ಆ್ಯಪ್ನಗರ

ನ್ಯಾಯ, ಧರ್ಮಕ್ಕೆ ಜಯಸಿಗಲಿದೆ: ಪನ್ನೀರ್‌ ಸೆಲ್ವಂ

ಶಶಿಕಲಾ ನಟರಾಜನ್‌ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಿ ಬಂಡಾಯ ಎದ್ದಿರುವ ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 Feb 2017, 5:55 pm
ಚೆನ್ನೈ: ಶಶಿಕಲಾ ನಟರಾಜನ್‌ ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಿ ಬಂಡಾಯ ಎದ್ದಿರುವ ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ''ಸತ್ಯಕ್ಕೆ ಜಯವಿದೆ'' ಎಂದು ಹೇಳಿದ್ದಾರೆ.
Vijaya Karnataka Web panneerselvam met governor of tamil nadu
ನ್ಯಾಯ, ಧರ್ಮಕ್ಕೆ ಜಯಸಿಗಲಿದೆ: ಪನ್ನೀರ್‌ ಸೆಲ್ವಂ


ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ಬಳಿಕ ಪತ್ರಿಕಾ ಗೋಷ್ಠಿ ನಡೆಸಿರುವ ಪನ್ನೀರ್‌ಸೆಲ್ವಂ, ''ರಾಜ್ಯಪಾಲರಿಗೆ ಪ್ರಸಕ್ತ ತಮಿಳು ನಾಡಿನ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡಿದ್ದೇನೆ. ಧರ್ಮ ಎಂದೂ ಜಯಿಸುತ್ತದೆ. ನಾವು ಜಯಿಸುತ್ತೇವೆ. ನಮಗೆ ಈ ಕುರಿತು ಆತ್ಮವಿಶ್ವಾಸವಿದೆ. ನನ್ನನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆಗಳು'' ಎಂದು ಹೇಳಿದ್ದಾರೆ.

ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್‌ರನ್ನು ಭೇಟಿಯಾಗಿರುವ ಉಸ್ತುವಾರಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ತಾನು ಶಶಿಕಲಾ ಅವರ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿತ್ತು.

ಗುರುವಾರ ಸಂಜೆ ತಮಿಳುನಾಡಿಗೆ ಆಗಮಿಸಿದ ರಾಜ್ಯಪಾಲ ವಿದ್ಯಾಸಾಗರ್‌ ಅವರನ್ನು ಭೇಟಿಯಾಗಿದ್ದಾರೆ. ಸುಮಾರು 15 ನಿಮಿಷಗಳ ಕಾಲ ನಡೆದ ಜರ್ಚೆಯಲ್ಲಿ ಶಶಿಕಲಾ ವಿರುದ್ಧ ಸೆಲ್ವಂ ದೂರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭೇಟಿ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೆ ಪನ್ನೀರ್‌ ಸೆಲ್ವಂ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಬುಧವಾರದಂದು ನಡೆದ ಬೆಳವಣಿಗೆಯಲ್ಲಿ ಪನ್ನೀರ್ ಸೆಲ್ವಂ, ತಾನು ಬಹುಮತ ತೋರಿಸುವುದಾಗಿ ಹೇಳಿದ್ದರು. ಅಲ್ಲದೇ ಶಶಿಕಲಾ ಎಐಡಿಎಂಕೆ ಪಕ್ಷ ಹಾಗೂ ಸರಕಾರವನ್ನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ