಕೆ ಬಿಟ್ಟಿದೆ ಎಂದಿದ್ದಾರೆ.
ಎಸ್‌ಸಿಒ ಶೃಂಗದಲ್ಲಿ ಮೋದಿ ಹಾಗೂ ಇಮ್ರಾನ್‌ ಉಭಯ ಕುಶಲೋಪರಿ ವ್ಯಕ್ತಪಡಿಸಿ ಹಸ್ತಲಾಘವ ಕೂಡ ನೀಡಿದರು. ಉಭಯ ನಾಯಕರ ನಡುವೆ ಚರ್ಚೆ ಕೂಡ ನಡೆಯಿತು. ಆದರೆ ಭಾರತ ಸರಕಾರ ಚುನಾವಣಾ ಮನಸ್ಥಿತಿಯಲ್ಲಿಯೇ ಇದೆ. ವೋಟ್‌ ಬ್ಯಾಂಕ್‌ ಕಾಪಾಡಿಕೊಳ್ಳುವ ಮನೋಭಾವ ಅವರಲ್ಲಿದೆ. ಆದರೆ ಪಾಕ್‌ ಏನನ್ನು ತಿಳಿಸಬೇಕೊ ಅದನ್ನು ತಿಳಿಸಿಯಾಗಿದೆ ಎಂದು ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಖುರೇಶಿ ಸ್ಪಷ್ಟನೆ ನೀಡಿದ್ದಾರೆ.

ಪುಲ್ವಾಮ ದಾಳಿ ಬಳಿಕ ಹದಗೆಟ್ಟಿರುವ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಪಾಕಿಸ್ತಾನ ಪರೋಕ್ಷವಾಗಿ ಯತ್ನಿಸುತ್ತಲೇ ಇದೆ. ಖುದ್ದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಪತ್ರ ಬರೆದು ಕಾಶ್ಮೀರ ಸೇರಿದಂತೆ ಅನೇಕ ಬಿಕ್ಕಟ್ಟುಗಳ ಶಮನಕ್ಕೆ ಚರ್ಚೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಯಾವುದೇ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ