ಕರ್ತಾರ್ಪುರ: ಪಾಕಿಸ್ತಾನವು ನಯವಾದ ಮಾತುಗಳ ಮೂಲಕ ಆಡುತ್ತಿರುವ ಶಾಂತಿಯ ನಾಟಕಕ್ಕೆ ಭಾರತ ಬುಧವಾರ ತಿರುಗೇಟು ನೀಡಿದೆ. ಉಗ್ರರನ್ನು ಮಟ್ಟ ಹಾಕದ ಹೊರತು ಪಾಕ್ ಜತೆ ಮಾತುಕತೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಭಾರತ, ಸಾರ್ಕ್ ಸಮಾವೇಶಕ್ಕೆ ನೀಡಿದ ಆಹ್ವಾನವನ್ನೂ ತಿರಸ್ಕರಿಸಿದೆ.
ಗಡಿಯ ಎರಡೂ ಬದಿಗಳಲ್ಲಿರುವ ಗುರುದ್ವಾರಗಳನ್ನು ಬೆಸೆಯುವ 6 ಕಿ.ಮೀ. ಉದ್ದದ ಕರ್ತಾರ್ಪುರ ಕಾರಿಡಾರ್ಗೆ ಪಾಕಿಸ್ತಾನದ ಸರಕಾರದ ವತಿಯಿಂದ ನಡೆದ ಶಂಕುಸ್ಥಾಪನೆ ವೇಳೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಎರಡು ದೇಶಗಳ ನಡುವಿನ ಸೌಹಾರ್ದ ಸಂಬಂಧದ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. 'ಪಾಕಿಸ್ತಾನವು ಭಾರತದೊಂದಿಗೆ ಶಕ್ತಿಶಾಲಿ ಮತ್ತು ನಾಗರಿಕ ಸಂಬಂಧಗಳನ್ನು ಬಯಸುತ್ತದೆ. ಎರಡು ದೇಶಗಳ ನಾಯಕರು ಇಚ್ಛಾಶಕ್ತಿ ಪ್ರದರ್ಶಿಸಿದರೆ ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು,'' ಎಂದು ಹೇಳಿದ್ದರು.
ಕಾಶ್ಮೀರ ವಿಷಯವನ್ನು ಎತ್ತುವ ಮೂಲಕ ಅತ್ಯಂತ ಪವಿತ್ರವಾದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಕರಣ ಮಾಡಿದ್ದು ವಿಷಾದಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಪ್ರತಿಕ್ರಿಯಿಸಿದೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಒಪ್ಪಿಗೆ ಕೊಟ್ಟ ಮಾತ್ರಕ್ಕೆ ಪಾಕಿಸ್ತಾನದ ಜತೆಗೆ ಮಾತುಕತೆಗೆ ಬಾಗಿಲು ತೆರೆದಂತಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕ್ಗೆ ಭಾರತ ಪ್ರಹಾರ
* ಪಾಕಿಸ್ತಾನ ಮೊದಲು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪೂರೈಸಬೇಕು. ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲು ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಮತ್ತು ತನ್ನ ನೆಲದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ನಡೆಯುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಅದರ ಜತೆ ಶಾಂತಿ ಮಾತುಕತೆ ಅಸಾಧ್ಯ.
ಸಾರ್ಕ್ ಸಮಾವೇಶದಲ್ಲಿ ಭಾಗವಹಿಸಲ್ಲ ಭಾರತ
20ನೇ ಸಾರ್ಕ್ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ಭಾರತ ಸ್ವೀಕರಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಲ್ಲಿಸದಿದ್ದರೆ ಮಾತುಕತೆ ಅಸಾಧ್ಯ. ನಾವು ಸಾರ್ಕ್ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಹೇಳಿದ್ದೇನು?
ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಬೇಕೆಂಬ ವಿಷಯದಲ್ಲಿ ಪಾಕಿಸ್ತಾನದ ರಾಜಕೀಯ ನಾಯಕರು, ಸೇನೆ ಮತ್ತು ಎಲ್ಲರೂ ಏಕಾಭಿಪ್ರಾಯ ಹೊಂದಿದ್ದೇವೆ. ನಮಗೆ ನಾಗರಿಕ ಸಂಬಂಧ ಬೇಕು. ನಮಗಿರುವುದು ಒಂದೇ ಸಮಸ್ಯೆ-ಕಾಶ್ಮೀರ. ಮನುಷ್ಯ ಚಂದ್ರನ ಮೇಲೆ ನಡೆಯಬಲ್ಲ ಎಂದಾರೆ ಪರಿಹರಿಸಲಾಗದ ಸಮಸ್ಯೆ ಯಾವುದಿದೆ?
ಇಮ್ರಾನ್ ಖಾನ್ ಅವರು ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರ ಪೋಷಣೆಯ ಬಗ್ಗೆ ಮೊದಲು ದನಿ ಎತ್ತಲಿ.
- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ
ಗಡಿಯ ಎರಡೂ ಬದಿಗಳಲ್ಲಿರುವ ಗುರುದ್ವಾರಗಳನ್ನು ಬೆಸೆಯುವ 6 ಕಿ.ಮೀ. ಉದ್ದದ ಕರ್ತಾರ್ಪುರ ಕಾರಿಡಾರ್ಗೆ ಪಾಕಿಸ್ತಾನದ ಸರಕಾರದ ವತಿಯಿಂದ ನಡೆದ ಶಂಕುಸ್ಥಾಪನೆ ವೇಳೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರು ಎರಡು ದೇಶಗಳ ನಡುವಿನ ಸೌಹಾರ್ದ ಸಂಬಂಧದ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. 'ಪಾಕಿಸ್ತಾನವು ಭಾರತದೊಂದಿಗೆ ಶಕ್ತಿಶಾಲಿ ಮತ್ತು ನಾಗರಿಕ ಸಂಬಂಧಗಳನ್ನು ಬಯಸುತ್ತದೆ. ಎರಡು ದೇಶಗಳ ನಾಯಕರು ಇಚ್ಛಾಶಕ್ತಿ ಪ್ರದರ್ಶಿಸಿದರೆ ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು,'' ಎಂದು ಹೇಳಿದ್ದರು.
ಕಾಶ್ಮೀರ ವಿಷಯವನ್ನು ಎತ್ತುವ ಮೂಲಕ ಅತ್ಯಂತ ಪವಿತ್ರವಾದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಕರಣ ಮಾಡಿದ್ದು ವಿಷಾದಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಟುವಾಗಿ ಪ್ರತಿಕ್ರಿಯಿಸಿದೆ.
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಒಪ್ಪಿಗೆ ಕೊಟ್ಟ ಮಾತ್ರಕ್ಕೆ ಪಾಕಿಸ್ತಾನದ ಜತೆಗೆ ಮಾತುಕತೆಗೆ ಬಾಗಿಲು ತೆರೆದಂತಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕ್ಗೆ ಭಾರತ ಪ್ರಹಾರ
* ಪಾಕಿಸ್ತಾನ ಮೊದಲು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪೂರೈಸಬೇಕು. ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲು ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಮತ್ತು ತನ್ನ ನೆಲದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ನಡೆಯುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಅದರ ಜತೆ ಶಾಂತಿ ಮಾತುಕತೆ ಅಸಾಧ್ಯ.
ಸಾರ್ಕ್ ಸಮಾವೇಶದಲ್ಲಿ ಭಾಗವಹಿಸಲ್ಲ ಭಾರತ
20ನೇ ಸಾರ್ಕ್ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ಭಾರತ ಸ್ವೀಕರಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಲ್ಲಿಸದಿದ್ದರೆ ಮಾತುಕತೆ ಅಸಾಧ್ಯ. ನಾವು ಸಾರ್ಕ್ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಹೇಳಿದ್ದೇನು?
ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಬೇಕೆಂಬ ವಿಷಯದಲ್ಲಿ ಪಾಕಿಸ್ತಾನದ ರಾಜಕೀಯ ನಾಯಕರು, ಸೇನೆ ಮತ್ತು ಎಲ್ಲರೂ ಏಕಾಭಿಪ್ರಾಯ ಹೊಂದಿದ್ದೇವೆ. ನಮಗೆ ನಾಗರಿಕ ಸಂಬಂಧ ಬೇಕು. ನಮಗಿರುವುದು ಒಂದೇ ಸಮಸ್ಯೆ-ಕಾಶ್ಮೀರ. ಮನುಷ್ಯ ಚಂದ್ರನ ಮೇಲೆ ನಡೆಯಬಲ್ಲ ಎಂದಾರೆ ಪರಿಹರಿಸಲಾಗದ ಸಮಸ್ಯೆ ಯಾವುದಿದೆ?
ಇಮ್ರಾನ್ ಖಾನ್ ಅವರು ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರ ಪೋಷಣೆಯ ಬಗ್ಗೆ ಮೊದಲು ದನಿ ಎತ್ತಲಿ.
- ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವೆ