ಆ್ಯಪ್ನಗರ

ಭಾರತ-ಡೆನ್ಮಾರ್ಕ್ ದ್ವಿಪಕ್ಷೀಯ ವರ್ಚುವಲ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

ಭಾರತ-ಡೆನ್ಮಾರ್ಕ್ ನಡುವಿನ ದ್ವಿಪಕ್ಷೀಯ ವರ್ಚುವಲ್ ಸಬೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಪೂರೈಕೆಯಲ್ಲಿ ವೈವಿಧ್ಯಮಯ ಸರಪಳಿ ನಿರ್ಮಾಣಕ್ಕೆ ಭಾರತ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Vijaya Karnataka Web 28 Sep 2020, 5:50 pm
ನವದೆಹಲಿ: ಜಾಗತಿಕ ಪೂರೈಕೆಯಲ್ಲಿನ ಏಕರೂಪ ಸರಪಳಿ ಹೆಚ್ಚು ಅಪಾಯಕಾರಿ ಎಂಬುದು ಕೊರೊನಾ ವೈರಸ್ ಹಾವಳಿ ಜಗತ್ತಿಗೆ ತೋರಿಸಿ ಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Vijaya Karnataka Web India-Denmark Virtual Meet
ಭಾರತ-ಡೆನ್ಮಾಕರ್ ದ್ವಿಪಕ್ಷೀಯ ವರ್ಚುವಲ್ ಸಭೆ


ಭಾರತ-ಡೆನ್ಮಾರ್ಕ್ ನಡುವಿನ ದ್ವಿಪಕ್ಷೀಯ ವರ್ಚುವಲ್ ಸಬೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಾಗತಿಕ ಪೂರೈಕೆಯಲ್ಲಿ ವೈವಿಧ್ಯಮಯ ಸರಪಳಿ ನಿರ್ಮಾಣಕ್ಕೆ ಭಾರತ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಭಾರತ-ಜಪಾನ್-ಆಸ್ಟ್ರೇಲಿಯಾ ನಡುವೆ ಇಂತಹ ಪೂರೈಕೆ ಸರಪಳಿ ನಿರ್ಮಾಣಕ್ಕೆ ನಾವು ಕೆಲಸ ಮಾಡುತ್ತಿದ್ದು, ಸಮಾನ ಮನಸ್ಕ ದೇಶಗಳು ಈ ಪ್ರಯತ್ನದಲ್ಲಿ ಭಾಗಿಯಾಗಬಹುದು ಎಂದು ಪ್ರಧಾನಿ ಮೋದಿ ಆಮಂತ್ರಣ ನೀಡಿದರು.

ಸಂಬಂಧ ವೃದ್ಧಿಗೆ ಮುನ್ನುಡಿ: ಆಸಿಸ್ ಜೊತೆ ವರ್ಚುವಲ್ ದ್ವಿಪಕ್ಷೀಯ ಸಭೆ ಯಶಸ್ವಿ!


ಇದೇ ವೇಳೆ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಉಭಯ ಕುಶಲೋಪಹರಿ ನಡೆಸಿದ ಪ್ರಧಾನಿ ಮೋದಿ, ಮೆಟ್ಟೆ ಕುಟುಂಬವನ್ನು ಭಾರತಕ್ಕೆ ಆಹ್ವಾನಿಸಿದರು.

ಕೊರೊನಾ ವೈರಸ್ ಹಾವಳಿ ಮುಕ್ತಾಯವಾದ ಬಳಿಕ ತಮ್ಮ ಕುಟುಂಬ ಸಮೇತ ಭಾರತಕ್ಕೆ ಬರುವಂತೆ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ಪ್ರಧಾನಿ ಮೋದಿ ಆಹ್ವಾನಿಸಿದರು.

ಇತಿಹಾಸದಲ್ಲಿ ಇದೇ ಮೊದಲು: ಭಾರತ-ಆಸಿಸ್ ವರ್ಚುವಲ್ ದ್ವಿಪಕ್ಷೀಯ ಸಭೆ!

ಇನ್ನು ಮೋದಿ ಆಹ್ವಾನವನ್ನು ಸ್ವೀಕರಿಸಿದ ಮೆಟ್ಟೆ ಫ್ರೆಡೆರಿಕ್ಸೆನ್, ತಮ್ಮ ಮಗಳನ್ನು ಕರೆದುಕೊಂಡು ಕುಟುಂಬ ಸಮೇತ ಭಾರತಕ್ಕೆ ಬರುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ