ಆ್ಯಪ್ನಗರ

ಮಾನವೀಯ ನೆಲೆಯಲ್ಲಿ ಜಾಧವ್‌ ಜತೆ ಭೇಟಿಗೆ ಪತ್ನಿಗೆ ಪಾಕ್‌ ಅವಕಾಶ

ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್‌ಭೂಷಣ್‌ ಜಾಧವ್‌ ಅವರನ್ನು ಮಾನವೀಯ ನೆಲೆಯಲ್ಲಿ ಭೇಟಿ ಮಾಡಲು ಅವರ ಪತ್ನಿಗೆ ಪಾಕಿಸ್ತಾನ ಅನುಮತಿ ನೀಡಲು ಮುಂದಾಗಿದೆ.

Vijaya Karnataka Web 10 Nov 2017, 9:57 pm
ಹೊಸದಿಲ್ಲಿ: ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲ್‌ಭೂಷಣ್‌ ಜಾಧವ್‌ ಅವರನ್ನು ಮಾನವೀಯ ನೆಲೆಯಲ್ಲಿ ಭೇಟಿ ಮಾಡಲು ಅವರ ಪತ್ನಿಗೆ ಪಾಕಿಸ್ತಾನ ಅನುಮತಿ ನೀಡಲು ಮುಂದಾಗಿದೆ.
Vijaya Karnataka Web pakistan offers to arrange meeting between kulbhushan jadhav and his wife on humanitarian grounds
ಮಾನವೀಯ ನೆಲೆಯಲ್ಲಿ ಜಾಧವ್‌ ಜತೆ ಭೇಟಿಗೆ ಪತ್ನಿಗೆ ಪಾಕ್‌ ಅವಕಾಶ


'ಮಾನವೀಯ ನೆಲೆಯಲ್ಲಿ ಕಮಾಂಡರ್‌ ಕುಲ್‌ಭೂಷಣ್ ಜಾಧವ್‌ ಮತ್ತು ಅವರ ಪತ್ನಿಯ ಭೇಟಿಗೆ ಅವಕಾಶ ಕಲ್ಪಿಸಲು ಪಾಕ್‌ ಸರಕಾರ ನಿರ್ಧರಿಸಿದೆ. ಈ ಕುರಿತು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ಗೆ ಸೂಚನೆ ನೀಡಲಾಗಿದೆ' ಎಂದು ಪಾಕ್‌ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ವೀಡಿಯೋ: ಮಾನವೀಯ ನೆಲೆಯಲ್ಲಿ ಜಾಧವ್‌ ಜತೆ ಭೇಟಿಗೆ ಪತ್ನಿಗೆ ಪಾಕ್‌ ಅವಕಾಶ

ಜಾಧವ್‌ ಅವರಿಗೆ ಸರಕಾರ ಅಥವಾ ಬೇಹುಗಾರಿಕೆ ಸಂಸ್ಥೆ 'ರಾ' ಜತೆ ಯಾವುದೇ ಸಂಪರ್ಕವಿಲ್ಲ ಎಂಬ ಭಾರತದ ವಾದವನ್ನು ಒಪ್ಪಲು ಪಾಕ್‌ ಈಗಲೂ ತಯಾರಿಲ್ಲ.

'ಭಾರತೀಯ ನೌಕಾಪಡೆಯ ಸೇವೆಲ್ಲಿರುವ ಕಮಾಂಡರ್‌ ಕುಲ್‌ಭೂಷಣ್‌ ಜಾಧವ್‌ ಅಲಿಯಾಸ್‌ ಹುಸೇನ್‌ ಮುಬಾರಕ್‌ ಪಟೇಲ್‌, ಭಾರತೀಯ ಬೇಹು ಸಂಸ್ಥೆ ರೀಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ (RAW) ಜತೆ ಸಂಬಂಧ ಹೊಂದಿದ್ದು,ಅಕ್ರಮವಾಗಿ ಪಾಕ್‌ ಪ್ರವೇಶಿಸಿದ ಕಾರಣ 2016ರ ಮಾರ್ಚ್‌ 3ರಂದು ಬಂಧಿಸಲಾಗಿತ್ತು. ಪಾಕ್‌ ವಿರುದ್ಧ ಭಯೋತ್ಪಾದನೆ ನಡೆಸುವ 'ರಾ' ಸಂಚಿನಲ್ಲಿ ತಾವು ಭಾಗಿಯಾಗಿರುವುದನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಎದುರು ಜಾಧವ್‌ ಒಪ್ಪಿಕೊಂಡಿದ್ದಾರೆ' ಎಂದು ಪಾಕ್‌ ಹೇಳಿಕೆ ತಿಳಿಸಿದೆ.

ಪಾಕಿಸ್ತಾನದ ಮಿಲಿಟರಿ ಕೋರ್ಟ್‌ ಏಕಪಕ್ಷೀಯವಾಗಿ ವಿಚಾರಣೆ ನಡೆಸಿ ಜಾಧವ್‌ಗೆ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೆಟ್ಟಲೇರಿತ್ತು. ಮೇ 18ರಂದು ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿ ಜಾಧವ್‌ ಮರಣದಂಡನೆಗೆ ತಡೆ ನೀಡಿತ್ತು.

ಜಾಧವ್‌ ಅವರ ತಾಯಿ ಮಗನ ಭೇಟಿಗೆ ಪಾಕಿಸ್ತಾನ ವೀಸಾಕ್ಕೆ ಅರ್ಜಿ ಹಾಕಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದರು. ಆದರೆ ಪಾಕ್‌ ಇದನ್ನು ತಿರಸ್ಕರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ