ಆ್ಯಪ್ನಗರ

ರಾಜಕೀಯ ಲಾಭಕ್ಕಾಗಿ ಪಾಕ್‌ ವಿರುದ್ಧ ಕೇಂದ್ರದಿಂದ ಅಪಪ್ರಚಾರ: ಶರದ್‌ ಪವಾರ್‌

ರಾಜಕೀಯ ಕಾರಣಗಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಸುಳ್ಳು ಅಪಪ್ರಚಾರ ನಡೆಸುತ್ತಿದೆ ಎಂಬುದಾಗಿ ಹಿರಿಯ ರಾಜಕಾರಣಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ದೂರಿದ್ದಾರೆ.

TIMESOFINDIA.COM 15 Sep 2019, 4:11 pm
ಮುಂಬಯಿ: ಭಾರತದಲ್ಲಿರುವ ಜನಪ್ರಿಯ ನಂಬಿಕೆಗಳಿಗೆ ವಿರುದ್ಧವಾಗಿ ಪಾಕಿಸ್ತಾನದ ಜನರು ಖುಷಿಯಲ್ಲಿದ್ದಾರೆ ಎಂಬುದಾಗಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ. ಶನಿವಾರ ನಗರದಲ್ಲಿ ಮಾತನಾಡಿರುವ ಅವರು, ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲಾ ತಮ್ಮನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು ಎಂದಿದ್ದಾರೆ.
Vijaya Karnataka Web Nationalist Congress Party (NCP) President Sharad Pawar


ರಾಜಕೀಯ ಕಾರಣಗಳಿಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಸುಳ್ಳು ಅಪಪ್ರಚಾರ ನಡೆಸುತ್ತಿದೆ ಎಂಬುದಾಗಿ ಅವರು ದೂರಿದ್ದಾರೆ.

“ಪಾಕಿಸ್ತಾನಿಯರು ಅನ್ಯಾಯವನ್ನು ಎದುರಿಸುತ್ತಿದ್ದು, ಖುಷಿಯಿಂದ ಇಲ್ಲ ಎಂಬುದಾಗಿ ಇಲ್ಲಿನ ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಪಾಕಿಸ್ತಾನದಲ್ಲಿರುವ ನೈಜ ಪರಿಸ್ಥಿತಿಯನ್ನು ತಿಳಿದುಕೊಳ್ಳದೆ ಕೇವಲ ರಾಜಕೀಯ ಕಾರಣಗಳಿಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತದೆ ಅಷ್ಟೇ,” ಎಂಬುದಾಗಿ ವಿವರಿಸಿದ್ದಾರೆ.

ಹಲವು ಸಂದರ್ಭಗಳಲ್ಲಿ ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಿ ಹೇಳಿರುವ ಶರದ್‌ ಪವಾರ್‌, ಈ ಸಂದರ್ಭದಲ್ಲೆಲ್ಲಾ ತಮ್ಮನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡಿದ್ದಾಗಿ ಹೇಳಿದ್ದಾರೆ. ಭಾರತದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಪಾಕಿಸ್ತಾನಿಯರಿಗೆ ಸಾಧ್ಯವಾಗದಿದ್ದರೂ, ಅವರು ಭಾರತೀಯರನ್ನೇ ತಮ್ಮ ಸಂಬಂಧಿಕರಂತೆ ನೋಡುತ್ತಾರೆ ಎಂಬುದಾಗಿ ಹಿರಿಯ ರಾಜಕಾರಣಿ ಪವಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ