ಆ್ಯಪ್ನಗರ

ಬಂದೂಕು ತೊರೆದು ಶರಣಾದ ಉಗ್ರರು ; ಬೋಡೋ ಪ್ರದೇಶಕ್ಕೆ 1,500 ಕೋಟಿ ಪ್ಯಾಕೇಜ್ ಪ್ರಕಟಿಸಿದ ಮೋದಿ

ಬಂದೂಕಿನ ಹಿಂಸಾಮಾರ್ಗವನ್ನು ತೊರೆದು ಶರಣಾಗತರಾದ ಪ್ರತ್ಯೇಕ ಬೋಡೋ ಲ್ಯಾಂಡ್‌ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅಸ್ಸಾಂನ ಕೊಕ್ರಜಾಲ್‌ ನಡೆದ ಶಾಂತಿ ಒಪ್ಪಂದದ ಸಂಭ್ರಮಾಚರಣೆ ಸಮಾವೇಶದಲ್ಲಿ ಮಾತನಾಡಿದ ಅವರು ಬೋಬೋ ಪ್ರದೇಶದ ಅಭಿವೃದ್ದಿಗೆ 1,500 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಿದರು.

Agencies 7 Feb 2020, 2:56 pm
ಗುವಹಾಟಿ: ಬಂದೂಕಿನ ಹಿಂಸಾಮಾರ್ಗವನ್ನು ತೊರೆದು ಶಾಂತಿ ಕರೆಗೆ ಓಗೊಟ್ಟು ಶರಣಾಗತರಾದ ಅಸ್ಸಾಂ ಬೋಡೋ ಜನಾಂಗದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
Vijaya Karnataka Web pm modi announces development package of rs 1500 cr for bodo areas of assam
ಬಂದೂಕು ತೊರೆದು ಶರಣಾದ ಉಗ್ರರು ; ಬೋಡೋ ಪ್ರದೇಶಕ್ಕೆ 1,500 ಕೋಟಿ ಪ್ಯಾಕೇಜ್ ಪ್ರಕಟಿಸಿದ ಮೋದಿ


ಅಸ್ಸಾಂನ ಕೊಕ್ರಜಾರ್‌ನಲ್ಲಿ ನಡೆದ ಶಾಂತಿ ಒಪ್ಪಂದದ ಸಂಭ್ರಮಾಚರಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಬೋಡೋ ಜನಾಂಗಕ್ಕೆ 15,00 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು.

ಪ್ರತ್ಯೇಕ ಬೋಡೋ ಲ್ಯಾಂಡ್‌ಗಾಗಿ ಶಶ್ತ್ರಾಸ್ತ್ರ ಹೋರಾಟ ಮಾಡುತ್ತಿದ್ದ ಎನ್‌ಎಲ್‌ಎಫ್‌ಬಿ ಸಂಘಟನೆಯ ಸುಮಾರು 600 ಮಂದಿ ಉಗ್ರರು ಶರಣಾಗತಾಗಿದ್ದರು. ಸರ್ಕಾರ ಹಾಗೂ ಉಗ್ರಗಾಮಿ ಸಂಘಟನೆಯ ನಡುವೆ ನಡೆದ ಐತಿಹಾಸಿಕ ಶಾಂತಿ ಒಪ್ಪಂದದ ಭಾಗವಾಗಿ ಈ ಶರಣಾಗತಿ ನಡೆದಿತ್ತು.

ಬಿಜೆಪಿಯೇ ವ್ಯವಸ್ಥಿತವಾಗಿ ಗದ್ದಲ ಎಬ್ಬಿಸುತ್ತಿದೆ : ರಾಹುಲ್ ಗಾಂಧಿ ಆರೋಪ

ಬಂದೂಕುಗಳು ಹಾಗೂ ಸ್ಫೋಟಕಗಳನ್ನು ನೀಡಿ ಶರಣಾಗತರಾದ ಉಗ್ರರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು ಸೂಕ್ತ ಪುನರ್ವಸತಿಯ ಭರವಸೆ ನೀಡಿದ್ದಾರೆ. ಶಾಂತಿ ಒಪ್ಪಂದದ ಹಿನ್ನೆಲೆಯಲ್ಲಿ ಶುಕ್ರವಾರ ಅಸ್ಸಾಂನ ಕೊಕ್ರಜಾರ್‌ನಲ್ಲಿ ಬೃಹತ್ ಸಮಾವೇಶದಲ್ಲಿ ಮೋದಿ ಭಾಗವಹಿಸಿ ಮಾತನಾಡಿದರು.

ಒಮರ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ವಿರುದ್ಧ ಭಯೋತ್ಪಾದಕರ ವಿರುದ್ಧ ಬಳಸೋ ಕಠಿಣ ಕಾನೂನು ಜಾರಿ!

ಈ ಶಾಂತಿ ಒಪ್ಪಂದವನ್ನು ಐತಿಹಾಸಿದ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಬೋಡೋ ಜನಾಂಗ ಇಡೀ ದೇಶಕ್ಕೆ ಮಾದರಿಯಾಗಿದೆ. ಅಸ್ಸಾಂನ ಎಲ್ಲಾ ತಾಯಿಯಂದಿರ ಆಶಿರ್ವಾದ ನನ್ನ ಮೇಲಿದೆ. ಬಾಂಬು, ಬಂದೂಕುನಲ್ಲಿ ವಿಶ್ವಾಸ ಇಟ್ಟಿದ್ದವರು ಇವಾಗ ಅದನ್ನು ಬಿಟ್ಟು ಶಾಂತಿ ಮಾರ್ಗವನ್ನು ಒಪ್ಪಿಕೊಂಡಿರುವುದಕ್ಕೆ ಮೆಚ್ಚುವೆ ವ್ಯಕ್ತಪಡಿಸಿದರು.

ಶರಣಾಗತರಾದ ಉಗ್ರರಿಗೆ ವಿಶೇಷ ಪ್ಯಾಕೇಜ್‌ ಹಾಗೂ ಉದ್ಯೋಗ ನೀಡುವ ಭರವಸೆಯನ್ನು ಸಮಾವೇಶದಲ್ಲಿ ಮೋದಿ ನೀಡಿದ್ದು ಬೋಡೋ ಪ್ರದೇಶದ ಅಭಿವೃದ್ದಿಗಾಗಿ ಶ್ರಮ ವಹಿಸಿಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ