ಆ್ಯಪ್ನಗರ

ಪೆಹ್ಲುಖಾನ್‌ ಹತ್ಯೆ ಪ್ರಕರಣದ ಮರು ತನಿಖೆಗೆ ಆದೇಶ

ಪ್ರಕರಣದ ಎಲ್ಲ 6 ಆರೋಪಿಗಳನ್ನು ಅಧೀನ ನ್ಯಾಯಾಲಯವು ಸಂಶಯದ ಲಾಭದ ಆಧಾರದ ಮೇಲೆ ಖುಲಾಸೆಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸರಕಾರ ಮರು ತನಿಖೆಗೆ ಆದೇಶ ಹೊರಡಿಸಿದೆ.

PTI 17 Aug 2019, 5:00 am
ಜೈಪುರ: ಸಾಮೂಹಿಕ ಥಳಿತಕ್ಕೆ ಒಳಗಾಗಿ ಸಾವಿಗೀಡಾದ ಪೆಹ್ಲುಖಾನ್‌ ಪ್ರಕರಣದ ಮರು ತನಿಖೆಗೆ ರಾಜಸ್ಥಾನ ಸರಕಾರ ಆದೇಶಿಸಿದೆ. ಪ್ರಕರಣದ ಎಲ್ಲ 6 ಆರೋಪಿಗಳನ್ನು ಅಧೀನ ನ್ಯಾಯಾಲಯವು ಸಂಶಯದ ಲಾಭದ ಆಧಾರದ ಮೇಲೆ ಖುಲಾಸೆಗೊಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಕಾಂಗ್ರೆಸ್‌ ಸರಕಾರ ಮರು ತನಿಖೆಗೆ ಆದೇಶ ಹೊರಡಿಸಿದೆ. ಈ ಮಧ್ಯೆ ಬಿಎಸ್ಪಿ ನಾಯಕಿ ಮಾಯಾವತಿ, ''ಕಾಂಗ್ರೆಸ್‌ ಸರಕಾರದ ನಿರ್ಲಕ್ಷ್ಯವೇ ಆರೋಪಿಗಳಿಗೆ ವರವಾಗಿದೆ. ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತಿತ್ತು. ತನ್ನ ತಪ್ಪಿನ ಅರಿವಾಗಿ ಈಗ ಸರಕಾರ ಮರು ತನಿಖೆಗೆ ಆದೇಶಿಸಿದೆ,'' ಎಂದಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಕೋರ್ಟ್‌ ವಿಪಿನ್‌ ಯಾದವ್‌, ರವಿಂದ್ರ ಕುಮಾರ್‌, ದಯಾನಂದ, ಕಲುರಾಮ…, ಯೋಗೇಶ್‌ ಕುಮಾರ್‌ ಮತ್ತು ಭೀಮ್‌ ರಾಠಿಯನ್ನು ಕೋರ್ಟ್‌ ಖುಲಾಸೆಗೊಳಿಸಿದೆ.
Vijaya Karnataka Web gehlot

ಏನಿದು ಪ್ರಕರಣ?: 2017ರ ಏ.1ರಂದು ಗೋವು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಂದು ಶಂಕಿಸಿ ನಕಲಿ ಗೋರಕ್ಷ ಕರ ಗುಂಪೊಂದು ಅಳ್ವಾರ್‌ ಜಿಲ್ಲೆಯ ಬೆಹರೋರ್‌ನಲ್ಲಿ ಪೆಹ್ಲು ಖಾನ್‌ ಅವರ ಇಬ್ಬರು ಮಕ್ಕಳು ಮತ್ತು ಇತರ ನಾಲ್ಕು ಮಂದಿ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್‌ 3 ದಿನಗಳ ನಂತರ ಅಳ್ವಾರ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ