ಆ್ಯಪ್ನಗರ

ಅಯೋಧ್ಯೆಯಲ್ಲಿ ಪತಂಜಲಿ ಬೃಹತ್‌ 'ಗುರುಕುಲ' ಸ್ಥಾಪಿಸಲಿದೆ:ಯೋಗ ಗುರು ಬಾಬಾ ರಾಮ್‌ದೇವ್‌

ದೇಶದಲ್ಲಿ ರಾಮ ರಾಜ್ಯ ಸ್ಥಾಪನೆಗಾಗಿ ಪತಂಜಲಿ ಯೋಗ ಪೀಠವು ಅಯೋಧ್ಯೆಯಲ್ಲಿ ಬೃಹತ್‌ ಗುರುಕುಲವನ್ನು ಸ್ಥಾಪಿಸಲಿದೆ. ಅಲ್ಲಿ ಜಗತ್ತಿನ ಯಾವುದೇ ಮೂಲಯ ಜನರು ಬಂದು ವೇದ ಮತ್ತು ಆಯುರ್ವೇದದ ಬಗ್ಗೆ ಅಧ್ಯಯನ ಮಾಡಬಹುದು ಎಂದು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

Vijaya Karnataka 6 Aug 2020, 7:11 am
ಅಯೋಧ್ಯೆ: ರಾಮ ಮಂದಿರ ನಿರ್ಮಾಣದೊಂದಿಗೆ ಪ್ರಮುಖ ಪುಣ್ಯ ಕ್ಷೇತ್ರವಾಗಿ ಆಕರ್ಷಣೆ ಪಡೆಯಲಿರುವ ಅಯೋಧ್ಯೆಯಲ್ಲಿ ಬೃಹತ್‌ ಗುರುಕುಲವನ್ನು ಸ್ಥಾಪನೆ ಮಾಡುವುದಾಗಿ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ''ಭೂಮಿ ಪೂಜೆಯ ಐತಿಹಾಸಿಕ ದಿನಕ್ಕೆ ಇಡೀ ದೇಶ ಬುಧವಾರ ಸಾಕ್ಷಿಯಾಗಿರುವುದು ನಮ್ಮ ಅದೃಷ್ಟ.
Vijaya Karnataka Web Een5wUoU8AE4i2s


ದೇಶದಲ್ಲಿ ರಾಮ ರಾಜ್ಯ ಸ್ಥಾಪನೆಗಾಗಿ ಪತಂಜಲಿ ಯೋಗ ಪೀಠವು ಅಯೋಧ್ಯೆಯಲ್ಲಿ ಬೃಹತ್‌ ಗುರುಕುಲವನ್ನು ಸ್ಥಾಪಿಸಲಿದೆ. ಅಲ್ಲಿ ಜಗತ್ತಿನ ಯಾವುದೇ ಮೂಲಯ ಜನರು ಬಂದು ವೇದ ಮತ್ತು ಆಯುರ್ವೇದದ ಬಗ್ಗೆ ಅಧ್ಯಯನ ಮಾಡಬಹುದು,'' ಎಂದು ಅವರು ತಿಳಿಸಿದ್ದಾರೆ. ಭೂಮಿ ಪೂಜೆಯ ವಿಶೇಷ ಆಹ್ವಾನಿತರಲ್ಲಿ ಒಬ್ಬರಾಗಿದ್ದ ಬಾಬಾ ರಾಮ್‌ ದೇವ್‌ ಒಂದು ದಿನ ಮೊದಲೇ ಅಯೋಧ್ಯೆಗೆ ಆಗಮಿಸಿದ್ದರು. ಹನುಮಾನ್‌ ಗಢಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಇನ್ನು ಇದಕ್ಕೂ ಮೊದಲು ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ ಎಂದು ಭೂಮಿ ಪೂಜೆ ಸಂಬಂಧ ಸಂತೋಷ ವ್ಯಕ್ತಪಡಿಸಿದರು. ರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವು ವರ್ಷಗಳಿಂದ ಬಾಬಾ ರಾಮ್‌ದೇವ್‌ ಕೂಡ ಒತ್ತಾಯಿಸುತ್ತಲೆ ಬಂದಿದ್ದರು.
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಜಿಸಿ ಮುರ್ಮು ರಾಜೀನಾಮೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ