ಆ್ಯಪ್ನಗರ

ಕರ್ತಾರಪುರ ಗುರುದ್ವಾರಕ್ಕೆ ನೀಡಿದ್ದ ಭೂಮಿ 42 ಎಕರೆಗೆ ಏರಿಕೆ

ಕರ್ತಾರಪುರ ಕಾರಿಡಾರ್‌ ಯೋಜನೆಯ ಶೇ. 80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. 42 ಎಕರೆಯಲ್ಲಿ ಗುರುದ್ವಾರಕ್ಕೆ ಸಂಬಂಧಿತ ನಿರ್ಮಾಣಗಳು ನಡೆಯಲಿವೆ. ಮತ್ತೊಂದೆಡೆ, ಸುತ್ತಲಿನ 62 ಎಕರೆಯನ್ನು ಕೃಷಿಗೆ ಮೀಸಲಿರಿಸಲಾಗಿದೆ ಎಂದು ಪಂಜಾಬ್‌ ಪ್ರಾಂತ್ಯದ ರಾಜ್ಯಪಾಲ ಚೌಧರಿ ಮೊಹಮ್ಮದ್‌ ಸಾರ್ವಾರ್‌ ಹೇಳಿದ್ದಾರೆ.

PTI 18 Jul 2019, 5:00 am
ಲಾಹೋರ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿನ ಸಿಖ್‌ ಧರ್ಮೀಯರ ಪವಿತ್ರ ಕ್ಷೇತ್ರ ದರ್ಬಾರ್‌ ಸಾಹಿಬ್‌ನಲ್ಲಿ ಗುರುದ್ವಾರಕ್ಕೆ ನೀಡಲಾಗಿದ್ದ ಭೂಮಿಯನ್ನು 3 ಎಕರೆಯಿಂದ 42 ಎಕರೆಗೆ ಪಾಕ್‌ ಸರಕಾರ ಹೆಚ್ಚಿಸಿದೆ.
Vijaya Karnataka Web kartarpur gurudwar


ಕರ್ತಾರಪುರ ಕಾರಿಡಾರ್‌ ಯೋಜನೆಯ ಶೇ. 80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. 42 ಎಕರೆಯಲ್ಲಿ ಗುರುದ್ವಾರಕ್ಕೆ ಸಂಬಂಧಿತ ನಿರ್ಮಾಣಗಳು ನಡೆಯಲಿವೆ. ಮತ್ತೊಂದೆಡೆ, ಸುತ್ತಲಿನ 62 ಎಕರೆಯನ್ನು ಕೃಷಿಗೆ ಮೀಸಲಿರಿಸಲಾಗಿದೆ ಎಂದು ಪಂಜಾಬ್‌ ಪ್ರಾಂತ್ಯದ ರಾಜ್ಯಪಾಲ ಚೌಧರಿ ಮೊಹಮ್ಮದ್‌ ಸಾರ್ವಾರ್‌ ಹೇಳಿದ್ದಾರೆ.

ಇದರೊಂದಿಗೆ ಗುರುದ್ವಾರ ದರ್ಬಾರ್‌ ಸಾಹಿಬ್‌ನ ಒಟ್ಟು ಪ್ರದೇಶ ವಿಸ್ತೀರ್ಣ 104 ಎಕರೆ ಆಗಿದೆ.
ಈ ವರ್ಷ ಗುರು ನಾನಕರ 550ನೇ ಜನ,್ಮವರ್ಷಾಚರಣೆ ಸಂಭ್ರಮಕ್ಕೂ ಮುನ್ನ ಕಾರಿಡಾರ್‌ ಯೋಜನೆ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ