ಆ್ಯಪ್ನಗರ

ಹಾಪುರ್ ಹತ್ಯೆ ಪ್ರಕರಣ: ಪೊಲೀಸರ ಮುಂದೆಯೇ ಖಾಸಿಂನನ್ನು ಎಳೆದೊಯ್ದ ಫೋಟೋ ವೈರಲ್

ಹಾಪುರ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗೋ ಸಾಗಾಣಿಕೆ ಆರೋಪದ ಮೇಲೆ ಹತ್ಯೆಗೀಡಾದ ಖಾಸೀಂನನ್ನು ಥಳಿಸಿ ಪೊಲೀಸರ ಸಮ್ಮುಖದಲ್ಲಿಯೇ ಎಳೆದೊಯ್ಯಲಾಗಿದೆ ಎಂಬುದನ್ನು ಸಾಬೀತು ಪಡಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಕೋಲಾಹಲವನ್ನೆಬ್ಬಿಸಿದೆ.

TIMESOFINDIA.COM 22 Jun 2018, 3:08 pm
ಮೀರತ್: ಹಾಪುರ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಗೋ ಸಾಗಾಣಿಕೆ ಆರೋಪದ ಮೇಲೆ ಹತ್ಯೆಗೀಡಾದ ಖಾಸೀಂನನ್ನು ಥಳಿಸಿ ಪೊಲೀಸರ ಸಮ್ಮುಖದಲ್ಲಿಯೇ ಎಳೆದೊಯ್ಯಲಾಗಿದೆ ಎಂಬುದನ್ನು ಸಾಬೀತು ಪಡಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಕೋಲಾಹಲವನ್ನೆಬ್ಬಿಸಿದೆ.
Vijaya Karnataka Web Viral


ಪ್ರಜ್ಞೆ ಕಳೆದುಕೊಂಡಿದ್ದ ಖಾಸೀಂನನ್ನು ದುಷ್ಕರ್ಮಿಗಳ ಗುಂಪು ಎಳೆದೊಯ್ಯುವಾಗ ಇನ್ಸಪೆಕ್ಟರ್ ಅಶ್ವಿನಿ ಕಹ್ರಿ ಸೇರಿದಂತೆ ಮೂವರು ಪೊಲೀಸರು ಸಹ ಅಲ್ಲೇ ಇರುವುದು ಚಿತ್ರದಲ್ಲಿ ಕಾಣುತ್ತಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಕ್ಷಮೆಯಾಚಿಸಿರುವ ಪೊಲೀಸರು ನಾವು ದಾಳಿಕೋರರ ಪರವಾಗಿರಲಿಲ್ಲ. ಗಾಯಾಳು ಖಾಸೀಂನನ್ನು ವ್ಯಾನ್‌ಗೆ ಹಾಕುವ ಪ್ರಯತ್ನದಲ್ಲಿದ್ದಾಗ ಈ ಫೋಟವನ್ನು ಕ್ಲಿಕ್ಕಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.

ಹಸು ಕಳ್ಳತನದ ಶಂಕೆಯಲ್ಲಿ ಖಾಸೀಂ ಎಂಬಾತನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಜೂನ್ 18ರಂದು ಬಜ್‌ಹೇರಾ ಖುರ್ದ್ ಗ್ರಾಮದಲ್ಲಿ ನಡೆದಿತ್ತು. ಘಟನೆಯಲ್ಲಿ ಖಾಸೀಂ ಸ್ನೇಹಿತ ಸಮ್ಯದಿನ ಗಂಭೀರವಾಗಿ ಗಾಯಗೊಂಡಿದ್ದ. ಘಟನಾವಳಿಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಗೋ ಹತ್ಯೆಗೆ ಸರಿಯಾದ ಶಿಕ್ಷೆ ಎಂದು ಕೂಗುತ್ತ ದಾಳಿಯನ್ನು ಸಮರ್ಥಿಸಿಕೊಂಡಿರುವುದು ಕೇಳಿ ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ