ಆ್ಯಪ್ನಗರ

ಪಾಕ್‌ ಸೈನ್ಯಕ್ಕೆ ಏನಾಗಿದೆ? ಗಡಿಯಲ್ಲಿ ಒಂದೇ ದಿನ 2 ಬಾರಿ ಶೆಲ್‍ ದಾಳಿ

ಕಿರ್ನಿ ಮತ್ತು ದೇಗ್ವಾರ್ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ ನಂತರ ಪಾಕಿಸ್ತಾನ ಪಡೆಗಳು ಕಿರ್ನಿ ಮತ್ತು ಕಸ್ಬಾ ವಲಯಗಳಲ್ಲೂ ಶೆಲ್‍ ದಾಳಿ ನಡೆಸಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Vijaya Karnataka Web 20 May 2020, 4:18 pm
ಜಮ್ಮು: ಜಮ್ಮು-ಕಾಶ್ಮೀರದ ಪೂಂಚ್‍ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆ ಒಂದೇ ದಿನದಲ್ಲಿ ಎರಡು ಬಾರಿ ಶೆಲ್‍ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ.
Vijaya Karnataka Web jammu kashmir


ಕಿರ್ನಿ ಮತ್ತು ದೇಗ್ವಾರ್ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ ನಂತರ ಪಾಕಿಸ್ತಾನ ಪಡೆಗಳು ಕಿರ್ನಿ ಮತ್ತು ಕಸ್ಬಾ ವಲಯಗಳಲ್ಲೂ ಶೆಲ್‍ ದಾಳಿ ನಡೆಸಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಬೆಳಿಗ್ಗೆ ಕದನ ವಿರಾಮ ಉಲ್ಲಂಘಿಸಿದ ನಂತರ, ಮತ್ತೆ ಮಧ್ಯಾಹ್ನ 1.15ಕ್ಕೆ ಪೂಂಚ್‌ ಜಿಲ್ಲೆಯ ಗಡಿನಿಯಂತ್ರಣಾ ರೇಖೆಯ ಕಿರ್ನಿ ಮತ್ತು ಕಸ್ಬಾ ವಲಯಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿವೆ. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

'ನಿಮ್ಮ ಕೊಳಕು ರಾಜಕೀಯ ನಿಲ್ಲಿಸಿ' ಕಾಂಗ್ರೆಸ್‌-ಬಿಜೆಪಿ ವಿರುದ್ಧ ಮಾಯಾವತಿ ಕೆಂಡಾಮಂಡಲ

ಇದಕ್ಕೂ ಮುನ್ನ, ಬೆಳಿಗ್ಗೆ 9.30ಕ್ಕೆ ಪಾಕ್‍ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವುದರ ಮೂಲಕ ಕಿರ್ನಿಯ ಗಡಿನಿಯಂತ್ರಣಾ ರೇಖೆ ಮತ್ತು ಪೂಂಚ್‌ನ ಡೆಗ್ವಾರ್ ವಲಯಗಳ ಉದ್ದಕ್ಕೂ ಮೊರ್ಟಾರ್‌ಗಳೊಂದಿಗೆ ಅಪ್ರಚೋದಿತ ಗುಂಡು ಹಾರಿಸುವ ಮೂಲಕ ಕದನ ವಿರಾಮ ಉಲ್ಲಂಘನೆ ಆರಂಭಿಸಿದ್ದವು.

ಮಂಗಳವಾರವೂ ಪಾಕಿಸ್ತಾನ ಪಡೆಗಳು ಮುನ್ನೆಲೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪೂಂಚ್‌ನ ಬಾಲಕೋಟ್‍ ಸೆಕ್ಟರ್ ಮತ್ತು ರಾಜೌರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ