ಆ್ಯಪ್ನಗರ

ಅತಿಥಿಯಾಗಿ ಶಾಲಾ ಕಾರ್ಯಕ್ರಮಕ್ಕೆ ಕರೆದರೆ, ಪ್ಲಾಸ್ಟಿಕ್ ಬಳಸಿದ್ದಕ್ಕೆ ದಂಡ ವಿಧಿಸಿದ ಜಿಲ್ಲಾಧಿಕಾರಿ

ತಮ್ಮನ್ನು ಗೌರವಿಸುತ್ತಿದ್ದಾರೆ ಎಂಬುದನ್ನು ಪರಿಗಣಿಸಿ ಮುಲಾಜು ತೋರದೆ ತಕ್ಷಣಕ್ಕೆ ದಂಡ ವಿಧಿಸಿ ಖಡಕ್ ಸಂದೇಶ ರವಾನಿಸಿದ ಈ ಜಿಲ್ಲಾಧಿಕಾರಿ ನಿಜಕ್ಕೂ ಪ್ರಶಂಸೆಗೆ ಅರ್ಹರು.

TIMESOFINDIA.COM 21 Oct 2019, 2:59 pm
ಭೋಪಾಲ್: ಅವರು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಜಿಲ್ಲಾಧಿಕಾರಿ. ಸರಕಾರಿ ಶಾಲೆಯೊಂದರಲ್ಲಿ ನಡೆದ ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಹೋಗಿದ್ದರು. ಸಂಪ್ರದಾಯದಂತೆ ಅವರಿಗೆ ಹೂಮಾಲೆಯನ್ನು ಹಾಕಲು ಬಂದಾಗ ಏಕಾಏಕಿ ಕೋಪಗೊಂಡ ಅವರು ಪ್ರಾಚಾರ್ಯರಿಗೆ 1,000ರೂ ದಂಡ ವಿಧಿಸಿದರು. ಅಷ್ಟಕ್ಕೂ ಅವರು ಸಿಡಿಮಿಡಿಗೊಳ್ಳಲು ಕಾರಣವೇನು?
Vijaya Karnataka Web Plastic Ban 2


ಕಾರಣ ಅವರಿಗೆ ಗೌರವಿಸಲು ತಂದಿದ್ದ ಹೂಮಾಲೆಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತರಲಾಗಿತ್ತು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದ ಜಿಲ್ಲಾಧಿಕಾರಿ ಚೋಟೆ ಸಿಂಗ್ ಸ್ಥಳದಲ್ಲಿಯೇ ಪ್ರಾಚಾರ್ಯರಿಗೆ ದಂಡ ವಿಧಿಸಿ ಕರ್ತವ್ಯ ಪ್ರಜ್ಞೆ ಮೆರೆದರು ಮತ್ತು ಈ ಮೂಲಕ ಖಡಕ್ ಸಂದೇಶ ರವಾನಿಸಿದರು. ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಜಿಲ್ಲೆಯ 57 ಶಾಲೆಗಳ ವಿದ್ಯಾರ್ಥಿಗಳು , ಜಿಲ್ಲಾ ಶಿಕ್ಷಣಾಧಿಕಾರಿ, ಡಿಎಫ್ಒ ಸಹ ಹಾಜರಿದ್ದರು.

ಟೆಟ್ರಾ ಪ್ಯಾಕ್‌ ಕಸ, ಪರಿಸರಕ್ಕೆ ವಿಷ

ಕಾರ್ಯಕ್ರಮ ಆಯೋಜಿತಗೊಂಡಿದ್ದ ಶಾಲೆಯ ಪ್ರಾಚಾರ್ಯ ಪಿ ಎಸ್ ಚೌಹಾನ್, ಪ್ಲಾಸ್ಟಿಕ್ ಕವರ್‌ನಲ್ಲಿ ಹೂ ಮಾಲೆ ತೆಗೆದುಕೊಂಡು ಸ್ವಾಗತ ಕೋರಲು ಹತ್ತಿರ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಹಿಂದೆ ಮುಂದೆ ನೋಡದೆ 1ಸಾವಿರ ರೂ ದಂಡ ವಿಧಿಸಿಯೇ ಬಿಟ್ಟರು. ಈ ದಿಢೀರ್ ಬೆಳವಣಿಗೆಯಿಂದ ಪ್ರಾಚಾರ್ಯ ಅವಮಾನದಿಂದ ತಲೆ ತಗ್ಗಿಸಿದರೆ, ನೆರೆದವರು ಮತ್ತು ಆಯೋಜಕರು ಸ್ತಂಭೀಭೂತರಾದರು.

ಪರಿಸರದ ಬಗ್ಗೆ ಕಾಳಜಿ ಬೆಳೆಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಸಿದ್ದು ನಿಜಕ್ಕೂ ದುರದೃಷ್ಟಕರ. ಇದು ನಿಜಕ್ಕೂ ತಪ್ಪು ಸಂದೇಶ ನೀಡುತ್ತಿತ್ತು. ಹೀಗಾಗಿ ಸ್ಥಳದಲ್ಲಿಯೇ ದಂಡ ವಿಧಿಸಿ, ರಶೀದಿ ನೀಡಿದೆ. ನನ್ನ ಉದ್ದೇಶ ವಿದ್ಯಾರ್ಥಿಗಳಿಗೆ ಸ್ಪಷ್ಟ ಸಂದೇಶ ನೀಡುವುದಾಗಿತ್ತು. ಹೊರತು ಯಾರಿಗೂ ಅವಮಾನ ಮಾಡುವುದಾಗಿರಲಿಲ್ಲ ಎಂದು ಜಿಲ್ಲಾಧಿಕಾರಿ ತಮ್ಮ ಕ್ರಮಕ್ಕೆ ಸ್ಪಷ್ಟನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ದಂಡ ಪಾವತಿ ಮಾಡಿದ ಪ್ರಾಚಾರ್ಯರು ಕಾರ್ಯಕ್ರಮವನ್ನು ಆಯೋಜಿಸಿದ್ದು ಅರಣ್ಯ ಇಲಾಖೆ, ಅವರೇ ಎಲ್ಲ ವ್ಯವಸ್ಥೆ ಮಾಡಿದ್ದು. ಆದರೆ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಹೇಳಿದ್ದು ಸರಿ ಇದೆ, ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ