ಆ್ಯಪ್ನಗರ

ಜಮ್ಮು-ಕಾಶ್ಮೀರದ ನೂತನ ಗವರ್ನರ್‌ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾದ ಪಿಡಿಪಿ ಸಂಸದನ ಉಚ್ಚಾಟನೆ

ಪಿಡಿಪಿ ತನ್ನ ರಾಜ್ಯಸಭೆ ಸದಸ್ಯ ನಾಜಿರ್‌ ಅಹ್ಮದ್‌ ಲಾವೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ. ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್‌ ಗವರ್ನರ್‌ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಆಕ್ರೋಶಗೊಂಡು ಈ ತೀರ್ಮಾನ ತೆಗೆದುಕೊಂಡಿದೆ.

Vijaya Karnataka Web 2 Nov 2019, 7:07 am
ಶ್ರೀನಗರ: ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್‌ ಗವರ್ನರ್‌ ಜಿ.ಸಿ. ಮುರ್ಮು ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಆಕ್ರೋಶಗೊಂಡು ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ (ಪಿಡಿಪಿ) ತನ್ನ ರಾಜ್ಯಸಭೆ ಸದಸ್ಯ ನಾಜಿರ್‌ ಅಹ್ಮದ್‌ ಲಾವೆ ಅವರನ್ನು ಪಕ್ಷದಿಂದ ಉಚ್ಛಾಟಿಸಿದೆ.
Vijaya Karnataka Web nazir ahmad dave


ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಕಾಶ್ಮೀರ, ಲಡಾಕ್‌ ಅಧಿಕೃತ ಸೇರ್ಪಡೆ : ಅ.31ಕ್ಕೆ ಲೆ.ಗವರ್ನರ್‌ಗಳು ಅಧಿಕಾರಕ್ಕೆ

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಅವರ ವಿರುದ್ಧ ಪಿಡಿಪಿ ಈ ಕ್ರಮ ಕೈಗೊಂಡಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದು ಹಾಗೂ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕೇಂದ್ರದ ನಿರ್ಧಾರಕ್ಕೆ ಪಿಡಿಪಿ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಮುರ್ಮು ಪ್ರಮಾಣ ವಚನ ಕಾರ‍್ಯಕ್ರಮದಿಂದ ದೂರ ಉಳಿದಿತ್ತು.

370ನೇ ವಿಧಿ ರದ್ದತಿ ಮತದಾನ ಹೆಚ್ಚಳಕ್ಕೆ ಪ್ರೇರಣೆಯಾಯ್ತು: ಮೋದಿ

ಆದಾಗ್ಯೂ ನಾಜಿರ್‌ ಅಹ್ಮದ್‌ ಮುರ್ಮು ಅವರ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ಕೂಡ ಅಹ್ಮದ್‌ ರಾಜ್ಯಸಭೆಯಲ್ಲಿತ್ರಿ ವಳಿ ತಲಾಕ್‌ ನಿಷೇಧ ವಿಧೇಯಕದ ವಿರುದ್ಧದ ಮತ ಚಲಾವಣೆಯಿಂದಲೂ ದೂರ ಉಳಿದು ಪಕ್ಷದ ಆಕ್ರೋಶಕ್ಕೆ ಗುರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ