ಆ್ಯಪ್ನಗರ

ದಿಲ್ಲಿಯಿಂದ ಕಂದಹಾರ್‌ಗೆ ಹೊರಟ ವಿಮಾನಕ್ಕೆ ಅಪಹರಣ ಭೀತಿ: ಆಗಿದ್ದೇನು?

'ಕಂದಹಾರ್‌ಗೆ ಹೊರಟಿದ್ದ ವಿಮಾನದ ಸಿಬ್ಬಂದಿ ಪ್ರಮಾದವಶಾತ್ ಹೈಜಾಕ್ ಗುಂಡಿ ಒತ್ತಿದ್ದರಿಂದ ಆತಂಕ ಉಂಟಾಯಿತು. ಕೂಡಲೇ ವಿಮಾನವನ್ನು ದೂರಕ್ಕೆ ಒಯ್ದು ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಾಯಿತು. ಕೊನೆಗೆ 3:30ಕ್ಕೆ ವಿಮಾನ ಪ್ರಯಾಣ ಬೆಳೆಸಿತು' ಎಂದು ಭದ್ರತಾ ಮೂಲಗಳು ತಿಳಿಸಿವೆ.

THE ECONOMIC TIMES 10 Nov 2018, 9:34 pm
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣದ ವದಂತಿ ಕೆಲ ಕಾಲ ಆತಂಕ ಸೃಷ್ಟಿಸಿತು. ದಿಲ್ಲಿ ಮತ್ತು ಕಂದಹಾರ್ ನಡುವಣ ಏರಿಯಾನಾ ಅಫ್ಘಾನ್ ಏರ್‌ಲೈನ್‌ ವಿಮಾನದೊಳಗೆ ಪೈಲಟ್‌ ಅಚಾತುರ್ಯದಿಂದ ಹೈಜಾಕ್ ಗುಂಡಿ ಒತ್ತಿದ್ದೇ ಈ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ತಪಾಸಣೆ ನಡೆಸಿದರು.
Vijaya Karnataka Web Plane hijack scare


'ಕಂದಹಾರ್‌ಗೆ ಹೊರಟಿದ್ದ ವಿಮಾನದ ಸಿಬ್ಬಂದಿ ಪ್ರಮಾದವಶಾತ್ ಹೈಜಾಕ್ ಗುಂಡಿ ಒತ್ತಿದ್ದರಿಂದ ಆತಂಕ ಉಂಟಾಯಿತು. ಕೂಡಲೇ ವಿಮಾನವನ್ನು ದೂರಕ್ಕೆ ಒಯ್ದು ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಾಯಿತು. ಕೊನೆಗೆ 3:30ಕ್ಕೆ ವಿಮಾನ ಪ್ರಯಾಣ ಬೆಳೆಸಿತು' ಎಂದು ಭದ್ರತಾ ಮೂಲಗಳು ತಿಳಿಸಿವೆ.

ಅಲಾರಂ ಮೊಳಗಿದ ತಕ್ಷಣ ಏರ್‌ಪೋರ್ಟ್‌ ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡರು. ಪೈಲಟ್‌ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ. ಪೈಲಟ್‌ ಈ ಬಗ್ಗೆ ಲಿಖಿತವಾಗಿ ಒಪ್ಪಿಕೊಂಡ ಬಳಿಕ ವಿಮಾನದ ಪ್ರಯಾಣಕ್ಕೆ ಅನುಮತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಮಾನದಲ್ಲಿ 9 ಮಂದಿ ಸಿಬ್ಬಂದಿ ಹಾಗೂ 1 ಮಗುವೂ ಸೇರಿದಂತೆ 124 ಪ್ರಯಾಣಿಕರಿದ್ದರು. ಈ ವಿಮಾನಕ್ಕೆ ಜೆಟ್ ಏರ್‌ವೇಸ್‌ ಭದ್ರತಾ ಸೇವೆ ಒದಗಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ