ಆ್ಯಪ್ನಗರ

ವಿಮಾನ ಪ್ರಯಾಣಿಕರಿಗೆ ಕೇಂದ್ರದಿಂದ ಗುಡ್‌ ನ್ಯೂಸ್

ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ ಶುಭಸುದ್ದಿ ನೀಡಿದ್ದು, ವಿಮಾಣ ಹಾರಾಟ ರದ್ದಾದರೆ ಮತ್ತು ವಿಳಂಬವಾದರೆ ಪ್ರಯಾಣಿಕನಿಗೆ ವಿಮಾನಯಾನ ಸಂಸ್ಥೆ ಪರಿಹಾರ ನೀಡುವ ಪ್ರಸ್ತಾವನೆಯನ್ನು ಸರಕಾರ ಸಿದ್ಧಪಡಿಸುತ್ತಿದೆ

Vijaya Karnataka Web 22 May 2018, 8:38 pm
ಹೊಸದಿಲ್ಲಿ: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರಕಾರ ಶುಭಸುದ್ದಿ ನೀಡಿದ್ದು, ವಿಮಾಣ ಹಾರಾಟ ರದ್ದಾದರೆ ಮತ್ತು ವಿಳಂಬವಾದರೆ ಪ್ರಯಾಣಿಕನಿಗೆ ವಿಮಾನಯಾನ ಸಂಸ್ಥೆ ಪರಿಹಾರ ನೀಡುವ ಪ್ರಸ್ತಾವನೆಯನ್ನು ಸರಕಾರ ಸಿದ್ಧಪಡಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.
Vijaya Karnataka Web jayanth sinha


ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸ್ವಾತಂತ್ರ್ಯ ಮತ್ತು ಪ್ರಯಾಣಿಕರ ಸ್ನೇಹಿ ನೀತಿಗಳನ್ನು ಜಾರಿಗೆ ತರಲು ನಿರ್ದೇಶಿಸಿದ್ದು, ಶೀಘ್ರದಲ್ಲಿ ಅನ್ವಯವಾಗಲಿದೆ. ಪರಿಹಾರದ ಮೊತ್ತ ಮತ್ತು ಯಾವ ರೀತಿಯ ಪರಿಹಾರ ಅನ್ವಯವಾಗಲಿದೆ ಎನ್ನುವುದರ ಬಗ್ಗೆ ಮಾರ್ಗದರ್ಶಿ ಸೂತ್ರ ರಚಿಸಲಾಗುತ್ತಿದೆ. ಅಲ್ಲದೆ ಪರಿಹಾರ ನೀಡಲು ವಿಳಂಬವಾದರೆ ಮತ್ತು ಪರಿಹಾರ ನೀಡದೇ ಇದ್ದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆ ಮೇಲೆ ದಂಡ ವಿಧಿಸುವ ನಿಯಮವೂ ಜಾರಿಗೆ ಚಿಂತನೆ ನಡೆದಿದೆ. ವಿಮಾನಯಾನ ಸಂಸ್ಥೆ ಜತೆ ಚರ್ಚಿಸಿ, ಕರಡು ಪ್ರತಿಯಲ್ಲಿ ಅಗತ್ಯವಿದ್ದಲ್ಲಿ ಬದಲಾವಣೆ ತರಲಾಗುತ್ತದೆ ಎಂದು ಸಚಿವ ಸಿನ್ಹಾ ಹೇಳಿದ್ದಾರೆ.

ನಿಯಮ ಅನ್ವಯ:
ಹವಾಮಾನ ವೈಪರೀತ್ಯ ಮತ್ತು ತುರ್ತು ಪರಿಸ್ಥಿತಿ ಹೊರತುಪಡಿಸಿ, ಉಳಿದಂತೆ ವಿಮಾನಯಾನ ರದ್ದಾದರೆ ಮಾತ್ರ ಪರಿಹಾರ ಲಭ್ಯವಾಗಲಿದೆ.

ಟಿಕೆಟ್ ರದ್ದತಿ ನಿಯಮ ಪರಿಷ್ಕರಣೆ: ದೇಶೀಯ ಪ್ರಯಾಣದ ಟಿಕೆಟ್ ರದ್ದು ಮಾಡುವ ಸಂದರ್ಭದಲ್ಲೂ ದಂಡ ವಿಧಿಸುವ ಕ್ರಮದ ಕುರಿತು ಕರಡು ಪ್ರಸ್ತಾವನೆ ಸಲ್ಲಿಸಿದ್ದು, ಟಿಕೆಟ್ ರದ್ದುಪಡಿಸಿದರೆ ದಂಡ ವಿಧಿಸುವ ಕ್ರಮಕ್ಕೂ ಕಡಿವಾಣ ಬೀಳುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ