ಆ್ಯಪ್ನಗರ

ನೇತಾಜಿಗೇನಾಯಿತೆಂದು ತಿಳಿಯುವ ಹಕ್ಕು ಜನರಿಗಿದೆ: ಮಮತಾ ಬ್ಯಾನರ್ಜಿ

1945ರಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ದುರಂತದ ಬಳಿಕ ನೇತಾಜಿ ಸುಭಾಶ್ಚಂದ್ರ ಬೋಸ್ ಅವರಿಗೇನಾಯಿತು ಎಂದು ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗಿದೆ, ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.

Vijaya Karnataka 18 Sep 2018, 3:24 pm
ಕೋಲ್ಕತ್ತಾ: 1945ರಲ್ಲಿ ತೈವಾನ್‌ನಲ್ಲಿ ನಡೆದ ವಿಮಾನ ದುರಂತದ ಬಳಿಕ ನೇತಾಜಿ ಸುಭಾಶ್ಚಂದ್ರ ಬೋಸ್ ಅವರಿಗೇನಾಯಿತು ಎಂದು ತಿಳಿದುಕೊಳ್ಳುವ ಹಕ್ಕು ದೇಶದ ಜನರಿಗಿದೆ, ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
Vijaya Karnataka Web mamata banerjee


2015ರ ಈ ದಿನ ತಮ್ಮ ಸರಕಾರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವು ಹಾಗೂ ಹಾಗೂ ಅವರ ಕುಟುಂಬದ ಮೇಲೆ ಸರಕಾರ ನಡೆಸಿದೆ ಎನ್ನಲಾದ ಬೇಹುಗಾರಿಕೆ ಬಗ್ಗೆ ಮಾಹಿತಿ ಒಳಗೊಂಡ 64 ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ್ದನ್ನು ಮೆಲುಕು ಹಾಕಿದ ಬ್ಯಾನರ್ಜಿ, ವಿಮಾನ ಅಪಘಾತದ ಬಳಿಕ ತಮ್ಮ ಪ್ರೀತಿಯ ನಾಯಕನಿಗೆ ಏನಾಯಿತೆಂದು ತಿಳಿಯುವ ಅಧಿಕಾರ ಜನರಿಗಿದೆ ಎಂದರು.

ನೇತಾಜಿ ಸಾವನ್ನಪ್ಪಿದ್ದಾರೆ (ಆಗಸ್ಟ್ 18, 1945) ಎನ್ನಲಾದ ಬರೋಬ್ಬರಿ 70 ವರ್ಷಗಳ ಬಳಿಕ, ಸೆಪ್ಟೆಂಬರ್ 18, 2017ರಲ್ಲಿ ಅವರ ನಿಗೂಢ ಸಾವು ಹಾಗೂ ಹಾಗೂ ಅವರ ಕುಟುಂಬದ ಮೇಲೆ ಸರಕಾರ ನಡೆಸಿದೆ ಎನ್ನಲಾದ ಬೇಹುಗಾರಿ ಬಗ್ಗೆ ಮಾಹಿತಿ ಒಳಗೊಂಡ 64 ರಹಸ್ಯ ಕಡತಗಳನ್ನು ಪಶ್ಚಿಮ ಬಂಗಾಳ ಸರಕಾರ ಬಹಿರಂಗಪಡಿಸಿತ್ತು.

ಬೋಸ್ ಅವರ 119ನೇ ಜಯಂತಿಯಂದು (ಜನವರಿ 23, 2016) ಕೇಂದ್ರ ಸರಕಾರ ಕೂಡ ಅವರ ನಿಗೂಢ ಕಣ್ಮರೆಗೆ ಸಂಬಂಧಿಸಿದ ಮಹತ್ವದ 100 ಕಡತಗಳನ್ನು ಒಳಗೊಂಡ ಡಿಜಿಟಲ್ ಪ್ರತಿಗಳನ್ನು ಬಿಡುಗಡೆಗೊಳಿಸಿತ್ತು.

ಈ ಲಭ್ಯ ಕಡತಗಳಲ್ಲಿ 1945ರ ಆಗಸ್ಟ್ 18ರಂದು ತೈಪೆಯಲ್ಲಿ ವಿಮಾನ ಅಪಘಾತದಲ್ಲಿ ಸತ್ತರು ಎಂಬುದನ್ನು ಪುಷ್ಟಿಕರಿಸುವ ಅಥವಾ ಅಪಘಾತದ ಬಳಿಕ ಅವರಿನೇನಾಯಿತು ಎಂಬುದನ್ನು ಸ್ಪಷ್ಟಪಡಿಸುವ ಯಾವುದೇ ಮಾಹಿತಿ, ಖಚಿತ ಸಾಕ್ಷ್ಯಗಳು ಲಭ್ಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ