ಆ್ಯಪ್ನಗರ

ಭಾರತೀಯಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿದ ಪಾಕಿಸ್ತಾನಿ

ಪಾಪಕೂಪದಿಂದ ತನಗೆ ಸ್ವತಂತ್ರ ನೀಡಿದ ಆ ಪಾಕಿಸ್ತಾನಿ ವ್ಯಕ್ತಿ ಮನದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಾಳೆ.

Vijaya Karnataka Web 15 Aug 2017, 5:07 pm
ಹೊಸದಿಲ್ಲಿ: ಸಬೀನಾ (ಹೆಸರು ಬದಲಾಯಿಸಲಾಗಿದೆ) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ, ತನ್ನ ಎರಡು ವರ್ಷದ ಮಗನನ್ನುಓಡಿ ಹೋಗಿ ತಬ್ಬಿಕೊಂಡು ಅತ್ತು ಬಿಡುತ್ತಾಳೆ.
Vijaya Karnataka Web pakistan cleric to thank for freedom woman relives horror
ಭಾರತೀಯಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿದ ಪಾಕಿಸ್ತಾನಿ


ಪಾಪಕೂಪದಿಂದ ತನಗೆ ಸ್ವತಂತ್ರ ನೀಡಿದ ಆ ಪಾಕಿಸ್ತಾನಿ ವ್ಯಕ್ತಿ ಮನದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಾಳೆ.

ಭಾರತದಿಂದ ಕೆಲಸಕ್ಕೆಂದು ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಿ ಹಾಕಿಕೊಂಡ ಆಕೆ ಮತ್ತೆಂದೂ ತನ್ನ ಕುಟುಂಬದವರನ್ನು ಸೇರುತ್ತೇನೆ ಅಂದುಕೊಂಡಿರಲಿಲ್ಲ. ಆದರೆ ಈ ಭಾರತೀಯ ಹೆಣ್ಣು ಮಗಳ ರಕ್ಷಣೆ ಮಾಡಿದ್ದು ಒಬ್ಬ ಪಾಕಿಸ್ತಾನಿ ಸಹೋದರ!

ಸಬೀನಾಳ ನರಕ ಜೀವನ ಪ್ರಾರಂಭವಾದದ್ದು ಮೇ ತಿಂಗಳಿನಿಂದ. ಗಂಡನ ಸಂಬಂಧಿ ಮುನ್ನಿ ವಿದೇಶದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಆಕೆಯನ್ನು ಮಲೇಷ್ಯಾದ ಕೌಲಾಲಂಪೂರ್‌ಗೆ ಕರೆದುಕೊಂಡು ಹೋಗ್ತಾನೆ.

ಆದರೆ ಅಲ್ಲಿ ಆಕೆಯನ್ನು ಒಬ್ಬ ವ್ಯಕ್ತಿಗೆ ಮಾರುತ್ತಾನೆ. ಆಕೆಯನ್ನು ಕೊಂಡುಕೊಂಡ ವ್ಯಕ್ತಿ ಹಾಗೂ ಆತನ ಫ್ರೆಂಡ್‌ ಈಕೆಯ ಮೇಲೆ ಗ್ಯಾಂಗ್‌ ರೇಪ್ ಮಾಡುತ್ತಾರೆ. ಅಲ್ಲಿಂದ ಆಕೆಯ ನರಕ ಜೀವನ ಪ್ರಾರಂಭವಾಗುತ್ತದೆ.

ಹೀಗಿರುವಾಗ ಒಂದು ದಿನ ಆಕೆಗೆ ಈ ಪಾಕಿಸ್ತಾನಿ ವ್ಯಕ್ತಿ ಸಿಗುತ್ತಾರೆ. ಆತನಿಗೆ ತನ್ನ ಕತೆ ಹೇಳಿದಾಗ ಸಮಧಾನದಿಂದ ಕೇಳಿದ ಆತ ಕೌಲಾಲಂಪೂರ್‌ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ಮುನ್ನಿ ಹಾಗೂ ಆತನಿಗೆ ಮಾನವ ಕಳ್ಳಸಾಗಣಿಕೆಯಲ್ಲಿ ಸಹಾಯ ಮಾಡುತ್ತಿದ್ದ ಆತನ ಸಹೋದರಿಯನ್ನು ಬಂಧಿಸಿ, ಈಕೆಯನ್ನು ರಕ್ಷಿಸುತ್ತಾರೆ.

ಇದೀಗ ಗುಜರಾತಿನಲ್ಲಿರುವ ತನ್ನ ಗೂಡು ಸೇರಿರುವ ಸಬೀನಾಳನ್ನು 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆ ಸಂಪರ್ಕಿಸಿದಾಗ ಈ ಹಿಂದೆಯೂ ಮುನ್ನಿ ಇಲ್ಲಿಯೇ ಆಕೆಯನ್ನು ಬಳಕೆ ಮಾಡಲು ಪ್ರಯತ್ನಿಸಿದ್ದ ಎಂದು ತಿಳಿಸಿದಳು.

ಎಲ್ಲಾ ಗೊತ್ತಿದ್ದು ಆತನ ಜತೆ ಹೋಗಿದ್ದು ಏಕೆ ಎಂದು ಕೇಳಿದಾಗ ಆತ ತನ್ನ ಖಾಸಗಿ ಫೋಟೊವನ್ನು ಪಬ್ಲಿಕ್ ಮಾಡುತ್ತೇನೆ ಎಂದು ಹೆದರಿಸಿದ, ಆದರೆ ಅಲ್ಲಿ ಕೆಲಸ ನೀಡುವುದಾಗಿ ಹೇಳಿ ಕರೆದುಕೊಂಡು ಹೋದ ಎಂದು ತಿಳಿಸಿದ್ದಾಳೆ.

When Sabina (name changed) landed at IGI on August 7 and rushed to embrace her two-year-old son, it appeared to be just another family reunion.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ