ಆ್ಯಪ್ನಗರ

ಸಲ್ಮಾನ್ ಹೆಸರಿನಲ್ಲಿ 'ಖಾನ್' ಇರುವುದಕ್ಕೇ ಈ ಶಿಕ್ಷೆ: ಪಾಕ್ ಸಚಿವ

ಸಲ್ಮಾನ್ ಹೆಸರಿನ ಕೊನೆಯಲ್ಲಿ ಖಾನ್ ಇಲ್ಲದಿದ್ದರೆ ತೀರ್ಪು ಬೇರೆ ರೀತಿ ಬರುತ್ತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಅಧಿಕಾರ ಪಕ್ಷದ ಧರ್ಮವನ್ನು ಹೊಂದಿದ್ದರೆ ಈ ಶಿಕ್ಷೆಗೆ ಅವರು ಅನರ್ಹರಾಗುತ್ತಿದ್ದರು ಎಂದು ಆರೋಪಿಸಿದ್ದಾರೆ.

Indiatimes 6 Apr 2018, 2:56 pm
ಇಸ್ಲಾಮಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಖವಾಜಾ ಅಸೀಫ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಸಚಿವರ ವಿರುದ್ಧ ಟ್ವೀಟ್ ಸುರಿಮಳೆಯಾಗುತ್ತಿದೆ
Vijaya Karnataka Web pak-minister


ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‌ಪುರ ಸೆಷನ್ಸ್ ನ್ಯಾಯಾಲಯ ಸಲ್ಮಾನ್‍ ದೋಷಿ ಎಂದು ತೀರ್ಪುನೀಡಿ ಶಿಕ್ಷೆ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಯಾವುದೇ ಕನಿಕರ ಇಲ್ಲ. ಅವರಿಗೆ ಆ ದೇಶದಲ್ಲಿ ರಕ್ಷಣೆ ಇಲ್ಲ ಎಂಬು ದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆಸಿಫ್ ಹೇಳಿದ್ದಾರೆ.

ಸಲ್ಮಾನ್ ಹೆಸರಿನ ಕೊನೆಯಲ್ಲಿ ಖಾನ್ ಇಲ್ಲದಿದ್ದರೆ ತೀರ್ಪು ಬೇರೆ ರೀತಿ ಬರುತ್ತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಅಧಿಕಾರ ಪಕ್ಷದ ಧರ್ಮವನ್ನು ಹೊಂದಿದ್ದರೆ ಈ ಶಿಕ್ಷೆಗೆ ಅವರು ಅನರ್ಹರಾಗುತ್ತಿದ್ದರು ಎಂದು ಆರೋಪಿಸಿದ್ದಾರೆ.
ಪಾಕ್ ಸಚಿವರ ಈ ಹೇಳಿಕೆಗೆ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಹರಿದಾಡುತ್ತಿದ್ದು ಸಚಿವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಪ್ರಶ್ನಿಸಿದ್ದಾರೆ. ಸಲ್ಮಾನ್ ಖಾನ್ ಮತ್ತವರ ಧರ್ಮದ ಬಗ್ಗೆ ನಿಮಗೆ ಅಷ್ಟೆಲ್ಲಾ ಪ್ರೀತಿ ಇದ್ದರೆ ಆ ಹೀರೋ ಸಿನಿಮಾಗಳನ್ನು (ಏಕ್ತಾ ಟೈಗರ್, ಟೈಗರ್ ಜಿಂದಾ ಹೈ) ಪಾಕ್‌ನಲ್ಲಿ ಯಾಕೆ ನಿಷೇಧಿಸಿದ್ದು ಎಂದು ಪ್ರಶ್ನಿಸಿದ್ದಾರೆ.

ಇದೇ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಸೈಫ್ ಆಲಿ ಖಾನ್ ಅವರದು ಯಾವ ಧರ್ಮ ಎಂದು ಮಾನ್ಯ ಸಚಿವರು ತಿಳಿಸಬೇಕೆಂದು ಕೆಲವರು ಕೇಳಿದ್ದಾರೆ. ಭಾರತದಲ್ಲಿ ಎಲ್ಲರೂ ಸಮಾನರು. ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಾಲಿವುಡ್ ನಟ ಸಂಜಯ್ ದತ್‍ಗೆ ಶಿಕ್ಷೆಯಾಗಿದ್ದನ್ನು ನೆನಪಿಸಿದ್ದಾರೆ ಕೆಲವರು.

ನೀಚ ದೇಶವೊಂದಕ್ಕೆ ಸಚಿವರಾಗಿ ಕೆಲಸ ಮಾಡುತ್ತಿದ್ದೀರಾ, ಹುಚ್ಚನಂತೆ ಮಾತನಾಡುತ್ತಿದ್ದೀರಾ, ಮೊದಲು ಪಾಕ್‌ನಲ್ಲಿ ಸಮಸ್ಯೆಗಳನ್ನು ಬಗೆಹರಿಸಿ. ಆ ಬಳಿಕ ನೆರೆ ದೇಶಗಳ ಬಗ್ಗೆ ಆಲೋಚಿಸಿ ಎಂದು ಕೆಲವರು ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ