ಆ್ಯಪ್ನಗರ

ಕೃಷ್ಣೈಕ್ಯರಾದ ಪೇಜಾವರ ಶ್ರೀಗಳು: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಅನಾರೋಗ್ಯದಿಂದ ವಿಧಿವಶರಾದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಪಿಎಂ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Vijaya Karnataka Web 29 Dec 2019, 10:55 am
ಹೊಸದೆಹಲಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಭಾನುವಾರ ಬೆಳಗ್ಗೆ 9.20 ಕ್ಕೆ ವಿಧಿವಶರಾಗಿದ್ದು ಶ್ರೀಗಳ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯಿಂದ ಕಲಿಯಲು ಅನೇಕ ಅವಕಾಶಗಳು ದೊರೆತಿರುವುದು ನನಗೆ ಸಿಕ್ಕ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದಿದ್ದಾರೆ.
Vijaya Karnataka Web pejawar swamiji death pm narendra modi reaction in twitter
ಕೃಷ್ಣೈಕ್ಯರಾದ ಪೇಜಾವರ ಶ್ರೀಗಳು: ಪ್ರಧಾನಿ ನರೇಂದ್ರ ಮೋದಿ ಸಂತಾಪ



Pejawar Seer Death News Live - ಕೃಷ್ಣೈಕ್ಯರಾದ ವಿಶ್ವೇಶತೀರ್ಥ ಶ್ರೀಗಳು

"ಗುರು ಪೂರ್ಣಿಮೆಯ ಧಾರ್ಮಿಕ ದಿನದಂದು ನಮ್ಮ ಇತ್ತೀಚಿನ ಸಭೆ ಕೂಡ ಸ್ಮರಣೀಯವಾಗಿತ್ತು. ಅವರ ಅಪೂರ್ವ ಜ್ಞಾನವು ಯಾವಾಗಲೂ ಎದ್ದು ಕಾಣುತ್ತದೆ. ಪೇಜಾವರ ಶ್ರೀಗಳ ಕುರಿತಾಗಿ ನನ್ನ ಆಲೋಚನೆಗಳು ಅವರ ಅಸಂಖ್ಯಾತ ಅನುಯಾಯಿಗಳೊಂದಿಗೆ ಇವೆ. ಯಾವಾಗಲು ಎಲ್ಲರಿಗೂ ಮಾರ್ಗದರ್ಶಕ ಹಾಗೂ ಬೆಳಕಾಗಿದ್ದ ಅವರು ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಉಳಿಯುತ್ತಾರೆ. ಸೇವೆ ಮತ್ತು ಆಧ್ಯಾತ್ಮಕಕತೆಯ ಶಕ್ತಿಯಾಗಿದ್ದ ಅವರು ನ್ಯಾಯಯುತ ಹಾಗೂ ಸಹಾನುಭೂತಿಯ ಸಮಾಜಕ್ಕಾಗಿ ನಿರಂತರವಾಗಿ ಕೆಲಸ ಮಾಡಿದರು" ಎಂದು ಟ್ವೀಟ್ ಮಾಡಿದ್ದಾರೆ.

ಕೃಷ್ಣೈಕ್ಯರಾದ ಪೇಜಾವರ ಶ್ರೀಗಳು: ಕಣ್ಣೀರಿಟ್ಟ ಶಿಷ್ಯೆ ಉಮಾಭಾರತಿ


ಶ್ರೀಗಳ ಜೊತೆಗಿದ್ದ ಎರಡು ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಸ್ವಾಮೀಜಿಗಳಿಗೆ ತಜ್ಞ ವೈದ್ಯರಿಂದಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಆದರೆ ಶನಿವಾರ ರಾತ್ರಿ ಅವರ ದೇಹ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಮುಂಜಾನೆ ಶ್ರೀಗಳನ್ನು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕರೆತರಲಾಗಿತ್ತು. ಶ್ರೀ ಕೃಷ್ಣ ಮಠದಲ್ಲಿ ಶ್ರೀಗಳು ಭಾನುವಾರ ಬೆಳಗ್ಗೆ ವಿಧಿವಶರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ