ಆ್ಯಪ್ನಗರ

Air Strike: ಶುರುವಾಯ್ತು ರಾಜಕೀಯ! ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೆಹಬೂಬ

ಉಗ್ರರು ನಡೆಸಿದ್ದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹತ್ಯೆಗೈದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ ಸಹಿತ ಹಲವರು ಸಂಶಯ ವ್ಯಕ್ತಪಡಿಸಿ, ದಾಳಿ ನಡೆಸಿದ್ದರೆ ಪ್ರೂಫ್ ಕೊಡಿ ಎಂದು ಕೇಳಿದ್ದರು.

Vijaya Karnataka Web 26 Feb 2019, 12:53 pm
ಹೊಸದಿಲ್ಲಿ: ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆದು ಕೆಲವು ಗಂಟೆಗಳೇ ಕಳೆದಿಲ್ಲ. ಆದರೆ ಆಗಲೇ ಜಮ್ಮು ಕಾಶ್ಮೀರ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇನಾದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web ex-jk-cm-mehbooba-mufti-insults-martyrs-kin-says-those-seeking-revenge-are-illiterate


ಕಳೆದ ಬಾರಿ ಉರಿಯಲ್ಲಿ ನಮ್ಮ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ್ದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹತ್ಯೆಗೈದಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ ಸಹಿತ ಹಲವರು ಸಂಶಯ ವ್ಯಕ್ತಪಡಿಸಿ, ದಾಳಿ ನಡೆಸಿದ್ದರೆ ಪ್ರೂಫ್ ಕೊಡಿ ಎಂದು ಕೇಳಿದ್ದರು.

ಇದೀಗ ಅದೇ ಮಾದರಿಯಲ್ಲಿ ಗಡಿನಿಯಂತ್ರಣ ರೇಖೆ ದಾಟಿ ಪಾಕ್ ಉಗ್ರನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು, ಸುಮಾರು 300ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದಿರುವ ಸಾಧ್ಯತೆಯಿದೆ.

ಜತೆಗೆ ಉಗ್ರರ ತರಬೇತಿ ಶಿಬಿರ, ಅಡಗುದಾಣವನ್ನು ವಾಯುಪಡೆ ಧ್ವಂಸಗೊಳಿಸಿದೆ. ಆದರೆ ಜಮ್ಮ ಕಾಶ್ಮೀರದ ಮಾಜಿ ಸಿಎಂ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬಾಲಕೋಟ್‌ನಲ್ಲಿ ಉಗ್ರರ ನೆಲೆ ಮೇಲೆ ದಾಳಿ ನಡೆಸಿರುವುದನ್ನು ಒಪ್ಪಿಲ್ಲ. ದಾಳಿ ಕುರಿತು ಮೆಹಬೂಬಾ ಸಂಶಯ ವ್ಯಕ್ತಪಡಿಸಿದ್ದಾರೆ.

ಜತೆಗೆ ಉಗ್ರದಾಳಿಗೆ ಪ್ರತಿಯಾಗಿ ಭಾರತ ದಾಳಿ ನಡೆಸುವುದಕ್ಕೂ ಮೆಹಬೂಬ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತ್ಯೇಕತಾವಾದಿಗಳ ಪರ ಹೇಳಿಕೆ ನೀಡಿದ್ದರು. ಅಲ್ಲದೆ ಸೇಡು ತೀರಿಸಿಕೊಳ್ಳಲು ದಾಳಿ ನಡೆಸುವುದು, ಯುದ್ಧ ಕೈಗೊಳ್ಳುವುದು ಸೂಕ್ತವಲ್ಲ ಎಂದು ಹುತಾತ್ಮ ಯೋಧರನ್ನು ಅವಮಾನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ