ಆ್ಯಪ್ನಗರ

ಪಾಕ್‌ ಸೇನಾ ಕಾರ್ಯಾಚರಣೆ:ಆತ್ಮಹತ್ಯಾ ದಳದ ಇಬ್ಬರ ಹತ್ಯೆ

ನೈಋುತ್ಯ ಪಾಕಿಸ್ತಾನದಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ 'ಲಷ್ಕರೆ ಝಾಂಗ್ವಿ'ಗೆ ಸೇರಿದ ಸಲ್ಮಾನ್‌ ಬದೆನಿ ಎಂಬ ಮಹಾ ಪಾತಕಿ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಸಂಘಟನೆಯ ಬಲೂಚಿಸ್ತಾನ ಘಟಕದ ಮುಖ್ಯಸ್ಥನಾಗಿರುವ ಬದೆನಿ, ಅಲ್ಪಸಂಖ್ಯಾತ ಹಜರಾ ಸಮುದಾಯ ಮತ್ತು ಪೊಲೀಸ್‌ ಇಲಾಖೆಗೆ ಸೇರಿದ 100ಕ್ಕೂ ಹೆಚ್ಚು ಜನರ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

Vijaya Karnataka 18 May 2018, 9:20 am
ಕರಾಚಿ: ನೈಋುತ್ಯ ಪಾಕಿಸ್ತಾನದಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ 'ಲಷ್ಕರೆ ಝಾಂಗ್ವಿ'ಗೆ ಸೇರಿದ ಸಲ್ಮಾನ್‌ ಬದೆನಿ ಎಂಬ ಮಹಾ ಪಾತಕಿ ಸೇರಿದಂತೆ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ಸಂಘಟನೆಯ ಬಲೂಚಿಸ್ತಾನ ಘಟಕದ ಮುಖ್ಯಸ್ಥನಾಗಿರುವ ಬದೆನಿ, ಅಲ್ಪಸಂಖ್ಯಾತ ಹಜರಾ ಸಮುದಾಯ ಮತ್ತು ಪೊಲೀಸ್‌ ಇಲಾಖೆಗೆ ಸೇರಿದ 100ಕ್ಕೂ ಹೆಚ್ಚು ಜನರ ಕೊಲೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
Vijaya Karnataka Web Pak


ವಿಶ್ರಾಂತಿ ವಲಯದಲ್ಲಿ ಆತ್ಮಹತ್ಯಾ ದಳದ ಸದಸ್ಯರು ಹಾಗೂ ಭಯೋತ್ಪಾದಕರು ಅಡಗಿದ್ದಾರೆ ಎಂಬ ಗುಪ್ತಚರ ಇಲಾಖೆಯ ಮಾಹಿತಿಯನ್ನಾಧರಿಸಿ ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟ್ಟಾದ ಹೊರವಲಯದಲ್ಲಿರುವ ಕಿಲ್ಲಿ ಅಲ್ಮಾಸ್‌ ಗ್ರಾಮದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದವು.

''ಕಾರ್ಯಾಚರಣೆಯಲ್ಲಿ ಇಬ್ಬರು ಆತ್ಮಹತ್ಯಾ ದಾಳಿಕೋರರು ಹಾಗೂ ಬಲೂಚಿಸ್ತಾನದ ಲಷ್ಕರೆ ಝಾಂಗ್ವಿ ಸಂಘಟನೆ ಮುಖಂಡ, ಕಟ್ಟಾ ಉಗ್ರಗಾಮಿ ಸಲ್ಮಾನ್‌ ಬದೆನಿಯನ್ನು ಹೊಡೆದುರುಳಿಸಲಾಗಿದೆ,'' ಎಂದು ಪಾಕ್‌ ಸೇನೆಯ ಮಾಧ್ಯಮ ವಿಭಾಗ ಗುರುವಾರ ಪ್ರಕಟಣೆ ಹೊರಡಿಸಿದೆ.

''ಆತ್ಮಹತ್ಯಾ ದಾಳಿಕೋರರಿಬ್ಬರು ಅಫಘಾನಿಸ್ತಾನದವರು. ಈ ಮೂವರ ಗುಂಪು ಹಜರಾ ಸಮುದಾಯ ಹಾಗೂ ಪೊಲೀಸ್‌ ಇಲಾಖೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿತ್ತು. ಗುಂಡಿನ ಕಾಳಗದ ವೇಳೆ ಸೇನಾಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ,'' ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ