ಆ್ಯಪ್ನಗರ

ಕಾಂಗ್ರೆಸ್‌ನಿಂದ ಪಂಜಾಬ್‌ ಯುವಜನರ ಹೆಸರಿಗೆ ಮಸಿ: ಪಿಎಂ

ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

Vijaya Karnataka Web 29 Jan 2017, 5:43 pm
ಹೊಸದಿಲ್ಲಿ: ಒಂದು ವಾರದ ನಂತರ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಹರಿಹಾಯ್ದಿದ್ದಾರೆ.
Vijaya Karnataka Web pm calls kejriwal outsider slams cong for maligning punjabs youth
ಕಾಂಗ್ರೆಸ್‌ನಿಂದ ಪಂಜಾಬ್‌ ಯುವಜನರ ಹೆಸರಿಗೆ ಮಸಿ: ಪಿಎಂ


ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ ಪಕ್ಷವನ್ನು ಪಂಜಾಬ್‌ ಜನತೆ ಹೊರಗಟ್ಟುವರು ಎಂದಿದ್ದಾರೆ.

'ದಿಲ್ಲಿಯಿಂದ ಪಂಜಾಬ್‌ ಕಡೆಗೆ ಪಯಣ ಬೆಳೆಸಿರುವ ಜನರನ್ನುಇಲ್ಲಿಂದ ವಾಪಸ್ ಕಳುಹಿಸುವ ಮುನ್ನ, ಮೊದಲು ದಿಲ್ಲಿ ಜನರಿಗೆ ನೀಡಿರುವ ಭರವಸೆಯನ್ನು ಪೂರೈಸಿ ಎಂದು ಹೇಳಿ ಕಳುಹಿಸಿ,'ಎಂದು ಫರೀದ್ ಕೋಟ್‌ ರ‍್ಯಾಲಿಯಲ್ಲಿ ಪ್ರಧಾನಿ ಹೇಳಿದ್ದಾರೆ.

ಎಸ್‌ಎಡಿ-ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಪ್ರಕಾಶ್‌ ಸಿಂಗ್‌ ಬಾದಲ್‌ ಪರ ಪ್ರಚಾರ ಮಾಡಿದ ಪ್ರಧಾನಿ, 'ಹೊರಗಿನವರು ಇವರ ವಿರುದ್ಧ ದನಿ ಎತ್ತಬಾರದು. ಅಣ್ಣಾ ಹಜಾರೆ ಅವರಂಥ ವ್ಯಕ್ತಿಗೆ ನ್ಯಾಯ ಸಲ್ಲಿಸಲಾಗದವರು, ಬಾದಲ್‌ ಜೀ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಲಿ ಎಂದು ನಿರೀಕ್ಷಿಸುವುದು ಸರಿ ಇಲ್ಲ,' ಎಂದಿದ್ದಾರೆ.

'ರಾಜ್ಯ ಯುವಜನರನ್ನು ಕೆಟ್ಟದಾಗಿ ಬಿಂಬಿಸಲು ಕಾಂಗ್ರೆಸ್‌ ಅಭಿಯಾನವನ್ನು ಆರಂಭಿಸಿದೆ. ಪಂಜಾಬ್‌ ಯುವಜನರನ್ನು ಉಗ್ರರು, ದುಶ್ಚಟಗಳ ದಾಸರು ಎಂದು ಬಿಂಬಿಸುವ ಮೂಲಕ ದೊಡ್ಡ ತಪ್ಪು ಮಾಡಿದೆ. ರಾಜ್ಯಕ್ಕಾಗಿ ಕೆಲಸ ಮಾಡುವ ಪಕ್ಷಕ್ಕೆ ಮತ ನೀಡಿ, ಪ್ರಬಲ ಸರಕಾರ ಅಸ್ತಿತ್ವಕ್ಕೆ ಬರಲಿ,' ಎಂದು ಪ್ರಧಾನಿ ಆಗ್ರಹಿಸಿದ್ದಾರೆ.

ಫೆಬ್ರವರಿ 4ರಂದು ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಮತನಾದ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ