ಆ್ಯಪ್ನಗರ

ಪಾಕಿಸ್ತಾನದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಕೋರ್ಟ್‌ ಸಮ್ಮತಿ, ತಲೆ ಎತ್ತಲಿದೆ ಭವ್ಯ ಮಂದಿರ!

ಇಸ್ಲಾಮಾಬಾದ್‌ನಲ್ಲಿ ನಿರ್ಮಾಣವಾಗಲು ಸಿದ್ದವಾಗಿದ್ದ ಶ್ರೀಕೃಷ್ಣನ ದೇವಾಲಯಕ್ಕೆ ಇದ್ದ ತಡೆ ನಿವಾರಣೆಯಾಗಿದೆ. ದೇವಾಲಯ ಸ್ಥಾಪನೆ ವಿರುದ್ಧ ಪಾಕಿಸ್ತಾನದ ಹೈ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನ ವಜಾಗೊಳಿಸಲಾಗಿದೆ. ಈ ಮೂಲಕ ಮತ್ತೆ ಕಾಮಗಾರಿ ಆರಂಭವಾಗುವ ಎಲ್ಲಾ ಲಕ್ಷಣಗಳು ಇವೆ.

TIMESOFINDIA.COM 9 Jul 2020, 8:06 am
ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣದ ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲಅರ್ಜಿಗಳನ್ನು ಅಲ್ಲಿನ ಹೈಕೋರ್ಟ್‌ ತಿರಸ್ಕರಿಸಿದೆ. ಅರ್ಜಿಗಳ ವಿಚಾರಣೆ ನಡೆಸಿದ ಇಸ್ಲಾಮಾಬಾದ್‌ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾ. ಆಮೀರ್‌ ಫಾರೂಕ್‌ ಅವರು, ಇನ್‌ಸ್ಟಿಟ್ಯೂಟ್‌ ಆಫ್‌ ಹಿಂದೂ ಪಂಚಾಯತ್‌ಗೆ (ಐಎಚ್‌ಪಿ) ಮಂದಿರ ನಿರ್ಮಾಣಕ್ಕಾಗಿ ಸ್ಥಳ ನೀಡಲಾಗಿದೆ.
Vijaya Karnataka Web 31665-1-story-cashless-help-to-sudama-by-srikrishna


ಅದನ್ನು ತಮ್ಮ ಖರ್ಚಿನಿಂದಲೇ ನಿರ್ಮಿಸಲು ಕೂಡ ಸೂಚಿಸಲಾಗಿದೆ. ಹಾಗಾಗಿ ಅದಕ್ಕೆ ನಿರ್ಬಂಧ ಹೇರುವುದು ಸಾಧ್ಯವಿಲ್ಲಎಂದಿದ್ದಾರೆ. ರಾಜಧಾನಿಯ ಎಚ್‌-9 ಆಡಳಿತ ವಲಯದ 20,000 ಚ.ಅಡಿ ಪ್ರದೇಶದಲ್ಲಿ ಶ್ರೀಕೃಷ್ಣ ದೇವಸ್ಥಾನ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ದೇವಾಲಯದೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಶವ ಸಂಸ್ಕಾರ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಲು ದೊಡ್ಡದಾದ ಸಭಾಂಗಣ ಕೂಡ ಇಲ್ಲಿ ನಿರ್ಮಾಣವಾಗಲಿದೆ.

ಹೀಗಾಗಿ ಪಾಕ್‌ನ ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್‌ ಚಾಂದ್‌ ಮಾಲ್ಹಿ ಅವರು ಇತ್ತೀಚೆಗೆ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದಾರೆ. ಇದಕ್ಕೆ ತಡೆ ನೀಡುವಂತೆ ಇಮ್ರಾನ್‌ ಖಾನ್‌ ಸರಕಾರಕ್ಕೆ ಬೆಂಬಲ ನೀಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್‌-ಕ್ವೇದ್‌ (ಪಿಎಂಎಲ್‌-ಕ್ಯೂ) ಕೋರ್ಟ್‌ ಮೆಟ್ಟಿಲೇರಿತ್ತು. ಮಂದಿರ ನಿರ್ಮಾಣ ಮಾಡುವುದು ಇಸ್ಲಾಂ ಧರ್ಮ ವಿರೋಧಿ ಚಟುವಟಿಕೆ ಎಂದು ವಾದಿಸಿತ್ತು.

ಭದ್ರತಾ ಲೋಪವೇ ಬಿಜೆಪಿ ನಾಯಕನ ಹತ್ಯೆಗೆ ಕಾರಣ, ಸಿಬ್ಬಂದಿ ಪೊಲೀಸ್‌ ವಶಕ್ಕೆ!

ಈ ಹಿನ್ನೆಲೆ ತಡೆಗೋಡೆ ನಿರ್ಮಾಣದ ಮೂಲಕ ಆರಂಭವಾಗಿದ್ದ ದೇವಾಲಯದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭವಾಗುವ ಉತ್ಸಾಹದಲ್ಲಿ ಅಲ್ಲಿನ ಜನ ಇದ್ದಾರೆ. ಇನ್ನು ದೇವಾಲಯ ನಿರ್ಮಾಣಕ್ಕೆ ಪಿಎಂ ಇಮ್ರಾನ್‌ ಖಾನ್‌ ಸರ್ಕಾರವು ಅನುದಾನ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ