ಆ್ಯಪ್ನಗರ

ದೇಶದ ಮೊದಲ ಲೋಕಪಾಲರಾಗಿ ಪಿ.ಸಿ. ಘೋಷ್‌ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ಲೋಕಪಾಲರ ನೇಮಕಕ್ಕೆ ಕೇಂದ್ರ ಸರಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತ ಬಂದಿದ್ದವು. ಈಗ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನೇಮಕ ನಡೆದಿದೆ.

Vijaya Karnataka Web 19 Mar 2019, 10:03 pm
ಹೊಸದಿಲ್ಲಿ: ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟ್ ಮಾಜಿ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ.
Vijaya Karnataka Web ಪಿಸಿ ಘೋಷ್‌
ಪಿಸಿ ಘೋಷ್‌


ಜಸ್ಟೀಸ್‌ ಪಿ.ಸಿ.ಘೋಷ್ ಅವರನ್ನು ಮೊದಲ ಲೋಕಪಾಲರಾಗಿ ನೇಮಿಸಲು ಕಳೆದ ವಾರ ನಿರ್ಧಾರ ಕೈಗೊಳ್ಳಲಾಗಿತ್ತು.

ಸಶಸ್ತ್ರ ಸೀಮಾ ದಳದ ಮಾಜಿ ಮುಖ್ಯಸ್ಥ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರ ನಿವೃತ್ತ ಮುಖ್ಯ ಕಾರ್ಯದರ್ಶಿ ದಿನೇಶ್‌ ಕುಮಾರ್‌ ಜೈನ್‌, ಮಹೇಂದರ್ ಸಿಂಗ್‌, ಇಂದ್ರಜಿತ್‌ ಪ್ರಸಾದ್‌ ಗೌತಮ್‌ ಅವರನ್ನು ನ್ಯಾಯಾಂಗೇತರ ಸದಸ್ಯರಾಗಿ ನೇಮಕ ಮಾಡಲಾಗಿದೆ.

ನ್ಯಾಯಮೂರ್ತಿಗಳಾದ ದಿಲೀಪ್‌ ಬಿ. ಭೋಸಲೆ, ಪ್ರದೀಪ್‌ಕುಮಾರ್‌ ಮೊಹಾಂತಿ, ಅಭಿಲಾಷಾಕುಮಾರಿ ಮತ್ತು ಅಜಯ್‌ಕುಮಾರ್‌ ತ್ರಿಪಾಠಿ ನ್ಯಾಯಾಂಗ ಸದಸ್ಯರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಈ ಹೆಸರುಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಂಗಳವಾರ ಸಮ್ಮತಿ ಸೂಚಿಸಿದ್ದಾರೆ.

ಲೋಕಪಾಲರ ನೇಮಕಕ್ಕೆ ಕೇಂದ್ರ ಸರಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತ ಬಂದಿದ್ದವು. ಈಗ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನೇಮಕ ನಡೆದಿದೆ.

ಸದ್ಯ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ( ಎನ್ ಎಚ್ ಆರ್ ಸಿ) ಸದಸ್ಯರಾಗಿರುವ ಜಸ್ಟೀಸ್‌ ಪಿ.ಸಿ.ಘೋಷ್, ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ, ಮೇ 2017 ರಂದು ಜಸ್ಟೀಸ್‌ ಘೋಷ್‌ ನಿವೃತ್ತರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ