ಆ್ಯಪ್ನಗರ

ಸರಣಿ ಸ್ಫೋಟಕ್ಕೆ ಪಾಕ್‌ ಸಂಚು: ಜೈಷ್‌ ಉಗ್ರರನ್ನು ಛೂ ಬಿಟ್ಟ ಪಾಕಿಸ್ತಾನ ಸೇನೆ

ಹಲವು ನಗರಗಳು, ಭದ್ರತಾ ಪಡೆ ಟಾರ್ಗೆಟ್‌ , ಸ್ಲೀಪರ್‌ಸೆಲ್‌ಗಳನ್ನು ಸಕ್ರಿಯಗೊಳಿಸಿದ ಐಎಸ್‌ಐ , ಕಟ್ಟೆಚ್ಚರ ವಹಿಸಲು ರಾಜ್ಯಗಳಿಗೆ ಗುಪ್ತಚರ ಸಂಸ್ಥೆ ಸೂಚನ.

Vijaya Karnataka 28 Aug 2019, 8:17 am
ಹೊಸದಿಲ್ಲಿ: ಕಾಶ್ಮೀರ ಕುರಿತ ಭಾರತದ ದಿಟ್ಟ ನಡೆಯಿಂದಾಗಿ ಹತಾಶಗೊಂಡಿರುವ ಪಾಕಿಸ್ತಾನ ಸೇನೆ, ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ ಮೂಲಕ ಭಾರತದಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸುತ್ತಿರುವ ಆಘಾತಕಾರಿ ವಿಷಯ ಬಯಲಾಗಿದೆ.
Vijaya Karnataka Web Terror 1200


ಪಾಕಿಸ್ತಾನ ಮೂಲದ ವಿವಿಧ ಉಗ್ರ ಸಂಘಟನೆಗಳು ಹಾಗೂ ಸ್ಲೀಪರ್‌ಸೆಲ್‌ಗಳಿಗೆ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸುವಂತೆ ಐಎಸ್‌ಐ ಸೂಚಿಸಿದೆ. ಹಲವು ನಗರಗಳಲ್ಲಿ ಸರಣಿ ಸ್ಫೋಟವೂ ಈ ಸಂಚಿನ ಭಾಗವಾಗಿದೆ. ದಿಲ್ಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪೊಲೀಸ್‌ ಇಲಾಖೆಗಳಿಗೆ ಗುಪ್ತಚರ ಸಂಸ್ಥೆಗಳು ಈ ಬಗ್ಗೆ ಮುನ್ನೆಚ್ಚರಿಕೆ ರವಾನಿಸಿವೆ.

ಭದ್ರತಾ ಪಡೆಗಳು ಟಾರ್ಗೆಟ್‌: ಪಾಕ್‌ ಮೂಲದ ಉಗ್ರ ಸಂಘಟನೆಗಳ ನೆರವಿನೊಂದಿಗೆ ಭಾರತದ ಭದ್ರತಾ ಪಡೆಗಳನ್ನು ಟಾರ್ಗೆಟ್‌ ಮಾಡಲೂ ಐಎಸ್‌ಐ ಪ್ರಯತ್ನಿಸುತ್ತಿದೆ.
ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ಕಮಾಂಡರ್‌ ಅಬ್ದುಲ್‌ ರೌಫ್‌ ಅಸ್ಗರ್‌ಗೆ ಭದ್ರತಾ ಪಡೆಗಳನ್ನು ಟಾರ್ಗೆಟ್‌ ಮಾಡುವ ಹೊಣೆ ನೀಡಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಲಾಂಚ್‌ಪ್ಯಾಡ್‌ಗಳಲ್ಲಿ ಅಸ್ಗರ್‌ ಸೇರಿದಂತೆ 30-40 ಉಗ್ರರು ಬೀಡು ಬಿಟ್ಟಿದ್ದಾರೆ, ಎಂದು ಗುಪ್ತಚರ ವರದಿಯಲ್ಲಿ ಹೇಳಲಾಗಿದೆ.

ಇತ್ತೀಚೆಗಷ್ಟೇ ಗುಪ್ತಚರ ಸಂಸ್ಥೆಗಳು ಉಗ್ರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದ್ದವು.

ಶಂಕಿತ ಉಗ್ರರಿಂದ ಇಬ್ಬರ ಅಪಹರಣ, ಹತ್ಯೆ

ಜಮ್ಮು-ಕಾಶ್ಮೀರದ ತ್ರಾಲ್‌ನಲ್ಲಿ ಶಂಕಿತ ಉಗ್ರರು ಇಬ್ಬರು ಸ್ಥಳೀಯರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಅಪರಿಚಿತ ಬಂದೂಕುಧಾರಿಗಳಿಂದ ಅಪಹರಣ ನಡೆದಿತ್ತು. ಮಂಗಳವಾರ ಸಂಜೆ ವೇಳೆಗೆ ಅಪಹೃತರ ಮೃತದೇಹಗಳು ಪತ್ತೆಯಾಗಿವೆ. 370ನೇ ವಿಧಿ ರದ್ದುಪಡಿಸಿ, ಭಾರಿ ನಿರ್ಬಂಧ ಹೇರಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಉಗ್ರರು ನಡೆಸಿದ ಮೊದಲ ನಾಗರಿಕರ ಹತ್ಯೆ ಪ್ರಕರಣ ಇದಾಗಿದೆ.

ಗಡಿಯಲ್ಲಿ ಚಟುವಟಿಕೆ ಹೆಚ್ಚಿಸಿದ ಪಾಕ್‌


ಕಾಶ್ಮೀರ ವಿಚಾರವಾಗಿ ರಾಜತಾಂತ್ರಿಕ ಮಾರ್ಗದಲ್ಲಿ ಭಾರತವನ್ನು ಎದುರಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನ, ಗಡಿಯಲ್ಲಿ ಶಸ್ತ್ರಸಜ್ಜಿತ ಸೇನೆ ನಿಯೋಜನೆ ಮೂಲಕ
ಆತಂಕದ ವಾತಾವರಣ ಸೃಷ್ಟಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಭಾಗವಾಗಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಹಾಗೂ ಹೆಚ್ಚುವರಿ
ಸೇನೆಯನ್ನು ನಿಯೋಜಿಸಿದೆ

ರೊಹಿಂಗ್ಯಾ ಮುಸ್ಲಿಮರ ಬಳಕೆ

ಭಾರತದಲ್ಲಿ ದುಷ್ಕೃತ್ಯಕ್ಕೆ ಈ ಬಾರಿ ಬಾಂಗ್ಲಾ ಗಡಿಯಲ್ಲಿ ನಿರಾಶ್ರಿತರಾಗಿರುವ ರೊಹಿಂಗ್ಯಾ ಮುಸ್ಲಿಮರನ್ನೂ ಬಳಸಿಕೊಳ್ಳಲು ಪಾಕ್‌ ಉಗ್ರರು ಮುಂದಾಗಿದ್ದಾರೆ.
ರೊಹಿಂಗ್ಯಾ ಮುಸ್ಲಿಮರು ಮತ್ತು ಪಾಕ್‌ ಮೂಲದ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ನಡುವೆ ಇತ್ತೀಚೆಗೆ ನಂಟು ಹೆಚ್ಚಾಗಿರುಧಿವುದನ್ನು ಭಾರತೀಯ ಗಡಿ ಭದ್ರತಾ
ಪಡೆ ಖಚಿತಪಡಿಸಿದೆ. ಮೂಲಗಳ ಪ್ರಕಾರ, ಜೆಇಎಂ ಉಗ್ರರು ರೊಹಿಂಗ್ಯಾಗಳ ಮನವೊಲಿಸಿ, ತರಬೇತಿ ನೀಡುತ್ತಿದ್ದಾರೆ. ಇದಕ್ಕಾಗಿ ಬಾಂಗ್ಲಾದಲ್ಲಿ ಸ್ಲೀಪರ್‌ಸೆಲ್‌
ಗಳನ್ನು ಜೆಇಎಂ ಸಕ್ರಿಯಗೊಳಿಸಿದೆ. ಅಲ್ಲದೆ, ಅಲ್ಲಿನ ಹರಿನ್‌ಮಾರಾ ಗುಡ್ಡಗಾಡು ಪ್ರದೇಶದಲ್ಲಿ ತರಬೇತಿ ಶಿಬಿರಗಳನ್ನೂ ಸ್ಥಾಪಿಸಲಾಗಿದೆ. ಜೆಇಎಂ ಕಮಾಂಡರ್‌
ಸಬರ್‌ ಅಹ್ಮದ್‌ಗೆ ಬಾಂಗ್ಲಾದ ರೊಹಿಂಗ್ಯಾ ಮುಸ್ಲಿಮರನ್ನು ಮೂಲಭೂತವಾದಿಗಳನ್ನಾಗಿ ಪರಿವರ್ತಿಸುವ ಜವಾಬ್ದಾರಿ ವಹಿಸಲಾಗಿದೆ. ಬಾಂಗ್ಲಾದ ತೀರ ಪ್ರದೇಶದ
ನಗರ ‘ಕಾಕ್ಸ್‌ ಬಜಾರ್‌’ನಲ್ಲಿರುವ ರೊಹಿಂಗ್ಯಾಗಳನ್ನು ಮುಖ್ಯವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಬಿಎಸ್‌ಎಫ್‌ ತನ್ನ ವರದಿಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ