ಆ್ಯಪ್ನಗರ

ಪಾಕ್‌ನಿಂದ ಬಂದ ಪಾರಿವಾಳ 'ಸೆರೆ': ಮೋದಿಗೇನು ಸಂದೇಶವಿತ್ತು ಗೊತ್ತೇ?

ಸರ್ಜಿಕಲ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಸಂದೇಶ ಹೊತ್ತು ಗಡಿ ದಾಟಿ ಬಂದ ಪಾರಿವಾಳವೊಂದು ಇದೀಗ ಸೇನೆಯ ಕಸ್ಟಡಿಯಲ್ಲಿದೆ.

ಏಜೆನ್ಸೀಸ್ 4 Oct 2016, 1:10 pm
ಪಠಾಣ್‌ಕೋಟ್: ಸರ್ಜಿಕಲ್ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಸಂದೇಶ ಹೊತ್ತು ಗಡಿ ದಾಟಿ ಬಂದ ಪಾರಿವಾಳವೊಂದು ಇದೀಗ ಸೇನೆಯ ಕಸ್ಟಡಿಯಲ್ಲಿದೆ.
Vijaya Karnataka Web pigeon with message for pm narendra modi in custody
ಪಾಕ್‌ನಿಂದ ಬಂದ ಪಾರಿವಾಳ 'ಸೆರೆ': ಮೋದಿಗೇನು ಸಂದೇಶವಿತ್ತು ಗೊತ್ತೇ?


ಭಾನುವಾರ ಬಮಿಯಾಲ್ ಸೆಕ್ಟರ್‌ನ ಸಿಂಬಾಲ್ ಠಾಣೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಈ ಪಾರಿವಾಳವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಲ್ಲಿ ಉರ್ದು ಭಾಷೆಯಲ್ಲಿ ಸಂದೇಶ ಬರೆಯಲಾಗಿತ್ತು.

'ಮೋದೀಜೀ, 1971ರ (ಇಂಡೋ-ಪಾಕ್ ಯುದ್ಧಕಾಲದ) ಅದೇ ಜನರೆಂದು ನಮ್ಮನ್ನೆಂದು ಪರಿಗಣಿಸಬೇಡಿ. ಈಗ ಪ್ರತಿಯೊಂದು ಮಗು ಕೂಡ ಭಾರತದ ವಿರುದ್ಧ ಹೋರಾಡಲು ಸಿದ್ಧವಾಗಿದೆ' ಎಂದು ಉರ್ದುವಿನಲ್ಲಿ ಸಂದೇಶ ಬರೆಯಲಾಗಿತ್ತು.

ಇದೇ ವೇಳೆ, ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಅತ್ತಾರಿ ಗಡಿಯಲ್ಲಿ ಪ್ರತಿದಿನ ನಡೆಯುವ ಬೀಟಿಂಗ್ ರಿಟ್ರೀಟ್ (ಮುಸ್ಸಂಜೆ ಸ್ನೇಹ-ಕವಾಯತು) ವೇಳೆ ಪಾಕಿಸ್ತಾನದಿಂದ ಪ್ರೇಕ್ಷಕರಾಗಿ ಬಂದವರು ಕೂಡ ಭಾರತದ ಗ್ಯಾಲರಿಯತ್ತ ಕಲ್ಲೆಸೆದಿದ್ದಾರೆ. ವಿಐಪಿ ಗ್ಯಾಲರಿಗೇ ಕಲ್ಲುಗಳು ಬಂದು ಬಿದ್ದವಾದರೂ, ಯಾರಿಗೂ ಗಾಯಗಳಾಗಿಲ್ಲ.

ಪಾಕಿಸ್ತಾನಿ ಸಂದರ್ಶಕರು ಭಾರತ-ವಿರೋಧಿ ಘೋಷಣೆಗಳನ್ನೂ ಕೂಗುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ