ಆ್ಯಪ್ನಗರ

ಪಾಕ್‌ ಪ್ರಚೋದನೆಗೆ ಅಮರೀಂದರ್‌ ತಿರುಗೇಟು

''ಭಾರತೀಯ ಸೇನೆಯಲ್ಲಿರುವ ಪಂಜಾಬಿಗಳು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸುವ ಮೂಲಕ ಅನ್ಯಾಯದ ಭಾಗವಾಗಬಾರದೆಂದು ಮನವಿ ಮಾಡುತ್ತೇನೆ,'' ಎಂದು ಹುಸೇನ್‌ ಟ್ವೀಟ್‌ ಮಾಡಿದ್ದರು.

PTI 14 Aug 2019, 5:00 am
ಅಮೃತಸರ: ಭಾರತೀಯ ಸೇನೆಯಲ್ಲಿರುವ ಪಂಜಾಬಿಗಳನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಚೌಧರಿ ಫವಾದ್‌ ಹುಸೇನ್‌ ಅವರಿಗೆ ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ''ಭಾರತೀಯ ಸೇನೆಯಲ್ಲಿರುವ ಪಂಜಾಬಿಗಳು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸುವ ಮೂಲಕ ಅನ್ಯಾಯದ ಭಾಗವಾಗಬಾರದೆಂದು ಮನವಿ ಮಾಡುತ್ತೇನೆ,'' ಎಂದು ಹುಸೇನ್‌ ಟ್ವೀಟ್‌ ಮಾಡಿದ್ದರು. ಟ್ವಿಟರ್‌ನಲ್ಲಿಯೇ ತಿರುಗೇಟು ನೀಡಿದ ಕ್ಯಾ.ಸಿಂಗ್‌, ''ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ. ಭಾರತೀಯ ಸೇನೆ ಶಿಸ್ತಿನಿಂದ ಕೂಡಿದೆ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಂಡಿದೆ. ಅದು ನಿಮ್ಮ (ಪಾಕಿಸ್ತಾನದ) ಸೇನೆಯಂತಲ್ಲ. ಇಂತಹ ಪ್ರಚೋದನಕಾರಿ ಹೇಳಿಕೆಗಳು ಫಲ ನೀಡುವುದಿಲ್ಲ. ವಿಭಜಿಸುವ ನಿಮ್ಮ ಕುತಂತ್ರಕ್ಕೆ ನಮ್ಮ ಯೋಧರು ಬೆಲೆ ನೀಡುವುದಿಲ್ಲ,'' ಎಂದು ಹೇಳಿದ್ದಾರೆ.
Vijaya Karnataka Web caption


ಹೂಹಾರ ಹಾಕಿ ಸ್ವಾಗತಿಸುವುದಿಲ್ಲ: ಇನ್ನೊಂದೆಡೆ ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ್ಫರ್‌ಬಾದ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಶಿ, ''ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ಕ್ರಮಕ್ಕೆ ಪಾಕಿಸ್ತಾನ ಆಕ್ಷೇಪ ಸಲ್ಲಿಸುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೂವಿನ ಹಾರದೊಂದಿಗೆ ಸ್ವಾಗತಿಸುತ್ತದೆ ಎಂಬ ನಿರೀಕ್ಷೆಯನ್ನು ಪಾಕಿಸ್ತಾನೀಯರು ಇಟ್ಟುಕೊಳ್ಳಬಾರದು. ಮೂರ್ಖರ ಸ್ವರ್ಗದಲ್ಲಿ ಪಾಕಿಸ್ತಾನೀಯರು ವಾಸಿಸಬಾರದು. ಬಹಳಷ್ಟು ಮಂದಿ ಭಾರತದಲ್ಲಿ ಹೂಡಿಕೆ ಮಾಡಿರುವುದರಿಂದ ಮುಸ್ಲಿಂ ರಾಷ್ಟ್ರಗಳು ಕೂಡ ಪಾಕಿಸ್ತಾನದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ,'' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ