ಕೋಳಿಕ್ಕೋಡ್: ಕೇರಳದ ಕೋಳಿಕ್ಕೋಡ್ನಲ್ಲಿ ನಡೆದ ವಿಮಾನ ಅವಘಡದಲ್ಲಿ ಸಾವನಪ್ಪಿದ ಪ್ರಯಾಣಿಕನೊಬ್ಬನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಸಾವನಪ್ಪಿದ 18 ಮಂದಿಯ ಪೈಕಿ ಓರ್ವ ಪ್ರಯಾಣಿಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಸುಮಾರು 7.40 ಕ್ಕೆ ಕೋಳಿಕ್ಕೋಡ್ನ ವಿಮಾನ ನಿಲ್ಧಾಣದಲ್ಲಿ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ವಿಮಾನ ಎರಡು ಹೋಳಾಗಿದೆ ಅದೃಷ್ಟವಶಾತ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಭಾರೀ ಮಳೆ ಇದ್ದ ಹಿನ್ನೆಲೆ ರನ್ವೇಯಲ್ಲಿ ವಿಮಾನ ಸ್ಕಿಡ್ ಆದ ಪರಿಣಾಮ ಈ ರೀತಿಯ ಅಫಘಾತ ಸಂಭವಿಸಿತ್ತು.
ಇನ್ನು ದೊಟ್ಟ ಮಟ್ಟದ ಅಪಾಯವನ್ನ ತಪ್ಪಿಸಿದಕ್ಕೆ ಪೈಲಟ್ ದೀಪಕ್ ಸಾಠೆ ಬಗ್ಗೆ ಎಲ್ಲರೂ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಮಾನಯಾನ ಸಚಿವಾಲಯದ ಮೂಲಗಳ ಪ್ರಕಾರ, ದೀಪಕ್ ಸಾಠೆ ಅವರು ಈ ಏರ್ಪೋರ್ಟ್ನಲ್ಲಿ ಇಪ್ಪತ್ತೇಳಕ್ಕಿಂತಲೂ ಹೆಚ್ಚು ಬಾರಿ ವಿಮಾನವನ್ನ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ತಿಳಿಸಿದೆ.
ಕೇರಳ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಆದರೆ ನಿನ್ನೆ ನಡೆದ ಘಟನೆಯಲ್ಲಿ ದೀಪಕ್ ಶತಾಯಗತಾಯ ಸೇಫ್ ಲ್ಯಾಂಡಿಂಗ್ಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಮೊದಲ ರನ್ ವೇನಲ್ಲಿ ಸಾಧ್ಯವಾಗದ ಹಿನ್ನೆಲೆ ಮತ್ತೊಂದು ರನ್ ವೇನಲ್ಲಿ ಲ್ಯಾಂಡಿಂಗ್ ಮಾಡಿದ್ದರು. ಆದರೆ ಅಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋಳಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸಂತ್ರಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಇನ್ನೊಂದೆಡೆ ವಿಮಾನ ಅಪಘಾತ ತನಿಖಾ ಸಂಸ್ಥೆ, ಅಪಘಾತಗೊಂಡ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನ್ನ ತೆಗೆದುಕೊಂಡು ಹೋಗಿದೆ.
ನಿನ್ನೆ ರಾತ್ರಿ ಸುಮಾರು 7.40 ಕ್ಕೆ ಕೋಳಿಕ್ಕೋಡ್ನ ವಿಮಾನ ನಿಲ್ಧಾಣದಲ್ಲಿ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ವಿಮಾನ ಎರಡು ಹೋಳಾಗಿದೆ ಅದೃಷ್ಟವಶಾತ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಭಾರೀ ಮಳೆ ಇದ್ದ ಹಿನ್ನೆಲೆ ರನ್ವೇಯಲ್ಲಿ ವಿಮಾನ ಸ್ಕಿಡ್ ಆದ ಪರಿಣಾಮ ಈ ರೀತಿಯ ಅಫಘಾತ ಸಂಭವಿಸಿತ್ತು.
ಇನ್ನು ದೊಟ್ಟ ಮಟ್ಟದ ಅಪಾಯವನ್ನ ತಪ್ಪಿಸಿದಕ್ಕೆ ಪೈಲಟ್ ದೀಪಕ್ ಸಾಠೆ ಬಗ್ಗೆ ಎಲ್ಲರೂ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಮಾನಯಾನ ಸಚಿವಾಲಯದ ಮೂಲಗಳ ಪ್ರಕಾರ, ದೀಪಕ್ ಸಾಠೆ ಅವರು ಈ ಏರ್ಪೋರ್ಟ್ನಲ್ಲಿ ಇಪ್ಪತ್ತೇಳಕ್ಕಿಂತಲೂ ಹೆಚ್ಚು ಬಾರಿ ವಿಮಾನವನ್ನ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ತಿಳಿಸಿದೆ.
ಕೇರಳ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಆದರೆ ನಿನ್ನೆ ನಡೆದ ಘಟನೆಯಲ್ಲಿ ದೀಪಕ್ ಶತಾಯಗತಾಯ ಸೇಫ್ ಲ್ಯಾಂಡಿಂಗ್ಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಮೊದಲ ರನ್ ವೇನಲ್ಲಿ ಸಾಧ್ಯವಾಗದ ಹಿನ್ನೆಲೆ ಮತ್ತೊಂದು ರನ್ ವೇನಲ್ಲಿ ಲ್ಯಾಂಡಿಂಗ್ ಮಾಡಿದ್ದರು. ಆದರೆ ಅಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೋಳಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸಂತ್ರಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಇನ್ನೊಂದೆಡೆ ವಿಮಾನ ಅಪಘಾತ ತನಿಖಾ ಸಂಸ್ಥೆ, ಅಪಘಾತಗೊಂಡ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್, ಕಾಕ್ಪಿಟ್ ವಾಯ್ಸ್ ರೆಕಾರ್ಡರ್ನ್ನ ತೆಗೆದುಕೊಂಡು ಹೋಗಿದೆ.