ಫ್ರಾನ್ಸ್ ಭಯೋತ್ಪಾದಕ ದಾಳಿ ಖಂಡಿಸಿದ ಪ್ರಧಾನಿ: ಉಗ್ರವಾದದ ವಿರುದ್ಧ ಜಂಟಿ ಹೋರಾಟಕ್ಕೆ ಕರೆ!
ಫ್ರಾನ್ಸ್ನ ನೈಸ್ ನಗರದ ಚರ್ಚ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿರುವ ಪ್ರಧಾನಿ ಮೋದಿ, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
Vijaya Karnataka Web 29 Oct 2020, 8:47 pm
ಹೊಸದಿಲ್ಲಿ: ಫ್ರಾನ್ಸ್ನ ನೈಸ್ ನಗರದ ಚರ್ಚ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿರುವ ಪ್ರಧಾನಿ ಮೋದಿ, ಜಾಗತಿಕ ಉಗ್ರವಾದದ ವಿರುದ್ಧ ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದಿರುವ ಪ್ರಧಾನಿ ಮೋದಿ, ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ ಎಂದು ಹೇಳಿದರು.
ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ ಪ್ರಧಾನಿ ಮೋದಿ, ಮೃತರ ಕುಟುಂಬಕ್ಕೆ ಭಾರತ ಸಾಂತ್ವನ ಹೇಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಭೂತವಾದಿಗಳ ತಾಣವಾಗುತ್ತಿದೆ ಫ್ರಾನ್ಸ್: ಸರಣಿ ದಾಳಿಗಳ ಸ್ಥೂಲ ಪರಿಚಯ!
ಜಾಗತಿಕ ಭಯೋತ್ಪಾದನೆ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ. ಪರಸ್ಪರ ಸಹಕಾರದ ಮೂಲಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾಬವು ಯಶಸ್ಸು ಕಾಣಲಿದ್ದೇವೆ ಎಂದು ಪ್ರಧಾನಿ ಮೋದಿ ಈ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಸರಣಿ ಭಯೋತ್ಪಾದಕ ದಾಳಿಗಳು ಖಂಡನೀಯವಾಗಿದ್ದು, ಭಯೋತ್ಪಾದನೆ ನಿರ್ಮೂಲನೆಗಾಗಿ ಫ್ರಾನ್ಸ್ ಜನತೆ ನಡೆಸುತ್ತಿರುವ ದಿಟ್ಟ ಹೋರಾಟವನ್ನು ಶ್ಲಾಘಿಸಿರುವುದಾಗಿ ಪ್ರಧಾನಿ ಮೋದಿ ನುಡಿದಿದ್ದಾರೆ.
ಫ್ರಾನ್ಸ್ನ ಚರ್ಚ್ನಲ್ಲಿ ಮಹಿಳೆಯ ಶಿರಚ್ಛೇದ: ಆಗಂತುಕನ ದಾಳಿಗೆ ಮೂವರು ಬಲಿ!
ಫ್ರಾನ್ಸ್ನ ನೈಸ್ ನಗರದ ನೋಟ್ರೆ ಡಾಮೆ ಚರ್ಚ್ಗೆ ಹರಿತವಾದ ಚಾಕುವಿನೊಂದಿಗೆ ನುಗ್ಗಿದ ಆಗಂತುಕ, ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯೋರ್ವಳ ಶಿರಚ್ಛೇದ ಮಾಡಿದ್ದಲ್ಲದೇ ಇತರ ಇಬ್ಬರನ್ನು ಇರಿದು ಕೊಂದಿರುವುದನ್ನು ಇಲ್ಲಿ ಸ್ಮರಿಸಬಹುದು.
ನೈಸ್ ನಗರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಭಾರತ ಖಂಡಿಸುತ್ತದೆ ಎಂದಿರುವ ಪ್ರಧಾನಿ ಮೋದಿ, ಫ್ರಾನ್ಸ್ ಜನತೆಯ ದು:ಖದಲ್ಲಿ ಭಾರತ ಪಾಲುದಾರ ಎಂದು ಹೇಳಿದರು.
ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದ ಪ್ರಧಾನಿ ಮೋದಿ, ಮೃತರ ಕುಟುಂಬಕ್ಕೆ ಭಾರತ ಸಾಂತ್ವನ ಹೇಳುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಭೂತವಾದಿಗಳ ತಾಣವಾಗುತ್ತಿದೆ ಫ್ರಾನ್ಸ್: ಸರಣಿ ದಾಳಿಗಳ ಸ್ಥೂಲ ಪರಿಚಯ!
ಜಾಗತಿಕ ಭಯೋತ್ಪಾದನೆ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಭಾರತ-ಫ್ರಾನ್ಸ್ ಜಂಟಿಯಾಗಿ ಹೋರಾಡಲಿವೆ. ಪರಸ್ಪರ ಸಹಕಾರದ ಮೂಲಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾಬವು ಯಶಸ್ಸು ಕಾಣಲಿದ್ದೇವೆ ಎಂದು ಪ್ರಧಾನಿ ಮೋದಿ ಈ ವೇಳೆ ಭರವಸೆ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಸರಣಿ ಭಯೋತ್ಪಾದಕ ದಾಳಿಗಳು ಖಂಡನೀಯವಾಗಿದ್ದು, ಭಯೋತ್ಪಾದನೆ ನಿರ್ಮೂಲನೆಗಾಗಿ ಫ್ರಾನ್ಸ್ ಜನತೆ ನಡೆಸುತ್ತಿರುವ ದಿಟ್ಟ ಹೋರಾಟವನ್ನು ಶ್ಲಾಘಿಸಿರುವುದಾಗಿ ಪ್ರಧಾನಿ ಮೋದಿ ನುಡಿದಿದ್ದಾರೆ.
ಫ್ರಾನ್ಸ್ನ ಚರ್ಚ್ನಲ್ಲಿ ಮಹಿಳೆಯ ಶಿರಚ್ಛೇದ: ಆಗಂತುಕನ ದಾಳಿಗೆ ಮೂವರು ಬಲಿ!
ಫ್ರಾನ್ಸ್ನ ನೈಸ್ ನಗರದ ನೋಟ್ರೆ ಡಾಮೆ ಚರ್ಚ್ಗೆ ಹರಿತವಾದ ಚಾಕುವಿನೊಂದಿಗೆ ನುಗ್ಗಿದ ಆಗಂತುಕ, ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯೋರ್ವಳ ಶಿರಚ್ಛೇದ ಮಾಡಿದ್ದಲ್ಲದೇ ಇತರ ಇಬ್ಬರನ್ನು ಇರಿದು ಕೊಂದಿರುವುದನ್ನು ಇಲ್ಲಿ ಸ್ಮರಿಸಬಹುದು.