ಆ್ಯಪ್ನಗರ

ನಿರ್ಮಲಾ ಆಯ್ತು, ಈಗ ಗೋಯಲ್ ಸರದಿ: ಗುರುತ್ವಾಕರ್ಷಣೆ ಕಂಡುಹಿಡಿದಿದ್ದು ಐನ್‌ಸ್ಟೈನ್ ಅಂತೆ!

ಭಾರತದಲ್ಲಿ ಕಾರುಗಳ ಮಾರಾಟ ಕುಸಿಯುತ್ತಿರೋದು ಏಕೆ? ಗುರುತ್ವಾಕರ್ಷಣೆ ಕಂಡು ಹಿಡಿದದ್ದು ಯಾರು? ಹೀಗೆ ಹಲವು ಪ್ರಶ್ನೆಗಳಿಗೆ ನಮ್ಮ ಕೇಂದ್ರ ಸಚಿವರು ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಅವರು ನೀಡಿದ ಹೇಳಿಕೆಗಳು ವೈರಲ್ ಆಗಿವೆ. ಆ ಹೇಳಿಕೆಗಳು ಸೃಷ್ಟಿಸಿರೋ ಅವಾಂತರ ಒಂದೆರಡಲ್ಲ.

Vijaya Karnataka Web 12 Sep 2019, 6:55 pm
ಹೊಸ ದಿಲ್ಲಿ: ಮೋದಿ ಸಂಪುಟದ ಸಚಿವರಿಗೆ ಅದೇನಾಗಿದೆಯೋ ಗೊತ್ತಿಲ್ಲ! ಓಲಾ, ಉಬರ್‌ನಿಂದಾಗಿ ಕಾರುಗಳು ಮಾರಾಟವಾಗ್ತಿಲ್ಲ ಎಂದು ಹೇಳಿ ನಿರ್ಮಲಾ ಸೀತಾರಾಮನ್ ನಗೆಪಾಟಲಿಗೀಡಾದ ಪ್ರಕರಣ ಹಸಿಯಾಗಿರುವಾಗಲೇ, ಪಿಯೂಶ್ ಗೋಯಲ್ ಎಡವಟ್ಟು ಮಾಡಿಕೊಂಡಿದ್ದಾರೆ. ಗುರುತ್ವಾಕರ್ಷಣೆ ಕಂಡು ಹಿಡಿಯಲು ಐನ್‌ಸ್ಟೈನ್‌ಗೆ ಗಣಿತ ನೆರವಾಗಲಿಲ್ಲ ಎಂದಿದ್ದಾರೆ. ಆದರೆ ಗುರುತ್ವಾಕರ್ಷಣೆ ಕಂಡು ಹಿಡಿದದ್ದು ನ್ಯೂಟನ್ ಅನ್ನೋ ಮಾಹಿತಿ ಚಿಕ್ಕ ಮಕ್ಕಳಿಗೂ ಇದೆ. ಹೀಗಾಗಿ, ಸಚಿವ ಪಿಯೂಶ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ವೈರಲ್ ಆಗಿದೆ. ನೆಟ್ಟಿಗರು ಸಚಿವರು ಭರ್ಜರಿಯಾಗಿ ಕಾಲೆಳೆದಿದ್ದಾರೆ.
Vijaya Karnataka Web piyush goyal


ಓಲಾ,ಊಬರ್ ಬಳಕೆಯಿಂದ ಅಟೋಮೊಬೈಲ್ ಉದ್ಯಮ ಕುಸಿತ- ನಿರ್ಮಲಾ ಸೀತಾರಾಮನ್ ವ್ಯಾಖ್ಯಾನ ಟ್ವಿಟರಲ್ಲಿ ಸಿಕ್ಕಾಪಟ್ಟೆ ಟ್ರೋಲ್

ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿದ್ದ ಸಚಿವ ಪಿಯೂಶ್ ಗೋಯಲ್, ನರೇಂದ್ರ ಮೋದಿ ಸರ್ಕಾರ ಆರ್ಥಿಕ ಕುಸಿತ ತಡೆಗಟ್ಟಲು ಯಾವೆಲ್ಲಾ ಕ್ರಮಕೈಗೊಳ್ಳುತ್ತಿದೆ ಎಂದು ವಿವರಿಸುತ್ತಿದ್ದರು. ಈ ವೇಳೆ ಪತ್ರಕರ್ತರಿಗೆ ಗಣಿತದ ಲೆಕ್ಕಾಚಾರದಲ್ಲಿ ಅಭಿವೃದ್ಧಿ ನೋಡಬೇಡಿ, ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆ ಕಂಡು ಹಿಡಿಯುವಾಗ ಗಣಿತ ಸಹಾಯಕ್ಕೆ ಬಂದಿರಲಿಲ್ಲ ಎಂದು ಹೇಳಿದ್ರು.

ಯಾವಾಗ ತಮ್ಮ ಹೇಳಿಕೆ ವೈರಲ್ ಆಯ್ತೋ, ಕೂಡಲೇ ತಮ್ಮ ತಪ್ಪನ್ನು ತಿದ್ದಿಕೊಂಡ ಸಚಿವ ಗೋಯೆಲ್, ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೇವಲ ಒಂದು ಲೈನ್‌ ತೆಗೆದುಕೊಂಡು ಕಿಡಿಗೇಡಿಗಳಂತೆ ತಿರುಚಿದ್ದಾರೆ ಎಂದು ಸ್ಪಷ್ಟನೆ ಕೊಟ್ಟರು. ಗೋಯೆಲ್ ಅವರ ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆ ಕಂಡುಹಿಡಿಯಲು ಗಣಿತ ಬೇಕಿರಲಿಲ್ಲ, ಏಕೆಂದರೆ ಆ ಕೆಲಸವನ್ನು ನ್ಯೂಟನ್ ಅದಾಗಲೇ ಮಾಡಿದ್ದರು ಎಂದು ಕಿಚಾಯಿಸಿದ್ದಾರೆ.






ಜನರು ಓಲಾ ಮತ್ತು ಉಬರ್‌ ಅವಲಂಬಿಸುತ್ತಿರುವ ಕಾರಣ ಕಾರುಗಳ ಮಾರಾಟ ಕುಸಿತವಾಗಿದೆ ಎಂದು ವ್ಯಾಖ್ಯಾನಿಸಿ ನಿರ್ಮಲಾ ಸೀತಾರಾಮನ್ ಅಪಹಾಸ್ಯಕ್ಕೆ ಒಳಗಾಗಿದ್ದರು.

ಜಮ್ಮು ಕಾಶ್ಮೀರ ವಿಷಯದಲ್ಲಿ ನೆಹರೂ ನಡೆ ತಪ್ಪು, ಪಟೇಲ್‌ ನಡೆ ಸರಿ: ರವಿಶಂಕರ್‌ ಪ್ರಸಾದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ