ಆ್ಯಪ್ನಗರ

ಉತ್ತಮ ರಸ್ತೆ ಬೇಕಿದ್ದರೆ, ಟೋಲ್‌ ಕಟ್ಟಲೇಬೇಕು: ನಿತಿನ್‌ ಗಡ್ಕರಿ

ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಭೂ ಸ್ವಾಧೀನವೇ ಅತಿದೊಡ್ಡ ಸಮಸ್ಯೆಯಾಗಿದೆ. ರಾಜ್ಯ ಸರಕಾರಗಳೂ ಈ ನಿಟ್ಟಿನಲ್ಲಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Vijaya Karnataka Web 16 Jul 2019, 9:43 pm
ಹೊಸದಿಲ್ಲಿ: ಉತ್ತಮ ರಸ್ತೆಗಳು ಬೇಕು ಎಂದರೆ ಜನ ಟೋಲ್‌ನಲ್ಲಿ ಹಣ ಪಾವತಿಸಲೇಬೇಕು. ಇದನ್ನು ರದ್ದು ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
Vijaya Karnataka Web ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ


ಲೋಕಸಭೆಯಲ್ಲಿ ರಸ್ತೆ ಮತ್ತು ಹೆದ್ದಾರಿ ಕ್ಷೇತ್ರ ಕುರಿತು ನಡೆದ ಚರ್ಚೆಯ ವೇಳೆ ಸಚಿವರು ಉತ್ತರಿಸಿದರು.

ಕಳೆದ 5 ವರ್ಷದಲ್ಲಿ 40 ಸಾವಿರ ಕಿಲೋ ಮೀಟರ್‌ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ರಸ್ತೆ ಅಭಿವೃದ್ಧಿಯಂತೂ ಅತಿ ಹೆಚ್ಚು ಆಗಿದೆ ಎಂದು ಹೇಳಿದರು.

ದೇಶದ ನಾನಾ ಭಾಗಗಳ ಹೆದ್ದಾರಿಯಲ್ಲಿ ಟೋಲ್‌ ವಸೂಲಾತಿ ಬಗ್ಗೆ ಸದಸ್ಯರು ಆಕ್ಷೇಪ ಎತ್ತಿದ್ದಾರೆ. ಟೋಲ್‌ ಹಣವನ್ನು ಪಡೆದು ಗ್ರಾಮೀಣ ಹಾಗೂ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ರಸ್ತೆ ನಿರ್ಮಿಸಲಾಗುತ್ತದೆ ಎಂದು ನಿತಿನ್‌ ಗಡ್ಕರಿ ಸ್ಪಷ್ಟಪಡಿಸಿದರು.

ಟೋಲ್‌ ಈಸ್ ಮೈ ಬ್ರೇನ್‌ ಚೈಲ್ಡ್‌, ಸುಂಕ ವಸೂಲಾತಿ ತಡೆಯಲು ಸಾಧ್ಯವಿಲ್ಲ ಎಂದು ನಿತಿನ್‌ ಗಡ್ಕರಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ