ರಾಯ್ಪುರ: ಮೂಢನಂಬಿಕೆಗೊಳಗಾದ ಪರಿಣಾಮ ದಂಪತಿ ತಮ್ಮ 5 ತಿಂಗಳ ಮಗುವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಛತ್ತಿಸ್ಗಢದಲ್ಲಿ ನಡೆದಿದೆ.
ತಮ್ಮ ಮಗುವಿಗೆ ಒಳ್ಳೆಯದಾಗಲೆಂದು ನಾಗದೇವನ ಆಶೀರ್ವಾದ ಪಡೆಯಬೇಕೆಂದು ದಂಪತಿ ಮಗುವನ್ನು ಹಾವಾಡಿಗನ ಸುಪರ್ದಿಗೆ ನೀಡಿದ್ದರು. ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದಾಗ ವಿಷಪೂರಿತ ನಾಗರಹಾವು ಮಗುವಿಗೆ ಕಚ್ಚಿದೆ. ಆದರೆ ಹಾವು ವಿಷರಹಿತ ಎಂದ ಹಾವಾಡಿಗ ಎರಡು ಗಂಟೆಗಳವರೆಗೆ ಆಚರಣೆಗಳನ್ನು ಮುಂದುವರೆಸಿದ್ದಾನೆ. ಮಗುವಿನ ಉಸಿರು ನಿಧಾನವಾಗುತ್ತಿದ್ದಂತೆ ಹೌಹಾರಿದ ಪೋಷಕರು ಅದನ್ನೆತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ಅದಾಗಲೇ ಮಗುವಿನ ದೇಹಕ್ಕೆ ಸಂಪೂರ್ಣವಾಗಿ ವಿಷ ವ್ಯಾಪಿಸಿದ್ದು ಕೊನೆಯುಸಿರೆಳೆದಿದೆ.
ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ಮಗುವಿನ ಮನೆಗೆ ಬಂದು ನಾಗ ದೇವತೆಯ ಆಶೀರ್ವಾದ ಕೊಡಿಸಲು ಮಗುವನ್ನು ಕೊಡಿ ಎಂದು ಕೇಳಿದ್ದ. ಮಗು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದು ನಾಗದೇವನ ಆಶೀರ್ವಾದ ಪಡೆದ ಸರಿಹೋಗಬಹುದೆಂಬ ಮೂಢನಂಬಿಕೆಯಿಂದ ತಂದೆ-ತಾಯಿ ಹಾವಾಡಿಗನ ಮಾತಿಗೆ ತಲೆಯಾಡಿಸಿದರು. ಅದರಂತೆ ನಾಗರಪೂಜೆಯನ್ನು ಆಯೋಜಿಸಲಾಯ್ತು . ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದಾಗ ಬಿಲ್ಲು ಮಗುವಿನ ಕೊರಳಿಗೆ ಹಾವನ್ನು ಸುತ್ತಿದ್ದ. ಆ ಸಂದರ್ಭದಲ್ಲಿ ಹಾವು ಕಚ್ಚಿದೆ ಎಂದು ತಿಳಿದು ಬಂದಿದೆ.
ಬಿಲ್ಲುವನ್ನು ವಶಕ್ಕೆ ಪಡೆದ ಸ್ಥಳೀಯರು, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಾವಿನ ವಿಷದ ಹಲ್ಲನ್ನು ಕಿತ್ತಿರುವುದಾಗಿ ಬಿಲ್ಲು ಹೇಳಿದ್ದರಿಂದ ಮಗುವಿನ ಕೊರಳಿಗೆ ಹಾವನ್ನು ಸುತ್ತುವಾಗ ಸುಮ್ಮನಿದ್ದೆವು ಎಂದು ಮಗುವನ್ನು ಕಳೆದುಕೊಂಡಿರುವ ತಂದೆ-ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಮ್ಮ ಮಗುವಿಗೆ ಒಳ್ಳೆಯದಾಗಲೆಂದು ನಾಗದೇವನ ಆಶೀರ್ವಾದ ಪಡೆಯಬೇಕೆಂದು ದಂಪತಿ ಮಗುವನ್ನು ಹಾವಾಡಿಗನ ಸುಪರ್ದಿಗೆ ನೀಡಿದ್ದರು. ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದಾಗ ವಿಷಪೂರಿತ ನಾಗರಹಾವು ಮಗುವಿಗೆ ಕಚ್ಚಿದೆ. ಆದರೆ ಹಾವು ವಿಷರಹಿತ ಎಂದ ಹಾವಾಡಿಗ ಎರಡು ಗಂಟೆಗಳವರೆಗೆ ಆಚರಣೆಗಳನ್ನು ಮುಂದುವರೆಸಿದ್ದಾನೆ. ಮಗುವಿನ ಉಸಿರು ನಿಧಾನವಾಗುತ್ತಿದ್ದಂತೆ ಹೌಹಾರಿದ ಪೋಷಕರು ಅದನ್ನೆತ್ತಿಕೊಂಡು ಆಸ್ಪತ್ರೆಗೆ ಓಡಿದ್ದಾರೆ. ಆದರೆ ಅದಾಗಲೇ ಮಗುವಿನ ದೇಹಕ್ಕೆ ಸಂಪೂರ್ಣವಾಗಿ ವಿಷ ವ್ಯಾಪಿಸಿದ್ದು ಕೊನೆಯುಸಿರೆಳೆದಿದೆ.
ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ಮಗುವಿನ ಮನೆಗೆ ಬಂದು ನಾಗ ದೇವತೆಯ ಆಶೀರ್ವಾದ ಕೊಡಿಸಲು ಮಗುವನ್ನು ಕೊಡಿ ಎಂದು ಕೇಳಿದ್ದ. ಮಗು ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದು ನಾಗದೇವನ ಆಶೀರ್ವಾದ ಪಡೆದ ಸರಿಹೋಗಬಹುದೆಂಬ ಮೂಢನಂಬಿಕೆಯಿಂದ ತಂದೆ-ತಾಯಿ ಹಾವಾಡಿಗನ ಮಾತಿಗೆ ತಲೆಯಾಡಿಸಿದರು. ಅದರಂತೆ ನಾಗರಪೂಜೆಯನ್ನು ಆಯೋಜಿಸಲಾಯ್ತು . ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದಾಗ ಬಿಲ್ಲು ಮಗುವಿನ ಕೊರಳಿಗೆ ಹಾವನ್ನು ಸುತ್ತಿದ್ದ. ಆ ಸಂದರ್ಭದಲ್ಲಿ ಹಾವು ಕಚ್ಚಿದೆ ಎಂದು ತಿಳಿದು ಬಂದಿದೆ.
ಬಿಲ್ಲುವನ್ನು ವಶಕ್ಕೆ ಪಡೆದ ಸ್ಥಳೀಯರು, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಾವಿನ ವಿಷದ ಹಲ್ಲನ್ನು ಕಿತ್ತಿರುವುದಾಗಿ ಬಿಲ್ಲು ಹೇಳಿದ್ದರಿಂದ ಮಗುವಿನ ಕೊರಳಿಗೆ ಹಾವನ್ನು ಸುತ್ತುವಾಗ ಸುಮ್ಮನಿದ್ದೆವು ಎಂದು ಮಗುವನ್ನು ಕಳೆದುಕೊಂಡಿರುವ ತಂದೆ-ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.