ಆ್ಯಪ್ನಗರ

ಗಜ ಚಂಡಮಾರುತದಿಂದ ಇದ್ದ ಮನೆಯೂ ನಾಶ; 12 ವರ್ಷದ ಮಗನ ಮಾರಾಟ

ತಂಜಾಪೂರ್ ಜಿಲ್ಲೆಯ ಪಟ್ಟುಕೊಟ್ಟೈನಲ್ಲಿ ದಿನಗೂಲಿ ಮಾಡಿಕೊಂಡಿರುವ ಈತನ ತಂದೆತಾಯಿ 10ಸಾವಿರಕ್ಕೆ ಈತನನ್ನು ಮಾರಿದ್ದಾಗಿ ತಿಳಿದುಬಂದಿದೆ.

TIMESOFINDIA.COM 28 Dec 2018, 3:54 pm
ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಪಣಂಗುಡಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 12 ವರ್ಷದ ಹುಡುಗನನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
Vijaya Karnataka Web Child labour


ತಂಜಾಪೂರ್ ಜಿಲ್ಲೆಯ ಪಟ್ಟುಕೊಟ್ಟೈನಲ್ಲಿ ದಿನಗೂಲಿ ಮಾಡಿಕೊಂಡಿರುವ ಈತನ ತಂದೆತಾಯಿ 10ಸಾವಿರಕ್ಕೆ ಈತನನ್ನು ಮಾರಿದ್ದಾಗಿ ತಿಳಿದುಬಂದಿದೆ.

ನಾವು ಕಡು ಬಡವರಾಗಿದ್ದು, ಗಜ ಚಂಡಮಾರುತದಿಂದ ಇದ್ದ ಸೂರು, ಆಸ್ತಿಪಾಸ್ತಿಯನ್ನು ಕಳೆದುಕೊಂಡೆವು. ಹೀಗಾಗಿ ಮಗನನ್ನು 10ಸಾವಿರ ರೂಪಾಯಿಗೆ ಚಂದ್ರು ಎಂಬಾತನಿಗೆ ಮಾರಿದೆವು. ಅವರ ಜಾನುವಾರುಗಳನ್ನು ನೋಡಿಕೊಳ್ಳುವ ಕೆಲಸವನ್ನು ನಮ್ಮ ಮಗನಿಗೆ ನೀಡಲಾಗಿತ್ತು ಎಂದು ದಂಪತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಮಕ್ಕಳ ಸಹಾಯವಾಣಿ ಅಧಿಕಾರಿಗಳು ಡಿಸೆಂಬರ್ 22ರಂದು ಬಾಲಕನನ್ನು ರಕ್ಷಿಸಿದ್ದಾರೆ.

ಸದ್ಯ ಬಾಲಕನಿಗೆ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಬಾಲಕನನ್ನು ಕೊಂಡುಕೊಂಡಿದ್ದ ಚಂದ್ರು ವಿರುದ್ಧ ನಾಗೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ