ಆ್ಯಪ್ನಗರ

ನರಿಬುದ್ದಿ ಬಿಡದ ಪಾಕ್‌: ವಿಶ್ವಸಂಸ್ಥೆಯಲ್ಲಿ ಮತ್ತೆ ಮರ್ಯಾದೆ ಕಳಕೊಂಡಿದ್ದು ಹೀಗೆ

ವಿಶ್ವಸಂಸ್ಥೆ ಮುಂದೆ ಜಮ್ಮು ಮತ್ತು ಕಾಶ್ಮೀರಿಗಳ ಮೇಲೆ ಪೆಲ್ಲೆಟ್ಟ್ ಗನ್‌ ಬಳಸಿ ಭಾರತ ದೌರ್ಜನ್ಯ ನಡೆಸುತ್ತಿದೆ ಎಂದು ವಾದ ನಡೆಸಿದ್ದ ಪಾಕಿಸ್ತಾನ ತನ್ನ ವಾದಕ್ಕೆ ಸಾಕ್ಷಿ ನೀಡಲು ತಬ್ಬಿಬ್ಬಾಗಿ ಪ್ಯಾಲೆಸ್ತೇನಿಯಾ ದಾಳಿಯ ಸಂತ್ರಸ್ತೆಯ ಚಿತ್ರ ತೋರಿಸಿ ಎಡವಟ್ಟು ಮಾಡಿಕೊಂಡಿದೆ.

TNN 24 Sep 2017, 5:44 pm
ಹೊಸದಿಲ್ಲಿ: ವಿಶ್ವಸಂಸ್ಥೆ ಮುಂದೆ ಜಮ್ಮು ಮತ್ತು ಕಾಶ್ಮೀರಿಗಳ ಮೇಲೆ ಪೆಲ್ಲೆಟ್ಟ್ ಗನ್‌ ಬಳಸಿ ಭಾರತ ದೌರ್ಜನ್ಯ ನಡೆಸುತ್ತಿದೆ ಎಂದು ವಾದ ನಡೆಸಿದ್ದ ಪಾಕಿಸ್ತಾನ ತನ್ನ ವಾದಕ್ಕೆ ಸಾಕ್ಷಿ ನೀಡಲು ತಬ್ಬಿಬ್ಬಾಗಿ ಪ್ಯಾಲೆಸ್ತೇನಿಯಾ ದಾಳಿಯ ಸಂತ್ರಸ್ಥೆ ಚಿತ್ರ ತೋರಿಸಿ ಎಡವಟ್ಟು ಮಾಡಿಕೊಂಡಿದೆ.
Vijaya Karnataka Web pakistan flashes fake image of pellet gun victim to malign india at the un general assembly
ನರಿಬುದ್ದಿ ಬಿಡದ ಪಾಕ್‌: ವಿಶ್ವಸಂಸ್ಥೆಯಲ್ಲಿ ಮತ್ತೆ ಮರ್ಯಾದೆ ಕಳಕೊಂಡಿದ್ದು ಹೀಗೆ


ಶನಿವಾರದಂದು ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ನಡೆಸಿದ ಭಾಷಣಕ್ಕೆ ಭಾನುವಾರ ಪಾಕಿಸ್ತಾನದ ರಾಯಭಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಪಾಕ್‌ ರಾಯಭಾರಿ ಮಲೀಹಾ ಲೋಧಿ ಎಡವಟ್ಟು ಮಾಡಿಕೊಂಡಿದ್ದಾರೆ.

ಕಾಶ್ಮೀರಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಪ್ಯಾಲೆಸ್ತೇನ್‌ನಲ್ಲಿ ದಾಳಿಗೊಳಗಾದವರ ಫೋಟೊ ತೋರಿಸಿ ಇದು ಭಾರತೀಯ ಪ್ರಜಾಪ್ರಭುತ್ವದ ನೈಜಮುಖ' ಎಂದು ಆಕ್ರೋಶಭರಿತ ಭಾಷಣ ಮಾಡಿದ ಲೋಧಿ ತೋರಿಸಿದ ಚಿತ್ರ ಇಸ್ರೇಲ್‌ ದಾಳಿಯ ಸಂತ್ರಸ್ಥೆ ರಾವ್ಯಾ ಅಬು ಜೋಮ್‌ ಅವರ ಚಿತ್ರವಾಗಿತ್ತು. ಈಕೆ ಗಾಜಾ ಯುದ್ಧದಲ್ಲಿ ತೀವ್ರವಾಗಿ ಗಾಯಗೋಂಡಿದ್ದ ಸಂದರ್ಭದಲ್ಲಿ ತೆಗೆದ ಚಿತ್ರವಾಗಿದೆ.

ಇಷ್ಟೆಲ್ಲಾ ಆದ್ ಮೇಲೂ ಲೋಧಿಯವರು ಭಾರತವನ್ನು ಉಗ್ರರ ತವರೂರು ಎಂದು ಹೇಳಿದ್ದು ದಕ್ಷಿಣ ಏಷಿಯಾದ ಭಾಗ ಸೇರಿದಂತೆ ಪಾಕ್‌ನ ಹಲವಾರು ಕಡೆ ಭಾರತವೇ ಉಗ್ರವಾದಕ್ಕೆ ಪ್ರಚೋಧನೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಲೋಧಿಯವರ ಈ ನರಿಬುದ್ದಿ ವಿಶ್ವಾದ್ಯಂತ ಸುದ್ದಿಯಾಗಿದ್ದು ಪಾಕ್ ಭಾರಿ ಮುಖಭಂಗ ಅನುಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ