ಆ್ಯಪ್ನಗರ

LOCಗೆ ನುಸುಳಲು ಸಂಚು: ಖುದ್ದು ಭಯೋತ್ಪಾದರನ್ನು ನೇಮಕ ಮಾಡುತ್ತಿರುವ ISI

ಯುವಕರನ್ನು ಉಗ್ರ ಸಂಘಟನೆಗೆ ನೇಮಕ ಮಾಡಿಕೊಳ್ಳುವ ಕೃತ್ಯಕ್ಕೆ ಪಾಕಿಸ್ತಾನದ ಐಎಸ್‌ಎ ಕೈಹಾಕಿದೆ.

Navbharat Times 21 Aug 2019, 1:02 pm
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮತ್ತು ಕಣಿವೆ ನಾಡಿನಲ್ಲಿ ಉಗ್ರವಾದ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ದಿಟ್ಟ ನಿರ್ಧಾರಗಳಿಂದ ಪಾಕಿಸ್ತಾನ ಕೆಂಗೆಟ್ಟಿದೆ.
Vijaya Karnataka Web Pak


ಹೀಗಾಗಿ ಎಲ್‌ಒಸಿಗೆ ಒಳನುಸುಳುವ ಪಿತೂರಿಯ ಭಾಗವಾಗಿ, ಯುವಕರನ್ನು ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡಿಕೊಳ್ಳುವ ಕೃತ್ಯಕ್ಕೆ ಖುದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈಹಾಕಿದೆ. ಈ ಮಾಹಿತಿಯನ್ನು ಭಾರತೀಯ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನದ ಮುಜಫರಾಬಾದ್‌ನ ಕ್ಯಾಂಪ್‌ವೊಂದರಲ್ಲಿ ಭಯೋತ್ಪಾದಕ ಸಂಘಟನೆ ಸೇರ್ಪಡೆಯಾಗುವಂತೆ ಐಎಸ್ಐ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿ ನೇಮಕವಾಗುವ ಯುವಕರಿಗೆ ಅಲ್ ಬದ್ರ್ ಎಂಬ ಭಯೋತ್ಪಾದಕ ಸಂಘಟನೆಯ ಮೂಲಕ ತರಬೇತಿ ಕೊಡಿಸಿ, ಲಿಪಾ ಹಾಗೂ ಕೈರಾನ್ ಸೆಕ್ಟರ್‌ನ ಲಾಂಚ್ ಪ್ಯಾಡ್ ಮೂಲಕ ಎಲ್‍ಒಸಿ ಒಳಗೆ ನುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮಹತ್ವದ ಪಾತ್ರವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಉಗ್ರರ ನೇಮಕಾತಿ

ಗುಪ್ತಚರ ಮೂಲಗಳ ಪ್ರಕಾರ, ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಪೇಶಾವರ, ಕ್ವೆಟ್ಟಾದ ಬುಡಕಟ್ಟ ಪ್ರದೇಶಗಳು ಸೇರಿದಂತೆ ಪಿಒಕೆಯ ಪೊಂಚ್, ಬಾಗ್ ಮತ್ತು ಕೋಟ್ಲಿಯಲ್ಲಿ ನೇಮಕಾತಿ ನಡೆಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ