ಆ್ಯಪ್ನಗರ

ವಿದ್ಯುತ್‌ ಕದ್ದಿದ್ದ ಅಪರಾಧಕ್ಕಾಗಿ 50 ಸಸಿ ನೆಡುವ ಶಿಕ್ಷೆ ವಿಧಿಸಿದ ದಿಲ್ಲಿ ಕೋರ್ಟ್‌

​​ಆದೇಶ ಪರಿಪಾಲನೆ ಪೂರ್ಣಗೊಂಡಿದ್ದರ ಕುರಿತು ಆರೋಪಿ ಹಾಗೂ ಡಿಸಿಎಫ್‌ ನ್ಯಾಯಾಲಯಕ್ಕೆ ಭಾವಚಿತ್ರ ಸಮೇತ ಅಫಿಡವಿಟ್‌ ಸಲ್ಲಿಸಬೇಕು. ಒಂದೊಮ್ಮೆ ವಿಫಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,'' ಎಂದು ಕೋರ್ಟ್‌ ಎಚ್ಚರಿಸಿದೆ.

Vijaya Karnataka 12 Aug 2019, 8:06 am
ಹೊಸದಿಲ್ಲಿ: ವಿದ್ಯುತ್‌ ಕಳ್ಳತನ ಪ್ರಕರಣದಲ್ಲಿ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿದ್ದ ಆರೋಪಿಗೆ ಸಮುದಾಯದ ಸೇವೆಯಾಗಿ 50 ಸಸಿ ನೆಡುವಂತೆ ದಿಲ್ಲಿ ಹೈಕೋರ್ಟ್‌ ನಿರ್ದೇಶಿಸಿದೆ.
Vijaya Karnataka Web tree


ವಿಚಾರಣೆ ಮುಕ್ತಾಯಗೊಳಿಸಲು ಒಪ್ಪಿರುವ ಕೋರ್ಟ್‌ ದಿಲ್ಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ಸಸಿಗಳನ್ನು ಒಂದು ತಿಂಗಳಲ್ಲಿ ನೆಡುವಂತೆ ಆದೇಶಿಸಿದ್ದಲ್ಲದೇ ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಯ (ಪಶ್ಚಿಮ) ನೆರವು ಪಡೆಯುವಂತೆ ಸೂಚಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಯ (ಡಿಸಿಎಫ್‌) ನೆರವಿನ ಮೇರೆಗೆ ಆರೋಪಿ ಮಾವು, ಬೇವು, ನೇರಳೆ, ಆಲದ ಮರ ಹೀಗೆ ವಿವಿಧ ಪ್ರಭೇದದ ಸಸಿಗಳನ್ನು ನೆಡಬೇಕು.

ಆದೇಶ ಪರಿಪಾಲನೆ ಪೂರ್ಣಗೊಂಡಿದ್ದರ ಕುರಿತು ಆರೋಪಿ ಹಾಗೂ ಡಿಸಿಎಫ್‌ ನ್ಯಾಯಾಲಯಕ್ಕೆ ಭಾವಚಿತ್ರ ಸಮೇತ ಅಫಿಡವಿಟ್‌ ಸಲ್ಲಿಸಬೇಕು. ಒಂದೊಮ್ಮೆ ವಿಫಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,'' ಎಂದು ಕೋರ್ಟ್‌ ಎಚ್ಚರಿಸಿದೆ. ಆರೋಪಿಯು ಅಂಗಡಿಯನ್ನು ಬಾಡಿಗೆ ನೀಡಿದ್ದ. ಈ ಅಂಗಡಿಗೆ ರಸ್ತೆಯಲ್ಲಿರುವ ವಿದ್ಯುತ್‌ ಕಂಬದಿಂದ ಅಕ್ರಮವಾಗಿ ತಂತಿ ಎಳೆದು ವಿದ್ಯುತ್‌ ಸಂಪರ್ಕ ಪಡೆಯಲಾಗಿತ್ತು. ಇದರಿಂದ 18,267 ರೂ.ನಷ್ಟು ಮೊತ್ತದ ವಿದ್ಯುತ್‌ ಕಳುವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ