ಆ್ಯಪ್ನಗರ

ಶಾಸಕರಿಗೂ ಬರಲಿದೆ ನೀತಿ ಸಂಹಿತೆ: ದೇಶಾದ್ಯಂತ ಒಂದೇ ಕಾನೂನು!

ವಿಧಾನಸಭೆ, ಪರಿಷತ್ ನಲ್ಲಿ ಸದಸ್ಯರ ಗದ್ದಲ, ಗಲಾಟೆಗಳಿಗೆ ಕಡಿವಾಣ ಹಾಕಲು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೊಸ ಉಪಾಯ ಹುಡುಕಿದ್ದಾರೆ. ಶಾಸಕರಿಗೆ ನೀತಿ ಸಂಹಿತೆ ರೂಪಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ

TIMESOFINDIA.COM 28 Aug 2019, 6:41 pm
ಹೊಸ ದಿಲ್ಲಿ: ದೇಶದ ಎಲ್ಲ ರಾಜ್ಯಗಳ ವಿಧಾನಸಭಾಧ್ಯಕ್ಷರು ಹಾಗೂ ಪರಿಷತ್ ಸಭಾಪತಿಗಳ ಸಮಿತಿ ರಚಿಸಿ, ಶಾಸಕರಿಗೆ ‘ನೀತಿ ಸಂಹಿತೆ’ ರೂಪಿಸಲು ಲೋಕಸಭಾಧ್ಯಕ್ಷ ಓಂ ಬಿರ್ಲಾ ನಿರ್ಧರಿಸಿದ್ದಾರೆ. 30ಕ್ಕೂ ಹೆಚ್ಚು ವಿಧಾನಸಭಾಧ್ಯಕ್ಷರು ಹಾಗೂ ವಿಧಾನಪರಿಷತ್ ಸಭಾಪತಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಲೋಕಸಭಾಧ್ಯಕ್ಷರು ಈ ನಿರ್ಧಾರ ಪ್ರಕಟಿಸಿದ್ದಾರೆ.
Vijaya Karnataka Web odisha assembly fight


ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ವಿಧಾನಸಭಾಧ್ಯಕ್ಷರೂ ‘ನೀತಿ ಸಂಹಿತೆ’ ಅತ್ಯಗತ್ಯ ಎಂದು ಹೇಳಿದ್ದಾರೆ, ಈ ಮೂಲಕ ರಾಜ್ಯ ವಿಧಾನಸಭೆಗಳ ಕಾರ್ಯವೈಖರಿಯಲ್ಲಿ ಸುಧಾರಣೆಯಾಗುತ್ತೆ ಎಂದು ಓಂ ಬಿರ್ಲಾ ಹೇಳಿದ್ದಾರೆ. ರಾಜ್ಯ ವಿಧಾನಸಭೆ ಹಾಗೂ ಪರಿಷತ್ ಗಳಿಗೆ ನೀತಿ ಸಂಹಿತೆ ಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ವಿಧಾನಸಭಾಧ್ಯಕ್ಷರ ಸಮಿತಿ ರಚಿಸಲಾಗುವುದು ಎಂದು ಓಂ ಬಿರ್ಲಾ ಪ್ರಕಟಿಸಿದ್ದಾರೆ. ಸಮಿತಿಯಲ್ಲಿ ವಿಧಾನ ಪರಿಷತ್ ಸಭಾಪತಿಗಳಿಗೂ ಸ್ಥಾನ ಕಲ್ಪಿಸಲಾಗಿದ್ದು, ಸಮಿತಿ ತನ್ನ ವರದಿಯನ್ನು ನವೆಂಬರ್ ನಲ್ಲಿ ಸಲ್ಲಿಕೆ ಮಾಡಬೇಕಿದೆ. ಬಳಿಕ ವರದಿಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಬಿರ್ಲಾ ಹೇಳಿದ್ದಾರೆ.

ಸಂಸತ್ ನ ಉಭಯ ಸದನಗಳ ಸದಸ್ಯರಿಗೂ ನೀತಿ ಸಂಹಿತೆ ರಚಿಸಲಾಗುವುದು ಎಂದು ಈ ಹಿಂದೆಯೇ ಓಂ ಬಿರ್ಲಾ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ