ಆ್ಯಪ್ನಗರ

ದೀದಿ ರಾಜ್ಯದಲ್ಲಿ ಮುಸ್ಲಿಮರ ಸ್ಥಿತಿ ಅಧೋಗತಿ, ಮಮತಾಗೆ ತಿರುಗೇಟು ನೀಡಿದ ಓವೈಸಿ

ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸ್ಥಿತಿ ಅಧೋಗತಿಗೆ ತಲುಪಿದೆ. ಮಮತಾ ಬ್ಯಾನರ್ಜಿ ಆಡಳಿತದಿಂದಲೇ ಈ ರೀತಿ ಆಗಿದೆ ಎಂದು ಹೇಳುವ ಮೂಲಕ ದೀದಿಗೆ ಓವೈಸಿ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

Vijaya Karnataka Web 20 Nov 2019, 8:55 am
ಹೊಸದಿಲ್ಲಿ: ಮಮತಾ ಬ್ಯಾನರ್ಜಿ ಆಡಳಿತ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸ್ಥಿತಿ ಅಧೋಗತಿಗೆ ತಲುಪಿದೆ. ಅಭಿವೃದ್ಧಿ ವಿಷಯದಲ್ಲಿಅವರು ತೀವ್ರ ಹಿನ್ನಡೆ ಅನುಭವಿಸಿದ್ದರಿಂದಲೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 18 ಸ್ಥಾನಗಳು ದಕ್ಕಿದವು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್‌ ಓವೈಸಿ ಮಂಗಳವಾರ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ.
Vijaya Karnataka Web asaduddin owaisi


ಓವೈಸಿಗೆ ಮಸೀದಿ ಬೇಕಿದ್ದರೆ ಬಾಬರ್‌ನ ಪರ್ಷಿಯಾ ಸಾಮ್ರಾಜ್ಯಕ್ಕೆ ತೆರಳಲಿ: ಸಿ.ಟಿ. ರವಿ ಟಾಂಗ್‌

ಕೂಚ್‌ ಬೆಹರ್‌ ರ‍್ಯಾಲಿ ಯಲ್ಲಿ ಸೋಮವಾರವಷ್ಟೇ ಓವೈಸಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು. ''ಅಲ್ಪಸಂಖ್ಯಾತರ ನಡುವಿನ ಕೆಲವು ಉಗ್ರವಾದಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೈದರಾಬಾದ್‌ ಬಿಟ್ಟರೆ ಬೇರೆ ಕಡೆ ನೆಲೆ ಇಲ್ಲ. ಅಂಥವರ ಮಾತು ಕೇಳಬೇಡಿ,'' ಎಂದು ಓವೈಸಿ ವಿರುದ್ಧ ದೀದಿ ಹರಿಹಾಯ್ದಿದ್ದರು.

ರಾಜ್ಯಪಾಲರಿಗೇ ಹೆಲಿಕಾಪ್ಟರ್‌ ನೀಡಲು ನಿರಾಕರಿಸಿದ ಮಮತಾ ಸರಕಾರ, 600 ಕಿ.ಮೀ ರಸ್ತೆ ಪ್ರಯಾಣವೇ ಗತಿ


ಮಮತಾಗೆ ಉಗ್ರರ ಮೇಲೆ ಮಮತೆಯೇ?: ಕಾರ್ಮಿಕರ ಹತ್ಯೆಗೆ ಕೇಂದ್ರವನ್ನು ದೂಷಿಸಿದ ಪ. ಬಂ ಸಿಎಂಗೆ ಬಿಜೆಪಿ ಪ್ರಶ್ನೆ
ಇದಕ್ಕೆ ಟ್ವಿಟರ್‌ ಮೂಲಕ ತಿರುಗೇಟು ನೀಡಿದ ಸಂಸದ ಓವೈಸಿ, ''ಬಂಗಾಳದಲ್ಲಿ ಮುಸ್ಲಿಮರು ಸ್ಥಿತಿ ಶೋಚನೀಯವಾಗಿದೆ ಎಂದು ಹೇಳುವುದು ದೀದಿಗೆ ಉಗ್ರವಾದವಾಗಿ ಕಾಣಿಸುತ್ತಿರುವುದು ವಿಪರ್ಯಾಸ. ಇಂತಹ ಮುಂಗೋಪ, ಮೊಂಡು ಧೋರಣೆಗಳಿಂದಲೇ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರು,'' ಎಂದಿದ್ದಾರೆ.

ಹಲ್ಲೆಕೋರರ ಬಂಧಿಸಿ: ಮಮತಾಗೆ ಸವಾಲು

ಕೂಚ್‌ ಬೆಹರ್‌ ಲೋಕಸಭೆ ಕ್ಷೇತ್ರವ ವ್ಯಾಪ್ತಿಯಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿಈ ಸ್ಥಾನವನ್ನು ಟಿಎಂಸಿಯಿಂದ ಬಿಜೆಪಿ ಗೆದ್ದುಕೊಂಡಿತ್ತು. ಇದನ್ನೇ ಓವೈಸಿ ತಮ್ಮ ಮಾತಿಗೆ ಅಸ್ತವಾಗಿ ಬಳಸಿಕೊಂಡು ದೀದಿ ವರ್ತನೆಯನ್ನು ಅಣಕವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ