ಹೊಸದಿಲ್ಲಿ: ಇಂದು ದೇಶಾದ್ಯಂತ ಸಂಭ್ರಮದಿಂದ ಗಣೇಶನನ್ನು ಪೂಜಿಸುತ್ತ ಆಚರಿಸುತ್ತಾರೆ. ಗಣೇಶ ಚತುರ್ಥಿ ದಿನದಂದು ಗಣಪತಿಯನ್ನು ಭಕ್ತಿಯಿಂದ ಪೂಜಿಸಿದರೆ ನಮ್ಮೆಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಜನರು ಮುಂಜಾನೆ ಎದ್ದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ವೃತಾಚರಣೆ ಮಾಡುತ್ತಾರೆ. ಇನ್ನು ಹಿಂದೂಗಳ ಪ್ರಮುಖ ಹಬ್ಬಕ್ಕೆ ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಶುಭ ಕೋರಿದ್ದಾರೆ. ನಿಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು. ಗಣೇಶ ಹಬ್ಬದ ಮೂಲಕ ಪ್ರತಿಯೊಬ್ಬರ ಜೀವನಕ್ಕೂ ಸುಖ, ಶಾಂತಿ, ಸಂತೋಷ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಗಣಪತಿ ಬಪ್ಪ ಮೋರಿಯಾ ಎಂದು ಮೋದಿ ದೇಶದ ಜನತೆಗೆ ಶುಭಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ದೇಶದ ಜನತೆ ಟ್ಟಿಟ್ಟರ್ ಮೂಲಕ ಶುಭಾಶಯ ತಿಳಿದ್ದು, ಗಣಪತಿ ಬಪ್ಪ ಮೋರಿಯಾ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳು. ಕೋವಿಡ್-19 ವಿರುದ್ಧ ವಿಘ್ನನಿವಾರಕ ಗಣೇಶ ನಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಲಿ ಮತ್ತು ಎಲ್ಲರನ್ನೂ ಸಂತೋಷ ಮತ್ತು ಶಾಂತಿಯಿಂದ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. ನಾವೆಲ್ಲರೂ ಈ ಹಬ್ಬವನ್ನು ಕೋವಿಡ್ ಸ್ನೇಹಿಯಾಗಿ ಆಚರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಗಣಪತಿ ಹಬ್ಬಕ್ಕೆ ಶುಭಕೋರಿದ ಗೃಹ ಸಚಿವ ಅಮಿತ್ ಶಾ , ಎಲ್ಲರಿಗೂ ಗಣೇಶ ಒಳಿತು ಮಾಡಲಿ ಎಂದರು.
ದೇಶದ ಅಭಿವೃದ್ದಿಯ ಪತಕ್ಕೆ ಉಂಟಾಗುವ ವಿಘ್ನ ನಿವಾರಣೆ ಆಗಲಿ ಗಣೇಶ ಎಂದು ರಾಹುಲ್ ಗಾಂಧಿ ಶುಭ ಕೋರಿದರು.
"ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಗೆ ಶುಭಕೋರಿದರು.
ಸಂಕಷ್ಟಹರ ಗಣಪತಿಯು ತಮ್ಮೆಲ್ಲರ ಕಷ್ಟ ನಷ್ಟಗಳನ್ನು ದೂರಮಾಡಿ, ಸುಖ ಸಮೃದ್ಧಿಯನ್ನು ಕರುಣಿಸಲಿ. ಹಬ್ಬದ ಆಚರಣೆಯನ್ನು ಆಡಂಬರಕ್ಕಿಂತ ಭಕ್ತಿ ಪ್ರಧಾನವಾಗಿಸೋಣ. ಕೊರೊನಾ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಮರೆಯದಿರೋಣ. ನಾಡಿನ ಸಮಸ್ತ ಜನರಿಗೆ ಗಣೇಶ ಚತುರ್ಥಿಯ ಶುಭಕಾಮನೆಗಳು ಎಂದು ಸಿದ್ದರಾಮಯ್ಯ ಶುಭಕೋರಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ದೇಶದ ಜನತೆ ಟ್ಟಿಟ್ಟರ್ ಮೂಲಕ ಶುಭಾಶಯ ತಿಳಿದ್ದು, ಗಣಪತಿ ಬಪ್ಪ ಮೋರಿಯಾ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳು. ಕೋವಿಡ್-19 ವಿರುದ್ಧ ವಿಘ್ನನಿವಾರಕ ಗಣೇಶ ನಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸಲಿ ಮತ್ತು ಎಲ್ಲರನ್ನೂ ಸಂತೋಷ ಮತ್ತು ಶಾಂತಿಯಿಂದ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. ನಾವೆಲ್ಲರೂ ಈ ಹಬ್ಬವನ್ನು ಕೋವಿಡ್ ಸ್ನೇಹಿಯಾಗಿ ಆಚರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಗಣಪತಿ ಹಬ್ಬಕ್ಕೆ ಶುಭಕೋರಿದ ಗೃಹ ಸಚಿವ ಅಮಿತ್ ಶಾ , ಎಲ್ಲರಿಗೂ ಗಣೇಶ ಒಳಿತು ಮಾಡಲಿ ಎಂದರು.
ದೇಶದ ಅಭಿವೃದ್ದಿಯ ಪತಕ್ಕೆ ಉಂಟಾಗುವ ವಿಘ್ನ ನಿವಾರಣೆ ಆಗಲಿ ಗಣೇಶ ಎಂದು ರಾಹುಲ್ ಗಾಂಧಿ ಶುಭ ಕೋರಿದರು.
"ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಗೆ ಶುಭಕೋರಿದರು.
ಸಂಕಷ್ಟಹರ ಗಣಪತಿಯು ತಮ್ಮೆಲ್ಲರ ಕಷ್ಟ ನಷ್ಟಗಳನ್ನು ದೂರಮಾಡಿ, ಸುಖ ಸಮೃದ್ಧಿಯನ್ನು ಕರುಣಿಸಲಿ. ಹಬ್ಬದ ಆಚರಣೆಯನ್ನು ಆಡಂಬರಕ್ಕಿಂತ ಭಕ್ತಿ ಪ್ರಧಾನವಾಗಿಸೋಣ. ಕೊರೊನಾ ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಮರೆಯದಿರೋಣ. ನಾಡಿನ ಸಮಸ್ತ ಜನರಿಗೆ ಗಣೇಶ ಚತುರ್ಥಿಯ ಶುಭಕಾಮನೆಗಳು ಎಂದು ಸಿದ್ದರಾಮಯ್ಯ ಶುಭಕೋರಿದರು.