ಆ್ಯಪ್ನಗರ

ನಾಯಿ ಮೇಲಿನ ಪ್ರೀತಿ ಮೃತ್ಯುವಾಯಿತೇ?

ಸಾಕು ನಾಯಿಗಳು ಮಂಗಳವಾರ ರಾತ್ರಿ ಮಾಲೀಕನನ್ನೇ ಕಚ್ಚಿ ಸಾಯಿಸಿವೆ.

ಟೈಮ್ಸ್ ಆಫ್ ಇಂಡಿಯಾ 13 Jul 2016, 5:08 pm
ವೆಲ್ಲೂರು: ತಮಿಳುನಾಡಿನ ಕಟ್ಟುಪಕ್ಕಂ ಗ್ರಾಮದಲ್ಲಿ ಸಾಕು ನಾಯಿಗಳು ಮಂಗಳವಾರ ರಾತ್ರಿ ಮಾಲೀಕನನ್ನೇ ಕಚ್ಚಿ ಸಾಯಿಸಿವೆ.
Vijaya Karnataka Web pet dogs kill man in tamil nadu
ನಾಯಿ ಮೇಲಿನ ಪ್ರೀತಿ ಮೃತ್ಯುವಾಯಿತೇ?

ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರ ಕಚೇರಿ ಸಹಾಯಕ ಕಿರುಬಾಕರನ್ ಮೃತಪಟ್ಟವರು. ನಾಯಿ ಗಳಿಗಾಗಿ ಮಾವಿನ ಹಣ್ಣು ತರಲೆಂದು ರಾತ್ರಿ 10 ಗಂಟೆಗೆ ನಾಯಿಗಳನ್ನು ಕರೆದುಕೊಂಡು ಗ್ರಾಮದಿಂದ ಹೊರಗೆ ಹೋಗಿದ್ದರು. 10.20ರ ವೇಳೆಗೆ ಕಿರುಬಾಕರನ್ ಚೀರಿರುವುದು ಹೊಲದ ಪಕ್ಕದಲ್ಲಿದ್ದವರಿಗೆ ಕೇಳಿಸಿದೆ. ಹತ್ತಿರ ಹೋದಾಗ ಕಿರುಬಾಕರನ್ ರಕ್ತದ ಮಡುವಿನಲ್ಲಿದ್ದು, ದೇಹದಲ್ಲಿ ನಾಯಿ ಕಚ್ಚಿದ ಗಾಯಗಳಿದ್ದವು.
ಜರ್ಮನ್ ರೊಟ್‌ವೆಲೆರ್ ತಳಿಯ ಹೆಣ್ಣು ನಾಯಿಯನ್ನು ಸಾಕಿದ್ದ ಅವರು ಮೂರು ದಿನಗಳ ಹಿಂದೆ ಅದೇ ತಳಿಯ ಗಂಡು ನಾಯಿ ತಂದಿದ್ದರು. ಅದಕ್ಕೆ ತಿನ್ನಿಸಬೇಕಾದರೆ ಅದು ಕಚ್ಚಿ ಸಾಯಿಸಿದೆ ಎಂದು ಕಿರುಬಾಕರನ್ ಮನೆಯವರು ಹೇಳಿದ್ದಾರೆ.

ಗಾಯಗೊಂಡಿದ್ದ ಕಿರುಬಾಕರನ್ ಅವರನ್ನು ಆಸ್ಪತ್ರೆಗೆ ಕರದುಕೊಂಡು ಹೋಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು. ಬನಾವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇಹದಲ್ಲಿ ಆಗಿರುವ ಗಾಯಗಳನ್ನು ನೋಡಿದರೆ ಎರಡೂ ನಾಯಿಗಳು ಕಚ್ಚಿರುವ ಸಾಧ್ಯತೆ ಇದೆ. ರೊಟ್‌ವೆಲೆರ್ ತಳಿಯ ನಾಯಿಗಳು ರೋಷದ ಜತೆಗೆ ಬಲವಾದ ದವಡೆ, ಚೂಪಾದ ಹಲ್ಲುಗಳನ್ನು ಹೊಂದಿವೆ ಎಂದು ವೆಲ್ಲೂರಿನ ಪಶು ತಜ್ಞ ಟಿ. ಮನಮೋಹನ್ ಹೇಳಿದ್ದಾರೆ.

ಈ ನಾಯಿಗಳನ್ನು ಬೆಳೆಸುವಾಗ ಕಮಾಂಡ್‌ಗಳಿಗೆ ವಿಧೇಯವಾಗಿರುವಂತೆ ಸೂಕ್ತ ತರಬೇತಿಯೊಂದಿಗೆ ಬೆಳೆಸದಿದ್ದಲ್ಲಿ ಇವು ಅಪಾಯಕಾರಿಯಾಗಿ ಪರಿಣಮಿಸುತ್ತವೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ