ಹೊಸದಿಲ್ಲಿ: ಕೃಷಿ ಕಾಯ್ದೆಗಳ ಜಾರಿ ವಿರೋಧಿಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ನ್ನು ರಾಜ್ಯಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ಮೋದಿ, ಕೃಷಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯಸಭೆಯಲ್ಲಿ ಇಂದು(ಫೆ.08-ಸೋಮವಾರ) ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿ ಕಾಯ್ದೆಗಳ ಕುರಿತು ಕಾಂಗ್ರೆಸ್ ನಿಲುವನ್ನು ತೀವ್ರವಾಗಿ ಟೀಕಿಸಿದರು.
ಕೃಷಿ ಕಾಯ್ದೆಗಳು ರೈತಪರ: ಅನ್ನದಾತನ ಜೀವನ ಸುಧಾರಣೆಗೆ ಸರ್ಕಾರ ಬದ್ಧ ಎಂದ ಪ್ರಧಾನಿ!
ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ಇದೇ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಮುಂದಾಗಿತ್ತು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಈ ಕಾಯ್ದೆಯ ಪರ ಇದೇ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದರು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ಗೆ ಇತಿಹಾಸವನ್ನು ನೆನೆಪಿಸಿಕೊಟ್ಟರು.
ಈ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ತುಂಬ ಉತ್ಸುಕವಾಗಿತ್ತು. ಆದರೆ ಈಗ ವಿಪಕ್ಷದಲ್ಲಿದ್ದುಕೊಂಡು ರಾಜಕೀಯ ಕಾರಣಕ್ಕೆ ಕಾಯ್ದೆಯ ಜಾರಿಯನ್ನು ವಿರೋಧಿಸುತ್ತಿದೆ ಎಂದು ಮೋದಿ ಹರಿಹಾಯ್ದರು.
'ಡಾ. ಸಿಂಗ್ ಹೇಳಿದ್ದನ್ನೇ ನಾನು ಮಾಡಿದ್ದೇನೆ..' ಹೀಗಾಗಿ ವಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವನ್ನು ಮೆಚ್ಚಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದರು.
ರಾಜ್ಯಸಭೆ: ಗುಲಾಂ ನಬಿ ಆಜಾದ್ ಅವರನ್ನು ಹೊಗಳಿ ಕಾಂಗ್ರೆಸ್ ಕಾಲೆಳೆದ ಪ್ರಧಾನಿ ಮೋದಿ!
ಇನ್ನು ಪ್ರಧಾನಿ ಮೋದಿ ತಮ್ಮ ಕುರಿತು ಪ್ರಸ್ತಾಪಿಸುತ್ತಿದ್ದ ವೇಳೆ ಮಾಜಿ ಪ್ರಾಧನಿ ಡಾ. ಮನಮೋಹನ್ ಸಿಂಗ್ ಸದನದಲ್ಲಿ ಉಪಸ್ಥಿತರಿದ್ದರು. ಅಲ್ಲದೇ ಪ್ರಧಾನಿ ಮೋದಿ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು.
ಕೃಷಿ ಕಾಯ್ದೆಗಳು ರೈತಪರ: ಅನ್ನದಾತನ ಜೀವನ ಸುಧಾರಣೆಗೆ ಸರ್ಕಾರ ಬದ್ಧ ಎಂದ ಪ್ರಧಾನಿ!
ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಕಾಂಗ್ರೆಸ್ ಇದೇ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಮುಂದಾಗಿತ್ತು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಈ ಕಾಯ್ದೆಯ ಪರ ಇದೇ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದರು ಎಂದು ಪ್ರಧಾನಿ ಮೋದಿ ಕಾಂಗ್ರೆಸ್ಗೆ ಇತಿಹಾಸವನ್ನು ನೆನೆಪಿಸಿಕೊಟ್ಟರು.
ಈ ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ತುಂಬ ಉತ್ಸುಕವಾಗಿತ್ತು. ಆದರೆ ಈಗ ವಿಪಕ್ಷದಲ್ಲಿದ್ದುಕೊಂಡು ರಾಜಕೀಯ ಕಾರಣಕ್ಕೆ ಕಾಯ್ದೆಯ ಜಾರಿಯನ್ನು ವಿರೋಧಿಸುತ್ತಿದೆ ಎಂದು ಮೋದಿ ಹರಿಹಾಯ್ದರು.
'ಡಾ. ಸಿಂಗ್ ಹೇಳಿದ್ದನ್ನೇ ನಾನು ಮಾಡಿದ್ದೇನೆ..' ಹೀಗಾಗಿ ವಿಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವನ್ನು ಮೆಚ್ಚಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಮಾರ್ಮಿಕವಾಗಿ ಹೇಳಿದರು.
ರಾಜ್ಯಸಭೆ: ಗುಲಾಂ ನಬಿ ಆಜಾದ್ ಅವರನ್ನು ಹೊಗಳಿ ಕಾಂಗ್ರೆಸ್ ಕಾಲೆಳೆದ ಪ್ರಧಾನಿ ಮೋದಿ!
ಇನ್ನು ಪ್ರಧಾನಿ ಮೋದಿ ತಮ್ಮ ಕುರಿತು ಪ್ರಸ್ತಾಪಿಸುತ್ತಿದ್ದ ವೇಳೆ ಮಾಜಿ ಪ್ರಾಧನಿ ಡಾ. ಮನಮೋಹನ್ ಸಿಂಗ್ ಸದನದಲ್ಲಿ ಉಪಸ್ಥಿತರಿದ್ದರು. ಅಲ್ಲದೇ ಪ್ರಧಾನಿ ಮೋದಿ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು.