ಆ್ಯಪ್ನಗರ

ನಿಲ್ಲದ ಪಾಕ್‌ ಕುಚೋದ್ಯ, ಮತ್ತೆ ಶೆಲ್‌ ದಾಳಿ

ಗಡಿಯಲ್ಲಿನಿಂತೇ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಭಾರತ ಖಡಕ್‌ ಎಚ್ಚರಿಕೆ ನೀಡಿದ ಬಳಿಕವೂ ಪಾಕಿಸ್ತಾನ ತನ್ನ ಕುಚೋದ್ಯ ನಿಲ್ಲಿಸಿಲ್ಲ.

Vijaya Karnataka Web 22 Oct 2019, 9:30 pm
ಜಮ್ಮು: ಪಾಕಿಸ್ತಾನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದರೂ ಮತ್ತೆ ಕ್ಯಾತೆ ತೆಗೆದಿದೆ.
Vijaya Karnataka Web ಯೋಧರು
ಯೋಧರು


ನೆರೆ ರಾಷ್ಟ್ರವು ಗಡಿ ನಿಯಂತ್ರಣ ರೇಖೆಯಲ್ಲಿ ಮಂಗಳವಾರವೂ ಕದನವಿರಾಮ ಉಲ್ಲಂಘಿಘಿಸಿ ಮಾರ್ಟರ್‌ ಶೆಲ್‌ ದಾಳಿ ಮುಂದುವರಿಸಿದ್ದು, ನೌಶೆರಾ ಸೆಕ್ಟರ್‌ನಲ್ಲಿ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯೊಬ್ಬರು ಪಾಕ್‌ ಗುಂಡೇಟಿನಿಂದ ಹುತಾತ್ಮರಾಗಿದ್ದಾರೆ. ಇನ್ನೊಂದೆಡೆ, ಎಲ್‌ಒಸಿ ಬಳಿಯ ಮೆಂಧರ್‌ ಸೆಕ್ಟರ್‌ನ ಬಾಲಾಕೋಟ್‌ ಪ್ರದೇಶದಲ್ಲಿ ಮಧ್ಯಾಹ್ನ 1.20ಕ್ಕೆ ಪಾಕ್‌ ಸೈನಿಕರು ಏಕಾಏಕಿಯಾಗಿ ಮಾರ್ಟರ್‌ ಶೆಲ್‌ ದಾಳಿ ನಡೆಸಿದ್ದಾರೆ. ಪರಿಣಾಮ ಗಡಿಯಲ್ಲಿನ ಗ್ರಾಮಗಳ ಇಬ್ಬರು ನಿವಾಸಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಬ್ಬರು ಪಾಕ್‌ ಪ್ರಜೆಗಳ ಬಂಧನ: ಪಂಜಾಬ್‌ನ ಗಡಿಯಲ್ಲಿ ಅನುಮಾನಾಸ್ಪದವಾಗಿ ತಿರಗಾಡುತ್ತಿದ್ದ ಇಬ್ಬರು ಪಾಕಿಸ್ತಾನಿಯರನ್ನು ಬಿಎಸ್‌ಎಫ್‌ ಯೋಧರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಪಾಕ್‌ನ ಒಕಾರಾ ಜಿಲ್ಲೆಯ ಮೊಹಮ್ಮದ್‌ ಲತೀಫ್‌ ಹಾಗೂ ಮೊಹಮ್ಮದ್‌ ಸೈಫ್‌ ಎಂದು ವಿಚಾರಣೆ ವೇಳೆ ಅವರು ಪರಿಚಯ ಬಹಿರಂಗಪಡಿಸಿದ್ದಾರೆ. ಏತನ್ಮಧ್ಯೆ, ಹುಸೈನಿವಾಲಾ ಸೆಕ್ಟರ್‌ನಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಮೂರು ಡ್ರೋನ್‌ಗಳು ಬಿಎಸ್‌ಎಫ್‌ ಯೋಧರು ಪತ್ತೆ ಮಾಡಿದ್ದಾರೆ. ಸೋಮವಾರ ಸಂಜೆ ಪಾಕಿಸ್ತಾನದ ಕಡೆಯಿಂದ ಈ ಡ್ರೋನ್‌ಗಳು ಹಾರಿಬಂದಿದ್ದವು ಎನ್ನಲಾಗಿದೆ.

ವಿದೇಶಿ ಗಣ್ಯರ ಕರೆದೊಯ್ದ ಪಾಕ್‌: ಪಿಒಕೆಯ ನೀಲಂ ಕಣಿವೆಯಲ್ಲಿಭಾರತ ಭಾನುವಾರ ದಾಳಿ ನಡೆಸಿದ ಸ್ಥಳಗಳಿಗೆ ಪಾಕಿಸ್ತಾನ ಮಂಗಳವಾರ ವಿದೇಶಿ ಗಣ್ಯರನ್ನು ಕರೆದೊಯ್ದಿತ್ತು. ''ಗಣ್ಯರಿಗೆ ಸ್ಥಳದಲ್ಲಿಯಾವುದೇ ರೀತಿಯ ದಾಳಿಯ ಕುರುಹುಗಳಾಗಲಿ, ಉಗ್ರರ ನೆಲೆಗಳಾಗಲಿ ಕಂಡಿಲ್ಲ. ಹಾಗಾದರೆ, ಪಾಕ್‌ನಲ್ಲಿಉಗ್ರರ ನೆಲೆ ಧ್ವಂಸಗೊಳಿಸಿದ್ದೇವೆ ಎಂದು ಹೇಳಿಕೊಂಡಿರುವ ಭಾರತೀಯ ಸೇನಾ ಮುಖ್ಯಸ್ಥ ರಾವತ್‌ ಅವರ ಹೇಳಿಕೆ ಕೇವಲ ಹೇಳಿಕೆ ಮಾತ್ರವೇ,'' ಎಂದು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮಹಮದ್‌ ಫೈಸಲ್‌ ಪ್ರಶ್ನಿಸಿದ್ದಾರೆ. ಭಾರತೀಯ ಅಧಿಕಾರಿಗಳು ಈ ನಿಯೋಗದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ