ಆ್ಯಪ್ನಗರ

‘ಸ್ಮಾರ್ಟ್‌ಗಾಂವ್‌’ ಆ್ಯಪ್‌ ಅಭಿವೃದ್ಧಿ: ಭಾರತೀಯ ಟೆಕ್ಕಿಗಳಿಗೆ ಮೋದಿ ಪ್ರಶಂಸೆ

ಕೃಷಿಕರಿಗೆ ಉಪಯೋಗವಾಗುವಂತೆ ಭಾರತದ ಮೊದಲ 'ಸ್ಮಾರ್ಟ್‌ಗಾಂವ್‌' ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ ಇಬ್ಬರು ಭಾರತೀಯ ಟೆಕ್ಕಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

Vijaya Karnataka 31 Jul 2018, 11:02 am
ಹೊಸದಿಲ್ಲಿ: ಕೃಷಿಕರಿಗೆ ಉಪಯೋಗವಾಗುವಂತೆ ಭಾರತದ ಮೊದಲ 'ಸ್ಮಾರ್ಟ್‌ಗಾಂವ್‌' ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ ಇಬ್ಬರು ಭಾರತೀಯ ಟೆಕ್ಕಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Vijaya Karnataka Web modi


ರೈತರಿಗೆ ಮಾಹಿತಿ ಕೇಂದ್ರ ಮತ್ತು ಮಾರುಕಟ್ಟೆ ಸ್ಥಳವಾಗಿರುವ 'ಸ್ಮಾರ್ಟ್‌ಗಾಂವ್‌' ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಎಂಜಿನಿಯರ್‌ಗಳಾದ ಯೋಗೇಶ್‌ ಸಾಹು ಹಾಗೂ ರಾಜನೀಶ್‌ ಬಜ್ಪೆ ಅವರ ಕುರಿತು ತಮ್ಮ 'ಮನ್‌ ಕಿ ಬಾತ್‌' ಬಾನುಲಿ ಕಾರ್ಯಕ್ರಮದಲ್ಲಿ ಮೋದಿ ಪ್ರಸ್ತಾಪಿಸಿದ್ದಾರೆ.''ಸ್ಮಾರ್ಟ್‌ಗಾಂವ್‌ ಅಪ್ಲಿಕೇಶನ್‌ ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್‌ ಕ್ರಾಂತಿಯನ್ನು ತರುತ್ತಿದೆ. ಅಮೆರಿಕದಲ್ಲಿ ನೆಲೆಸಿದ್ದರೂ ತಮ್ಮ ದೇಶದ ಹಳ್ಳಿಗಳ ಕುರಿತು ಚಿಂತಿಸುತ್ತಿರುವ ಯುವ ಎಂಜಿನಿಯರ್‌ಗಳ ಸಾಧನೆ ಶ್ಲಾಘನೀಯ,'' ಎಂದು ಹೇಳಿದ್ದಾರೆ.

ಸ್ಮಾರ್ಟ್‌ಗಾಂವ್‌ ಅಪ್ಲಿಕೇಶನ್‌ ಗ್ರಾಮಸ್ಥರನ್ನು ಇಡೀ ವಿಶ್ವದೊಂದಿಗೆ ಸಂಪರ್ಕಿಸುವುದಲ್ಲದೇ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಾಯ್‌ಬರೇಲಿಯ ತೌಧಕ್ಪುರ ಗ್ರಾಮದ ನಿವಾಸಿಗಳು, ಗ್ರಾಮದ ಮುಖ್ಯಸ್ಥ, ಜಿಲ್ಲೆಯ ಮ್ಯಾಜಿಸ್ಪ್ರೇಟ್‌ ಮತ್ತು ಸಿಡಿಒ, ಈ ಆ್ಯಪ್‌ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ತೌಧಕ್ಪುರ ಭಾರತದ ಮೊದಲ ಸ್ಮಾರ್ಟ್‌ಗಾಂವ್‌ ಗ್ರಾಮವಾಗಿದೆ. ಈ ಹಳ್ಳಿ ಸಿಸಿಟಿವಿ ಕ್ಯಾಮೆರಾ, ಸಾರ್ವಜನಿಕ ಸಂಪರ್ಕ ವ್ಯವಸ್ಥೆ, ಬೀದಿ ದೀಪಗಳು, ನಿಯಮಿತ ಆರೋಗ್ಯ ತಪಾಸಣೆ ಶಿಬಿರಗಳು, ಬಹುತೇಕ ನಿರಂತರ ವಿದ್ಯುತ್‌ ಪೂರೈಕೆ ಮತ್ತು ವೈಫೈ ಸೌಲಭ್ಯ ಹೊಂದಿದೆ. ಗ್ರಾಮದಲ್ಲಿ ಕೈಗೊಳ್ಳಲಾದ ಎಲ್ಲಾ ಉಪ ಕ್ರಮಗಳನ್ನು ಅಪ್ಲಿಕೇಶನ್‌ನಲ್ಲಿ ದಾಖಲಿಸಲಾಗಿದ್ದು, ಆ್ಯಪ್‌ ಮೂಲಕ ಇದರ ಮೇಲ್ವಿಚಾರಣೆ ನಡೆಸಲಾಗುತ್ತದೆ. ಆ್ಯಪ್‌ ಗ್ರಾಮಸ್ಥರ ಮಾಹಿತಿ, ಸುದ್ದಿ, ಕ್ಯಾಲೆಂಡರ್‌, ಆರೋಗ್ಯ ಮತ್ತು ಮಾಹಿತಿ ಕೇಂದ್ರ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೇ ಆ್ಯಪ್‌ನ 'ಗ್ರಾಮ್‌ ಮಾರ್ಟ್‌' ವೈಶಿಷ್ಟ್ಯವು ಕೃಷಿ ಉತ್ಪನ್ನಗಳಿಗೆ ಜನಪ್ರಿಯ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಛತ್ತೀಸ್‌ಗಢ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಆರು ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಕಾರ್ಯದಲ್ಲಿ ಪ್ರಸ್ತುತ ಸಾಹು ಮತ್ತು ಬಜ್ಪೆ ನಿರತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ