ಆ್ಯಪ್ನಗರ

‘ವಿದೇಶಿ ನೆಲದಲ್ಲಿ ಭಾರತವನ್ನು ಪ್ರತಿನಿಧಿಸುವ ಪ್ರಧಾನಿಗೆ ಗೌರವ ಕೊಡಿ’: ತರೂರ್

ಪ್ರಧಾನಿ ಮೋದಿಯವರನ್ನು ಪರೋಕ್ಷವಾಗಿ ಹೊಗಳಿ ಸ್ವಪಕ್ಷೀಯರಿಗೆ ಕನ್‌ಫ್ಯೂಸ್ ಮಾಡುವ ಕಾಂಗ್ರೆಸ್ ನಾಯಕ ಶಶಿ ತರೂರ್, ಇದೀಗ ಮೋದಿ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ್ದಾರೆ. ಅಮೆರಿಕದಲ್ಲಿರುವ ಮೋದಿಗೆ ಕಾಂಗ್ರೆಸ್ ನಾಯಕರು ಯಾವಾಗ ಅಗೌರವ ತೋರಿದ್ದರೋ ಗೊತ್ತಿಲ್ಲ, ಆದ್ರೆ, ಪ್ರಧಾನಿಗೆ ಗೌರವ ಕೊಡಲೇಬೇಕು ಅನ್ನೋದು ತರೂರ್ ವಾದ.

TIMESOFINDIA.COM 22 Sep 2019, 3:51 pm
ಪುಣೆ (ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಅವರಿಗೆ ಗೌರವ ಕೊಡಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆಗ್ರಹಿಸಿದ್ದಾರೆ. ಪ್ರಧಾನಿ ಸ್ವದೇಶದಲ್ಲಿ ಇದ್ದಾಗ ಅವರನ್ನು ಪ್ರಶ್ನಿಸುವ ಹಕ್ಕು ನಮಗಿದೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web shashi taroor modi


‘ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಗೆ ನೆಹರು ಕಾರಣ’: ಇತಿಹಾಸ ಕೆದಕಿ ಮಾತಲ್ಲೇ ತಿವಿದ ಶಾ

ದೇಶಾದ್ಯಂತ ಏಕಭಾಷಾ ಸೂತ್ರದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, ತ್ರಿಭಾ‍ಷಾ ಸೂತ್ರಕ್ಕೆ ತಾವು ಬದ್ಧ ಎಂದಿದ್ದಾರೆ. ಭಾರತೀಯರಲ್ಲಿ ಬಹುಭಾಷಾ ಸಂವಹನ ಸಾಮರ್ಥ್ಯ ಬೆಳೆಯಬೇಕು ಅನ್ನೋದು ತರೂರ್ ಅಭಿಪ್ರಾಯ.

‘ಶಾರನ್ನು ಭೇಟಿಯಾಗಿದ್ದು ನೆರೆಪರಿಹಾರಕ್ಕಲ್ಲ, ಅನರ್ಹರ ಬಚಾವ್‌ಗಾಗಿ’: ಬಿಎಸ್‌ವೈಗೆ ಎಚ್ಡಿಕೆ ಚಾಟಿ

ಮಹಾರಾಷ್ಟ್ರದ ಪುಣೆಯಲ್ಲಿ ಅಖಿಲ ಭಾರತ ಕಾರ್ಯನಿರತ ಕಾಂಗ್ರೆಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, ದೇಶದಲ್ಲಿ ಹಿಂದಿ ಹೇರಿಕೆ, ಹಿಂದುತ್ವ ಹೇರಿಕೆ ಹಾಗೂ ಹಿಂದೂಸ್ತಾನ ಪದ ಬಳಕೆ ಅಪಾಯಕಾರಿ ಎಂದಿದ್ದಾರೆ. ದೇಶದ ಹಲವೆಡೆ ವರದಿಯಾಗುವ ಗುಂಪು ಹಲ್ಲೆ ಪ್ರಕರಣಗಳು ಹಿಂದಿತ್ವ ಹಾಗೂ ಭಗವಾನ್ ಶ್ರೀರಾಮರಿಗೆ ಮಾಡುವ ಅಪಮಾನ ಎಂದು ಶಶಿ ತರೂರ್ ಹೇಳಿದ್ದಾರೆ.

ಹೂಸ್ಟನ್‌ನಲ್ಲಿ ಮೋದಿ ಭೇಟಿಯಾಗಿ 370ನೇ ವಿಧಿ ರದ್ದತಿಗೆ ಧನ್ಯವಾದ ಅರ್ಪಿಸಿದ ಕಾಶ್ಮೀರಿ ಪಂಡಿತರು

ಹಿಂದಿ ಹೇರಿಕೆ ಕುರಿತ ತಮ್ಮ ಅಭಿಪ್ರಾಯ ವಿವಾದದ ಸ್ವರೂಪ ಪಡೆದ ಬಗ್ಗೆ ಕಳೆದ ವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅಮಿತ್ ಶಾ, ತಾವು ಹಿಂದಿಯನ್ನು 2ನೇ ಭಾಷೆಯನ್ನಾಗಿ ಕಲಿಯಬೇಕೆಂದು ಹೇಳಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.

ಮಗಳು ನಿಮ್ಮ ಮಡಿಲಿನಾಚೆ ಬೆಳೆಯಬಹುದು. ಆದ್ರೆ, ಹೃದಯದಾಚೆಯಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ