-ನಿಯಮ ಅನುಸರಿಸದ ಪರಿಣಾಮ 5 ಕೋಟಿ ರೂ. ದಂಡ, ಶ್ರೀ ಶ್ರೀ ಉತ್ಸವಕ್ಕೆ ಷರತ್ತು ಬದ್ಧ ಅನುಮತಿ-
ಹೊಸ ದಿಲ್ಲಿ: ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ದಿಲ್ಲಿಯಲ್ಲಿ ಮಾರ್ಚ್ 11ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ. ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ ಐದು ಕೋಟಿ ರೂಪಾಯಿ ದಂಡ ಕಟ್ಟುವಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಪೀಠವು ಸೂಚಿಸಿದೆ. ಜತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ಗೆ ನ್ಯಾಯಪೀಠವು ಆದೇಶಿಸಿದೆ.
ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಆರೋಪಿಸಿ, ಪರಿಸರವಾದಿ ಆನಂದ ಆರ್ಯ, ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠವು ದಿಲ್ಲಿ ಅಭಿವೃದ್ಧಿ ಮಂಡಳಿಗೆ 5 ಲಕ್ಷ ರೂ. ಮತ್ತು ದಿಲ್ಲಿ ಮಾಲಿನ್ಯ ಮಂಡಳಿಗೆ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿತು. ಉತ್ಸವ ಆರಂಭಕ್ಕೂ ಮುನ್ನ ಅಂದರೆ ಶುಕ್ರವಾರವೇ ಆರ್ಟ್ ಆಫ್ ಲಿವಿಂಗ್ ಪೌಂಡೇಶನ್ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಪೀಠವು ಸೂಚಿಸಿದೆ.
ಕಾರ್ಯಕ್ರಮ ಮುಗಿದ ಬಳಕ ಪರಿಸರಕ್ಕೆ ಆಗಿರುವ ಹಾನಿಯನ್ನು ಲೆಕ್ಕಹಾಕಿ ಮತ್ತಷ್ಟು ದಂಡ ವಿಧಿಸುವ ಬಗ್ಗೆ ನಿರ್ಧರಿಸುವುದಾಗಿಯೂ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠವು ಹೇಳಿತು.
ಅರ್ಜಿಯಲ್ಲಿ ಏನಿತ್ತು?: ದಿಲ್ಲಿ - ನೋಯ್ಡಾ ಭಾಗದಲ್ಲಿನ ಸಾವಿರ ಎಕರೆ ತುಂಬಾ ಸೂಕ್ಷ್ಮ ಪ್ರದೇಶವಾಗಿದ್ದು, ರವಿಶಂಕರ್ ಗುರೂಜಿ ಅವರ ಸಂಸ್ಕೃತಿ ಉತ್ಸವದಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೀಗಾಗಿ ಪರಿಹಾರ ನೀಡುವಂತೆ ಕೋರಿ, ಪರಿಸರವಾದಿ ಆನಂದ ಆರ್ಯ ಅರ್ಜಿ ಸಲ್ಲಿಸಿದ್ದರು.
---
ನಾನಾ ದೇಶಗಳ ಧರ್ಮ ಮತ್ತು ಸಿದ್ದಾಂತಗಳೊಂದಿಗೆ ಎಲ್ಲ ಸಂಸ್ಕೃತಿ ಒಗ್ಗೂಡಿಸಲು ಈ ಉತ್ಸವವನ್ನು ಆಯೋಜಿಸಲಾಗಿದೆ.ಹೀಗಾಗಿ ಇದರಲ್ಲಿ ರಾಜಕೀಯ ಬೆರಸಿಬೇಡಿ.
- ಶ್ರೀ ಶ್ರೀ ರವಿಶಂಕರ್ ಗುರೂಜಿ.
ಹೊಸ ದಿಲ್ಲಿ: ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ದಿಲ್ಲಿಯಲ್ಲಿ ಮಾರ್ಚ್ 11ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ. ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ ಐದು ಕೋಟಿ ರೂಪಾಯಿ ದಂಡ ಕಟ್ಟುವಂತೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಪೀಠವು ಸೂಚಿಸಿದೆ. ಜತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ಗೆ ನ್ಯಾಯಪೀಠವು ಆದೇಶಿಸಿದೆ.
ವಿಶ್ವ ಸಂಸ್ಕೃತಿ ಉತ್ಸವದಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಆರೋಪಿಸಿ, ಪರಿಸರವಾದಿ ಆನಂದ ಆರ್ಯ, ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠವು ದಿಲ್ಲಿ ಅಭಿವೃದ್ಧಿ ಮಂಡಳಿಗೆ 5 ಲಕ್ಷ ರೂ. ಮತ್ತು ದಿಲ್ಲಿ ಮಾಲಿನ್ಯ ಮಂಡಳಿಗೆ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿತು. ಉತ್ಸವ ಆರಂಭಕ್ಕೂ ಮುನ್ನ ಅಂದರೆ ಶುಕ್ರವಾರವೇ ಆರ್ಟ್ ಆಫ್ ಲಿವಿಂಗ್ ಪೌಂಡೇಶನ್ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಪೀಠವು ಸೂಚಿಸಿದೆ.
ಕಾರ್ಯಕ್ರಮ ಮುಗಿದ ಬಳಕ ಪರಿಸರಕ್ಕೆ ಆಗಿರುವ ಹಾನಿಯನ್ನು ಲೆಕ್ಕಹಾಕಿ ಮತ್ತಷ್ಟು ದಂಡ ವಿಧಿಸುವ ಬಗ್ಗೆ ನಿರ್ಧರಿಸುವುದಾಗಿಯೂ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠವು ಹೇಳಿತು.
ಅರ್ಜಿಯಲ್ಲಿ ಏನಿತ್ತು?: ದಿಲ್ಲಿ - ನೋಯ್ಡಾ ಭಾಗದಲ್ಲಿನ ಸಾವಿರ ಎಕರೆ ತುಂಬಾ ಸೂಕ್ಷ್ಮ ಪ್ರದೇಶವಾಗಿದ್ದು, ರವಿಶಂಕರ್ ಗುರೂಜಿ ಅವರ ಸಂಸ್ಕೃತಿ ಉತ್ಸವದಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೀಗಾಗಿ ಪರಿಹಾರ ನೀಡುವಂತೆ ಕೋರಿ, ಪರಿಸರವಾದಿ ಆನಂದ ಆರ್ಯ ಅರ್ಜಿ ಸಲ್ಲಿಸಿದ್ದರು.
---
ನಾನಾ ದೇಶಗಳ ಧರ್ಮ ಮತ್ತು ಸಿದ್ದಾಂತಗಳೊಂದಿಗೆ ಎಲ್ಲ ಸಂಸ್ಕೃತಿ ಒಗ್ಗೂಡಿಸಲು ಈ ಉತ್ಸವವನ್ನು ಆಯೋಜಿಸಲಾಗಿದೆ.ಹೀಗಾಗಿ ಇದರಲ್ಲಿ ರಾಜಕೀಯ ಬೆರಸಿಬೇಡಿ.
- ಶ್ರೀ ಶ್ರೀ ರವಿಶಂಕರ್ ಗುರೂಜಿ.