ಆ್ಯಪ್ನಗರ

ಯುವ ಉದ್ಯಮಿಗಳ ಸಮಾವೇಶ ಉದ್ದೇಶಿಸಿ ಮೋದಿ ಹೇಳಿದ್ದೇನು?

ದೇಶದ ಇನ್ನೂರಕ್ಕೂ ಹೆಚ್ಚು ಯುವ ಸಿಇಒಗಳ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆಗಳನ್ನು ನೀಡಿದ್ದಾರೆ.

TNN 22 Aug 2017, 7:03 pm
ಹೊಸದಿಲ್ಲಿ: ಸರ್ಕಾರಕ್ಕೆ ಎಲ್ಲಕ್ಕಿಂತ ಪ್ರಮುಖವಾದ ವಿಷಯ ಎಂದರೆ ಜನಹಿತ. ಜನರ ಹಿತಾಸಕ್ತಿಯನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
Vijaya Karnataka Web pm modi addresses ceos at champions of change event
ಯುವ ಉದ್ಯಮಿಗಳ ಸಮಾವೇಶ ಉದ್ದೇಶಿಸಿ ಮೋದಿ ಹೇಳಿದ್ದೇನು?


ದೇಶದ ಇನ್ನೂರಕ್ಕೂ ಹೆಚ್ಚು ಯುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ 'ಚಾಂಪಿಯನ್ಸ್‌ ಆಫ್‌ ಚೇಂಜ್‌' ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಯುವ ಸಮುದಾಯ ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಮುಂದಾಗಬೇಕು ಎಂದು ಕರೆ ನೀಡಿದರು.

ಎಲ್ಲ ದೇಶವಾಸಿಗಳು ಸಮಾನರು. ಆದರೆ ಎಲ್ಲರಿಗೂ ಇದು ನನ್ನ ದೇಶ ಎಂಬ ಭಾವನೆ ಮೂಡಬೇಕು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ ಇರಬೇಕು ಎಂದು ಮೋದಿ ಹೇಳಿದರು.

ಈಗ ದೇಶ, ದೇಶವಾಸಿಗಳ ಯೋಚಿಸುವ ರೀತಿ ಬದಲಾಗಿದೆ. ದೇಶದ ಪ್ರಗತಿ ಮಾರ್ಗವನ್ನು ಸರ್ಕಾರ ರೂಪಿಸುತ್ತದೆ. ದೇಶ ಪ್ರಗತಿ ಮಾರ್ಗದಲ್ಲಿ ಸಾಗಲು ಯುವಕರ ಜವಾಬ್ದಾರಿ ಮಹತ್ವದ್ದಾಗಿದೆ ಮತ್ತು ಯುವಕರೇ ಜವಾಬ್ದಾರರಾಗಬೇಕು ಎಂದರು

ಯುವ ಸಿಒಎಗಳು ರೈತರ ಹಿತಾಸಕ್ತಿಯನ್ನು ಕಾಪಾಡಲು ಕೆಲವು ಪ್ರಯತ್ನಗಳನ್ನು ಮಾಡಬೇಕು. ಅನ್ನದಾತ ನಮ್ಮ ದೇಶದ ಬೆನ್ನೆಲುಬು. ಅವನ ಪರವಾಗಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

PM Modi addresses CEOs at Champions of Change event

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ