ಆ್ಯಪ್ನಗರ

ದೆಹಲಿ ದಂಗೆ: ಪಾಪ್ಯೂಲರ್ ಫ್ರಂಟ್ ಮುಖ್ಯಸ್ಥ ಪರ್ವೇಜ್ ಬಂಧನ!

ಶಾಹೀನ್ ಬಾಗ್ ಸಿಎಎ ವಿರೋಧಿ ಪ್ರತಿಭಟನೆ ಹಾಗೂ ದೆಹಲಿ ದಂಗೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಾಪ್ಯೂಲರ್ ಫ್ರಂಟ್ ಆಪ್ ಇಂಡಿಯಾ(ಪಿಎಫ್ ಐ) ಮುಖ್ಯಸ್ಥ ಪರ್ವೇಜ್ ಹಾಗೂ ಕಾರ್ಯದರ್ಶಿ ಇಲಿಯಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 12 Mar 2020, 9:35 am
ನವದೆಹಲಿ: ಶಾಹೀನ್ ಬಾಗ್ ಸಿಎಎ ವಿರೋಧಿ ಪ್ರತಿಭಟನೆ ಹಾಗೂ ದೆಹಲಿ ದಂಗೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮುಖ್ಯಸ್ಥ ಪರ್ವೇಜ್ ಹಾಗೂ ಕಾರ್ಯದರ್ಶಿ ಇಲಿಯಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Shaheen Bagh
ಶಾಹೀನ್ ಬಾಗ್ ಸಿಎಎ ವಿರೋಧಿ ಹಾಗೂ ದೆಹಲಿ ದಂಗೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪಿಎಫ್‌ಐ ಮುಖ್ಯಸ್ಥ ಪರ್ವೇಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.



ಪರ್ವೇಜ್ ಹಾಗೂ ಇಲಿಯಾಸ್ ವಿರುದ್ಧ ಸಿಎಎ ಜಾರಿ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಗೆ ಹಣಕಾಸು ನೆರವು ಹಾಗೂ ನಂತರ ನಡೆದ ದಂಗೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ.

ದೆಹಲಿ ದಂಗೆ ಹಾಗೂ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತವಾಗಿರುವ ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ಅವರೊಂದಿಗೂ ಪರ್ವೇಜ್ ಸಂಬಂಧ ಹೊಂದಿದ್ದು, ದಂಗೆಗೆ ಪ್ರಚೋದನೆ ನೀಡಲು ಅಕ್ರಮವಾಗಿ ಹಣ ಒದಗಿಸಿದ ಗಂಭೀರ ಆರೋಪ ಮಾಡಲಾಗಿದೆ.

ಪಿಎಫ್‌ಐ ವಿರುದ್ಧ ಪ್ರಕರಣ ದಾಖಲಿಸಿದ ಇ.ಡಿ

ಶಾಹೀನ್ ಬಾಗ್ ಪ್ರತಿಭಟನೆ ಶುರುವಾದಾಗಿನಿಂದ ಪ್ರತಿಭಟನಾಕಾರರ ಮಧ್ಯೆ ಮೂಲಭುತವಾದ ಬಿತ್ತಲು ಹಣವಿಸುತ್ತಿದ್ದ ಪಿಎಫ್‌ಐ ಇದಕ್ಕಾಗಿ ಹೇರಳ ಹಣ ಖರ್ಚು ಮಾಡಿದೆ ಎನ್ನಲಾಗಿದೆ.

ಪ್ರತಿಭಟನೆಯನ್ನು ದಂಗೆಯನ್ನಾಗಿ ಪರಿವರ್ತಿಸುವಲ್ಲಿ ಪರ್ವೇಜ್ ಹಾಗೂ ಇಲಿಯಾಸ್ ಮಹತ್ವದ ಪಾತ್ರ ನಿರ್ವಹಿಸಿದ್ದು, ಗಲಭೆಕೋರರಿಗೆ ಪ್ರಚೋದನೆ ನೀಡಿ ಭಾರೀ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್ ವಿಭಾಗದ ದೂರು ಆಧರಿಸಿ ಪಿಎಫ್‌ಐ ಮುಖ್ಯಸ್ಥ ಪರ್ವೇಜ್ ಹಾಗೂ ಕಾರ್ಯದರ್ಶಿ ಇಲಿಯಾಸ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ