ಹೊಸದಿಲ್ಲಿ: ಉಗ್ರ ದಾಳಿ ನಡೆದ 24 ತಾಸುಗಳಲ್ಲಿಯೇ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಉಗ್ರ ನೆಲೆಗಳನ್ನು ಛಿದ್ರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಪಡೆಗಳಿಗೆ ಸಮ್ಮತಿ ನೀಡಿದ್ದರು ಎನ್ನುವ ಸಂಗತಿ ಈಗ ಬೆಳಕಿಗೆ ಬಂದಿದೆ.
ಉಗ್ರ ದಾಳಿಯಿಂದ ವಿಚಲಿತಗೊಳ್ಳದ ಭಾರತೀಯ ಸೇನಾ ಪಡೆಗಳು, ಮುಂದೇನು ಎನ್ನುವ ಕುರಿತು ಯೋಚನೆ ಶುರು ಮಾಡಿದವು. 24 ತಾಸುಗಳಲ್ಲಿ ವಾಯು ದಾಳಿಯ ರೂಪುರೇಷೆಗಳನ್ನು ಸಿದ್ಧಪಡಿಸಿದವು. ಇದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಪ್ರಶ್ನೆ ಇಲ್ಲದೇ ಸಮ್ಮತಿ ಸೂಚಿಸಿದರು.
ಇದಾಗಿ ದಾಳಿಯ ನಿಖರ ನೆಲೆಗಳು ಯಾವು ಎನ್ನುವ ಕುರಿತು ಸೇನೆ ಮಾಹಿತಿ ಕಲೆಹಾಕಲು ಆರಂಭಿಸಿತು. ಪಾಕ್ ಗಡಿಯಲ್ಲಿ ಬೀಡುಬಿಟ್ಟಿದ್ದ ಜೈಷೆ ಮೊಹಮ್ಮದ್ ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಬಾಲಾಕೋಟ್ಗೆ ಉಗ್ರರ ದೊಡ್ಡ ದಂಡು ವಲಸೆ ಹೋದ ಕುರಿತು ವಿವರ ಪಡೆಯಿತು. ಬಳಿಕ, ಗಡಿಯಿಂದ 80 ಕಿ.ಮೀ. ಒಳಕ್ಕೆ ಶರವೇಗದಲ್ಲಿ ಹೋಗಿ ದಾಳಿ ನಡೆಸಿ ಬರುವ ಯುದ್ಧ ವಿಮಾನ ಯಾವುದು ಎನ್ನುವ ಜಿಜ್ಞಾಸೆ ನಡೆಸಿದಾಗ, 'ಮಿರಾಜ್ 2000' ಆಯ್ಕೆಯಾಯಿತು. ಕಾಲಮಿತಿಯೊಳಗೆ ತ್ವರಿತವಾಗಿ ನಡೆದ ಈ ಸಿದ್ಧತೆ ಕುರಿತು ಕೊನೆ ಘಳಿಗೆವರೆಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಉಗ್ರ ದಾಳಿಯಿಂದ ವಿಚಲಿತಗೊಳ್ಳದ ಭಾರತೀಯ ಸೇನಾ ಪಡೆಗಳು, ಮುಂದೇನು ಎನ್ನುವ ಕುರಿತು ಯೋಚನೆ ಶುರು ಮಾಡಿದವು. 24 ತಾಸುಗಳಲ್ಲಿ ವಾಯು ದಾಳಿಯ ರೂಪುರೇಷೆಗಳನ್ನು ಸಿದ್ಧಪಡಿಸಿದವು. ಇದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಪ್ರಶ್ನೆ ಇಲ್ಲದೇ ಸಮ್ಮತಿ ಸೂಚಿಸಿದರು.
ಇದಾಗಿ ದಾಳಿಯ ನಿಖರ ನೆಲೆಗಳು ಯಾವು ಎನ್ನುವ ಕುರಿತು ಸೇನೆ ಮಾಹಿತಿ ಕಲೆಹಾಕಲು ಆರಂಭಿಸಿತು. ಪಾಕ್ ಗಡಿಯಲ್ಲಿ ಬೀಡುಬಿಟ್ಟಿದ್ದ ಜೈಷೆ ಮೊಹಮ್ಮದ್ ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಬಾಲಾಕೋಟ್ಗೆ ಉಗ್ರರ ದೊಡ್ಡ ದಂಡು ವಲಸೆ ಹೋದ ಕುರಿತು ವಿವರ ಪಡೆಯಿತು. ಬಳಿಕ, ಗಡಿಯಿಂದ 80 ಕಿ.ಮೀ. ಒಳಕ್ಕೆ ಶರವೇಗದಲ್ಲಿ ಹೋಗಿ ದಾಳಿ ನಡೆಸಿ ಬರುವ ಯುದ್ಧ ವಿಮಾನ ಯಾವುದು ಎನ್ನುವ ಜಿಜ್ಞಾಸೆ ನಡೆಸಿದಾಗ, 'ಮಿರಾಜ್ 2000' ಆಯ್ಕೆಯಾಯಿತು. ಕಾಲಮಿತಿಯೊಳಗೆ ತ್ವರಿತವಾಗಿ ನಡೆದ ಈ ಸಿದ್ಧತೆ ಕುರಿತು ಕೊನೆ ಘಳಿಗೆವರೆಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.