ಆ್ಯಪ್ನಗರ

ರಜನಿಕಾಂತ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪೆರಿಯಾರ್ ಪ್ರತಿಮೆ ಧ್ವಂಸ: ತಮಿಳುನಾಡಲ್ಲಿ ಎಡ-ಬಲ ಸಂಘರ್ಷ..!

ಪೆರಿಯಾರ್‌ ಪ್ರತಿಮೆ ಧ್ವಂಸ ಘಟನೆಯಿಂದ ಬಲಪಂಥೀಯ ಮತ್ತು ಎಡಪಂಥೀಯ ಸಂಘಟನೆಗಳ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.

Vijaya Karnataka 24 Jan 2020, 7:20 pm
ಚೆನ್ನೈ: ದ್ರಾವಿಡ ಚಳವಳಿಯ ಮುಂಚೂಣಿ ವಹಿಸಿದ್ದ ಪ್ರಗತಿಪರ ಚಿಂತಕರಾದ ಇ.ವಿ. ರಾಮಸ್ವಾಮಿ ’ಪೆರಿಯಾರ್‌’ ಅವರ ಪ್ರತಿಮೆಯನ್ನು ಕಾಂಚೀಪುರಂ ಜಿಲ್ಲೆಯ ಚೆಂಗಲ್‌ಪಟ್ಟುನಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದ ಸುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಮಿಳುನಾಡಿನ ರಾಜಕೀಯ ಮುಖಂಡರು ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೆರಿಯಾರ್‌ ಅವರ ಕುರಿತು ಸೂಪರ್‌ಸ್ಟಾರ್‌ ರಜನಿಕಾಂತ್‌ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಪ್ರತಿಮೆ ಧ್ವಂಸಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Vijaya Karnataka Web rajanikanth and periyar
ರಜನಿಕಾಂತ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪೆರಿಯಾರ್ ಪ್ರತಿಮೆ ಧ್ವಂಸ: ತಮಿಳುನಾಡಲ್ಲಿ ಎಡ-ಬಲ ಸಂಘರ್ಷ..!


ಬಲಪಂಥೀಯ ಮತ್ತು ಎಡಪಂಥೀಯ ಸಂಘಟನೆಗಳ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.

ಪೆರಿಯಾರ್‌ ಪ್ರತಿಮೆ ಭಗ್ನವಾಗಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯೆ ನೀಡಿರುವ ಡಿಜಿಪಿ ಎಲ್‌.ಕೆ. ತ್ರಿಪಾಠಿ, ಇತರ ಪ್ರತಿಮೆಗಳ ಸುರಕ್ಷತೆಗೂ ಎಚ್ಚರವಹಿಸಿ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಮಿಳರಿಗೆ ಮತ್ತು ತಮಿಳುನಾಡಿಗಾಗಿ 95 ವರ್ಷ ಶ್ರಮಿಸಿದವರನ್ನು ಅವರ ಕಾರ್ಯಕ್ಷೇತ್ರವಾಗಿದ್ದ ರಾಜ್ಯದಲ್ಲಿಯೇ ಅವಮಾನಿಸಿರುವುದು ನಾಚಿಕೆಗೇಡು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರಾಜ್ಯ ಸರಕಾರ ದುಷ್ಕರ್ಮಿಗಳನ್ನು ಬಂಧಿಸಿ, ಪ್ರತಿಮೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಜನಿಕಾಂತ್‌ ಸೃಷ್ಟಿಸಿದ ವಿವಾದವೇನು..?

1971ರಲ್ಲಿ ಪೆರಿಯಾರ್‌ ಅವರು ನಡೆಸಿದ್ದ ಸಮಾವೇಶವೊಂದರಲ್ಲಿ ಶ್ರೀರಾಮ, ಸೀತಾಮಾತೆಯ ನಗ್ನ ಚಿತ್ರಗಳಿಗೆ ಚಪ್ಪಲಿ ಹಾರವನ್ನು ತೊಡಿಸಲಾಗಿತ್ತು. ಆ ಸುದ್ದಿಯನ್ನು ತುಘಲಕ್‌ ನಿಯತಕಾಲಿಕೆ ಮಾತ್ರ ಧೈರ್ಯವಾಗಿ ವರದಿ ಮಾಡಿತ್ತು ಎಂದು ಸಮಾರಂಭವೊಂದರಲ್ಲಿ ರಜನಿಕಾಂತ್‌ ಹೇಳಿದ್ದರು. ಈ ಹೇಳಿಕೆ ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ.

ರಜನಿ ವಿರುದ್ಧದ ಅರ್ಜಿ ವಜಾಗೊಳಿಸಿದ ಕೋರ್ಟ್‌

ಪೆರಿಯಾರ್‌ ಅವರ ಕುರಿತು ರಜನಿಕಾಂತ್‌ ಅವರು ನೀಡಿದ್ದ ವಿವಾದಿತ ಹೇಳಿಕೆಯನ್ನು ಖಂಡಿಸಿ ದ್ರಾವಿಡರ್‌ ವಿಡುದಲೈ ಕಳಗಂ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಪರ್ಯಾಯ ಅವಕಾಶಗಳಿದ್ದರೂ ಕೂಡ ಅರ್ಜಿದಾರರು ಕೋರ್ಟ್‌ಗೆ ಬಂದಿದ್ದಾರೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎ.ನಟರಾಜನ್‌ ಅವರು ನ್ಯಾ. ಪಿ. ರಾಜಮಾಣಿಕಂ ಅವರಿಗೆ ತಿಳಿಸಿದರು. ಆ ವೇಳೆ ಅರ್ಜಿ ಹಿಂಪಡೆಯುತ್ತೀರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರು ಸಮ್ಮತಿಸಿದ್ದಾರೆ.

ಪೆರಿಯಾರ್‌ ಕುರಿತ ಹೇಳಿಕೆ: ಸಾರಿ, ನಾನು ಕ್ಷಮೆ ಕೇಳುವುದಿಲ್ಲ ಎಂದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ